ಶಿವಮೊಗ್ಗ ಸಿಟಿಯ ಡೇಂಜರಸ್‌ ತಿರುವು, ಸ್ವಲ್ಪ ಮೈಮರೆತರೆ ವಾಹನ ಸವಾರರು ಗ್ಯಾರಂಟಿ ಆಸ್ಪತ್ರೆ ಪಾಲು

ಶಿವಮೊಗ್ಗ: ಇದು ಶಿವಮೊಗ್ಗ ಸಿಟಿಯ ಡೇಂಜರಸ್‌ ತಿರುವು. ಇಲ್ಲಿ ಸ್ವಲ್ಪ ಮೈಮರೆತರೆ ಕೈ, ಕಾಲು ಮುರಿದುಕೊಳ್ಳುವುದು ಫಿಕ್ಸ್.‌ (Potholes)

ಶಿವಮೊಗ್ಗದ ಕೆ.ಇ.ಬಿ ಸರ್ಕಲ್‌ನಲ್ಲಿರುವ ಈ ತಿರುವಿನಲ್ಲಿ ರಸ್ತೆ ಬಾಯ್ತೆರೆದು ನೆತ್ತರು ಹೀರಿ ದಾಹ ನೀಗಿಸಿಕೊಳ್ಳಲು ಹೊಂಚು ಹಾಕುತ್ತಿದೆ. ತಿರುವಿನಲ್ಲಿ, ಕತ್ತಲಲ್ಲಿ ಅವಿತು ಕುಳಿತಂತಿರುವ ಈ ಗುಂಡಿಗಳು, ದೊಡ್ಡ ಅನಾಹುತಕ್ಕೆ ಕಾರಣವಾಗುವ ಸಾಧ್ಯತೆ ಇದೆ.  

ನಿತ್ಯ ಸಾವಿರಾರು ವಾಹನ ಸಂಚಾರ

ಕೆ.ಇ.ಬಿ ಸರ್ಕಲ್‌ನಿಂದ ಸಂಗೊಳ್ಳಿ ರಾಯಣ್ಣ ವೃತ್ತದ ಕಡೆಗೆ ತೆರಳುವ ಮಾರ್ಗದಲ್ಲಿ ಈ ಗುಂಡಿಗಳಿವೆ. ರೈಲ್ವೆ ನಿಲ್ದಾಣದ ಕಡೆಯಿಂದ ಸಂಗೊಳ್ಳಿ ರಯಣ್ಣ ಸರ್ಕಲ್‌ ಕಡೆಗೆ ತೆರಳುವವರಿಗೆ ಮೊದಲು ಅದ್ಧೂರಿ ಸ್ವಾಗತ ಕೋರುವುದೇ ಈ ಗುಂಡಿಗಳು. ಬೆಳಗಿನ ಹೊತ್ತು ಗುಂಡಿಯ ಆಳ ಅಗಲ ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ ರಾತ್ರಿಯ ಪರಿಸ್ಥಿತಿ ಅತ್ಯಂತ ಭಯಾನಕ.

KEB-circle-Potholes-in-shimoga-city

ಇದನ್ನೂ ಓದಿ » ಶಿವಮೊಗ್ಗ ಸಿಟಿಯ ಈ ರಸ್ತೆಯಲ್ಲಿ ಸಂಚರಿಸುವುದಷ್ಟೆ ಅಲ್ಲ ಅಕ್ಕಪಕ್ಕ ನಿಲ್ಲುವುದೂ ಡೇಂಜರ್‌, ಏನಿದು?

ತಿರುವಿನಲ್ಲಿ ಲೈಟ್‌ ಇಲ್ಲ. ಅನತಿ ದೂರದಲ್ಲಿರುವ ಬೀದಿ ದೀಪದ ಬೆಳಕು ಈ ಗುಂಡಿಗಳ ಸುಳಿಯುವುದಿಲ್ಲ. ಹಾಗಾಗಿ ಸಂಜೆ ನಂತರ ಇಲ್ಲಿ ಗುಂಡಿಗಳಿವೆ ಅನ್ನುವುದೇ ವಾಹನ ಚಾಲಕರಿಗೆ ಗೊತ್ತಾಗುವುದಿಲ್ಲ. ನಿತ್ಯ ಸಾವಿರಾರು ವಾಹನಗಳು ಇಲ್ಲಿ ಸಂಚರಿಸುತ್ತವೆ. ಹೀಗಿದ್ದು ಬೃಹತ್‌ ಗುಂಡಿಗಳಿಗೆ ಮುಕ್ತಿ ನೀಡುವತ್ತ ಅಧಿಕಾರಿಗಳು ಗಮನ ಹರಿಸಿಲ್ಲ.

ರಾತ್ರಿ ಇಲ್ಲಿ ಗುಂಡಿ ಇರುವುದೇ ಗೊತ್ತಾಗುವುದಿಲ್ಲ. ಬೈಕ್‌ ಸವಾರರು ಅತ್ಯಂತ ನಾಜೂಕಾಗಿ ಚಲಾಯಿಸಬೇಕು. ಇಲ್ಲವಾದಲ್ಲಿ ಬ್ಯಾಲೆನ್ಸ್‌ ತಪ್ಪಿ ಕೆಳಗೆ ಬೀಳುತ್ತಾರೆ. ಕಳೆದ ವಾರ ಇದೇ ಗುಂಡಿಯಲ್ಲಿ ಯುವತಿಯೊಬ್ಬಳು ಬಿದ್ದಿದ್ದಳು. ಆಕೆಗೆ ನಾವೆ ನೆರವಾಗಿದ್ದೆವು.ಮೊಹಮದ್‌ ಇರ್ಫಾನ್‌, ಸ್ಥಳೀಯ

ಮಳೆ ಬಳಿಕ ಪರಿಸ್ಥಿತಿ ಬದಲು

ಈ ಹಿಂದೆಯು ಇಲ್ಲಿ ದೊಡ್ಡ ಗಾತ್ರದ ಗುಂಡಿಗಳಾಗಿದ್ದವು. ಆಗ ಶಿವಮೊಗ್ಗ ಲೈವ್.ಕಾಂ ವರದಿ ಪ್ರಕಟಿಸಿತ್ತು. ಇದರ ಬಳಿಕ ಗುಂಡಿಗಳಿಗೆ ತೇಪೆ ಹಾಕಲಾಗಿತ್ತು. ಆದರೆ ಈಚೆಗೆ ಸುರಿದ ಮಳೆ ಮತ್ತೆ ರಸ್ತೆಯಲ್ಲಿ ಗುಂಡಿಗಳಾಗುವಂತೆ ಮಾಡಿದೆ. ಕೂಡಲೆ ಈ ಗುಂಡಿಗಳನ್ನು ಮುಚ್ಚಿ ಸಂಭಾವ್ಯ ಅಪಘಾತ ತಡೆಯಬೇಕಿದೆ.

Potholes at KEB Circle in Shimoga city

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : August 22, 2025 at 7:44 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಆಗಷ್ಟ್ 22, 2025

Leave a Comment