ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಇದು ಶಿವಮೊಗ್ಗ ಸಿಟಿಯ ಡೇಂಜರಸ್ ತಿರುವು. ಇಲ್ಲಿ ಸ್ವಲ್ಪ ಮೈಮರೆತರೆ ಕೈ, ಕಾಲು ಮುರಿದುಕೊಳ್ಳುವುದು ಫಿಕ್ಸ್. (Potholes)
ಶಿವಮೊಗ್ಗದ ಕೆ.ಇ.ಬಿ ಸರ್ಕಲ್ನಲ್ಲಿರುವ ಈ ತಿರುವಿನಲ್ಲಿ ರಸ್ತೆ ಬಾಯ್ತೆರೆದು ನೆತ್ತರು ಹೀರಿ ದಾಹ ನೀಗಿಸಿಕೊಳ್ಳಲು ಹೊಂಚು ಹಾಕುತ್ತಿದೆ. ತಿರುವಿನಲ್ಲಿ, ಕತ್ತಲಲ್ಲಿ ಅವಿತು ಕುಳಿತಂತಿರುವ ಈ ಗುಂಡಿಗಳು, ದೊಡ್ಡ ಅನಾಹುತಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ನಿತ್ಯ ಸಾವಿರಾರು ವಾಹನ ಸಂಚಾರ
ಕೆ.ಇ.ಬಿ ಸರ್ಕಲ್ನಿಂದ ಸಂಗೊಳ್ಳಿ ರಾಯಣ್ಣ ವೃತ್ತದ ಕಡೆಗೆ ತೆರಳುವ ಮಾರ್ಗದಲ್ಲಿ ಈ ಗುಂಡಿಗಳಿವೆ. ರೈಲ್ವೆ ನಿಲ್ದಾಣದ ಕಡೆಯಿಂದ ಸಂಗೊಳ್ಳಿ ರಯಣ್ಣ ಸರ್ಕಲ್ ಕಡೆಗೆ ತೆರಳುವವರಿಗೆ ಮೊದಲು ಅದ್ಧೂರಿ ಸ್ವಾಗತ ಕೋರುವುದೇ ಈ ಗುಂಡಿಗಳು. ಬೆಳಗಿನ ಹೊತ್ತು ಗುಂಡಿಯ ಆಳ ಅಗಲ ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ ರಾತ್ರಿಯ ಪರಿಸ್ಥಿತಿ ಅತ್ಯಂತ ಭಯಾನಕ.

ಇದನ್ನೂ ಓದಿ » ಶಿವಮೊಗ್ಗ ಸಿಟಿಯ ಈ ರಸ್ತೆಯಲ್ಲಿ ಸಂಚರಿಸುವುದಷ್ಟೆ ಅಲ್ಲ ಅಕ್ಕಪಕ್ಕ ನಿಲ್ಲುವುದೂ ಡೇಂಜರ್, ಏನಿದು?
ತಿರುವಿನಲ್ಲಿ ಲೈಟ್ ಇಲ್ಲ. ಅನತಿ ದೂರದಲ್ಲಿರುವ ಬೀದಿ ದೀಪದ ಬೆಳಕು ಈ ಗುಂಡಿಗಳ ಸುಳಿಯುವುದಿಲ್ಲ. ಹಾಗಾಗಿ ಸಂಜೆ ನಂತರ ಇಲ್ಲಿ ಗುಂಡಿಗಳಿವೆ ಅನ್ನುವುದೇ ವಾಹನ ಚಾಲಕರಿಗೆ ಗೊತ್ತಾಗುವುದಿಲ್ಲ. ನಿತ್ಯ ಸಾವಿರಾರು ವಾಹನಗಳು ಇಲ್ಲಿ ಸಂಚರಿಸುತ್ತವೆ. ಹೀಗಿದ್ದು ಬೃಹತ್ ಗುಂಡಿಗಳಿಗೆ ಮುಕ್ತಿ ನೀಡುವತ್ತ ಅಧಿಕಾರಿಗಳು ಗಮನ ಹರಿಸಿಲ್ಲ.
[su_quote cite=”ಮೊಹಮದ್ ಇರ್ಫಾನ್, ಸ್ಥಳೀಯ”]ರಾತ್ರಿ ಇಲ್ಲಿ ಗುಂಡಿ ಇರುವುದೇ ಗೊತ್ತಾಗುವುದಿಲ್ಲ. ಬೈಕ್ ಸವಾರರು ಅತ್ಯಂತ ನಾಜೂಕಾಗಿ ಚಲಾಯಿಸಬೇಕು. ಇಲ್ಲವಾದಲ್ಲಿ ಬ್ಯಾಲೆನ್ಸ್ ತಪ್ಪಿ ಕೆಳಗೆ ಬೀಳುತ್ತಾರೆ. ಕಳೆದ ವಾರ ಇದೇ ಗುಂಡಿಯಲ್ಲಿ ಯುವತಿಯೊಬ್ಬಳು ಬಿದ್ದಿದ್ದಳು. ಆಕೆಗೆ ನಾವೆ ನೆರವಾಗಿದ್ದೆವು.[/su_quote]
ಮಳೆ ಬಳಿಕ ಪರಿಸ್ಥಿತಿ ಬದಲು
ಈ ಹಿಂದೆಯು ಇಲ್ಲಿ ದೊಡ್ಡ ಗಾತ್ರದ ಗುಂಡಿಗಳಾಗಿದ್ದವು. ಆಗ ಶಿವಮೊಗ್ಗ ಲೈವ್.ಕಾಂ ವರದಿ ಪ್ರಕಟಿಸಿತ್ತು. ಇದರ ಬಳಿಕ ಗುಂಡಿಗಳಿಗೆ ತೇಪೆ ಹಾಕಲಾಗಿತ್ತು. ಆದರೆ ಈಚೆಗೆ ಸುರಿದ ಮಳೆ ಮತ್ತೆ ರಸ್ತೆಯಲ್ಲಿ ಗುಂಡಿಗಳಾಗುವಂತೆ ಮಾಡಿದೆ. ಕೂಡಲೆ ಈ ಗುಂಡಿಗಳನ್ನು ಮುಚ್ಚಿ ಸಂಭಾವ್ಯ ಅಪಘಾತ ತಡೆಯಬೇಕಿದೆ.
Potholes at KEB Circle in Shimoga city
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ತಾಳಗುಪ್ಪ – ಮೈಸೂರು ಎಕ್ಸ್ಪ್ರೆಸ್ನಲ್ಲಿ ಲಕ್ಷ ಲಕ್ಷದ ಚಿನ್ನಾಭರಣ ಬಿಟ್ಟು ಇಳಿದ ಮಹಿಳೆ

- ಶಿವಮೊಗ್ಗದಲ್ಲಿ ಎಷ್ಟಿದೆ ಇವತ್ತಿನ ಅಡಿಕೆ ರೇಟ್? 16 ಮಾರ್ಚ್ 2026 – ಅಡಿಕೆ ಧಾರಣೆ

- ತೀರ್ಥಹಳ್ಳಿ ಮಹಿಳೆಯರಿಗೆ ಮೊದಲ ಮೂರು ಬಹುಮಾನ, ಹೇಗಿತ್ತು ಸ್ಪರ್ಧೆ? ವಿಜೇತರು ಯಾರು?

- ಶಿವಮೊಗ್ಗ ಕೆಎಸ್ಆರ್ಟಿಸಿ ನಿಲ್ದಾಣದಲ್ಲಿ ಅಪಘಾತ, ಯುವಕನಿಗೆ ಬಸ್ ಡಿಕ್ಕಿ, ಆಗಿದ್ದೇನು?

- ಶಿವಮೊಗ್ಗದ ಇಂಜಿನಿಯರ್ಗೆ ಸಂಕಷ್ಟ ತಂದ ಮರೆವು, ಫ್ಲೈ ಓವರ್ ಬಳಿ ಆಗಿದ್ದೇನು? ಕೇಸ್ ದಾಖಲು

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು














