ಸಾಗರ: ತಾಳಗುಪ್ಪ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ (health center) ವೈದ್ಯರ ಕೊರತೆ ನಿವಾರಿಸಿ ಎಂದು ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಮಸ್ಥರ ಆಗ್ರಹ, ಎಚ್ಚರಿಕೆಗಳೇನು?
ಆರೋಗ್ಯ ಕೇಂದ್ರದಲ್ಲಿ ಬಹುಕಾಲದಿಂದ ವೈದ್ಯರ ಕೊರತೆ ಇದೆ. ಎರಡು ಮೂರು ದಿನಕ್ಕೊಮ್ಮೆ ವೈದ್ಯರು ಬರುತ್ತಾರೆ. ಕೆಲ ದಿನಗಳ ನಂತರ ಅವರೇ ಬದಲಾಗುವ ಸ್ಥಿತಿ ಇದೆ.
ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರಿಗೆ ಸಮರ್ಪಕ ಸೇವೆ ದೊರಕುತ್ತಿಲ್ಲ. ವೈದ್ಯರ ಜೊತೆಗೆ ಸಿಬ್ಬಂದಿ ಕೊರತೆಯೂ ಇದೆ. ಕಾಯಂ ವೈದ್ಯರು ಹಾಗೂ ಸಿಬ್ಬಂದಿ ನೇಮಿಸಬೇಕು.
ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ. ಶೀಘ್ರದಲ್ಲೇ ಈ ಸಮಸ್ಯೆ ಬಗೆಹರಿಸದಿದ್ದರೆ ಆರೋಗ್ಯ ಕೇಂದ್ರಕ್ಕೆ ಬೀಗ ಹಾಕುತ್ತೇವೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಿನಾರಾಯಣ ಬೆಕ್ಕೋಡ್, ಮುರಳಿ ಬಲೆಗಾರು, ಸಂತೋಷ್ ಕೆಲವೆ, ಅಶೋಕ್ ಪಡವಗೋಡು ಇದ್ದರು.
ಇದನ್ನೂ ಓದಿ » ಚನ್ನಪಟ್ಟಣದ ಯುವಕ, ನಾಗಮಂಗಲದಲ್ಲಿ ವಿವಾಹ, ರಿಪ್ಪನ್ಪೇಟೆಯಲ್ಲಿ ದಾಖಲಾಯ್ತು ಪ್ರಕರಣ, ಕಾರಣವೇನು?
protest in front of talagauppa health center







