ಭದ್ರಾವತಿ: ಕಳೆದ ಮೂರು ದಿನದಿಂದ ನಾಪತ್ತೆಯಾಗಿದ್ದ ಯುವತಿ (Young Woman) ಶವವಾಗಿ ಪತ್ತೆಯಾಗಿದ್ದಾಳೆ. ಇಲ್ಲಿನ ಉಕ್ಕುಂದ ಸೇತುವೆ ಬಳಿ ಭದ್ರಾ ನಲೆಯಲ್ಲಿ ಆಕೆಯ ಮೃತದೇಹ ಸಿಕ್ಕಿದೆ.
ಅಂತರಗಂಗೆಯ ಭೋವಿ ಕಾಲೋನಿಯ ಸ್ವಾತಿ (19) ಮೃತಳು. ಭದ್ರಾ ನಾಲೆಗೆ ಜಿಗಿದಿರುವ ಶಂಕೆ ಮೇರೆಗೆ ಈಕೆಗಾಗಿ ಶೋಧ ಕಾರ್ಯ ನಡೆಸಲಾಗಿತ್ತು. ಮೂರು ದಿನದ ಬಳಿಕ ಸ್ವಾತಿಯ ಮೃತದೇಹ ಪತ್ತೆಯಾಗಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಪ್ರಿಯತಮನ ಜೊತೆಗೆ ಜಿಗಿದ ಶಂಕೆ
ಇನ್ನು, ಅಂತರಗಂಗೆ ಭೋವಿ ಕಾಲೋನಿಯ ಸ್ವಾತಿ ಮತ್ತು ಸೂರ್ಯ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಇವರ ಪ್ರೀತಿಗೆ ಕುಟುಂಬದವರ ವಿರೋಧವಿತ್ತು. ಇದೇ ಕಾರಣಕ್ಕೆ ಇಬ್ಬರು ವಿಷ ಸೇವಿಸಿ ಭದ್ರಾ ನಾಲೆಗೆ ಜಿಗದಿದ್ದಾರೆ ಎಂದು ಆರೋಪಿಸಲಾಗಿದೆ. ಸೂರ್ಯ ಪಾರಾಗಿದ್ದು ಆತನನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನೆ ಸಂಬಂಧ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಇದನ್ನೂ ಓದಿ » ಹಿಂದೆ ಬರುತ್ತಿದ್ದ ಪೊಲೀಸ್ ಜೀಪ್ ಕಂಡು ಲಾರಿ ನಿಲ್ಲಿಸಿ ಡ್ರೈವರ್ ಎಸ್ಕೇಪ್, ಕಾರಣವೇನು?
Looking for news on a tragic discovery in Bhadravati? Learn about the missing young woman whose body was found in the Bhadra River canal near the Ukkunda bridge.
