ಭದ್ರಾವತಿ: ಮೊಬೈಲ್ ಸರ್ವಿಸ್ ಸೆಂಟರ್ ಒಂದರ ಬಾಗಿಲಿನ ಬೀಗ ಒಡೆದು ಮೊಬೈಲ್ ಫೋನ್ಗಳು, ಇಯರ್ ಬಡ್ಸ್, ಸ್ಮಾರ್ಟ್ ವಾಚ್ಗಳು ಸೇರಿ ಹಲವು ವಸ್ತುಗಳು ಕಳ್ಳತನವಾಗಿವೆ ಎಂದು ಆರೋಪಿಸಲಾಗಿದೆ.
ಸುದ್ದಿಯ ಮುಂದಿನ ಭಾಗ ಕೆಳಗಿದೆ
ಯಡೇಹಳ್ಳಿ ಸರ್ಕಲ್ನಲ್ಲಿರುವ ಎನ್.ಎಸ್.ಮೊಬೈಲ್ ಸರ್ವಿಸ್ ಪಾಯಿಂಟ್ನಲ್ಲಿ ಕಳ್ಳತನವಾಗಿದೆ. ಮಾಲೀಕ ನ್ಯಾಮತುಲ್ಲಾ ಅವರು ಎಂದಿನಂತೆ ಬೆಳಗ್ಗೆ 10.30ಕ್ಕೆ ಅಂಗಡಿ ಬಾಗಿಲು ತೆರೆಯಲು ಬಂದಾಗ ಬೀಗ ಮುರಿದಿರುವುದು ಗೊತ್ತಾಗಿದೆ. ಪರಿಶೀಲಿಸಿದಾಗ ₹76,500 ಮೌಲ್ಯದ ವಸ್ತುಗಳು ಕಳ್ಳತನವಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ರಿಪೇರಿಗೆ ಬಂದಿದ್ದ 8 ಹಳೆಯ ಮೊಬೈಲ್ ಫೋನ್ಗಳು, 15 ಕೀ ಪ್ಯಾಡ್ ಮೊಬೈಲ್ ಫೋನುಗಳು, 20 ನೆಕ್ ಬ್ಯಾಂಡ್, 30 ಇಯರ್ ಬಡ್ಸ್, 15 ಸ್ಮಾರ್ಟ್ ವಾಚುಗಳು, ಮಾನಿಟರ್, ₹6000 ನಗದು ಕಳ್ಳತನವಾಗಿವೆ ಎಂದು ಆರೋಪಿಸಲಾಗಿದೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಟ್ಯಾಂಕರ್ ಡಿಕ್ಕಿ, ಅರಣ್ಯ ಕಾವಲುಗಾರ ಸಾವು, ಎಲ್ಲಿ? ಹೇಗಾಯ್ತು ಘಟನೆ?

