ಕುಟುಂಬದವರೆಲ್ಲ ಮಲಗಿದ್ದಾಗಲೇ ಮನೆಯಲ್ಲಿ ಕಳ್ಳತನ, ಲಕ್ಷ ಲಕ್ಷದ ಚಿನ್ನಾಭರಣ, ಹಣ ನಾಪತ್ತೆ, ಹೇಗಾಯ್ತು ಘಟನೆ?

ತೀರ್ಥಹಳ್ಳಿ: ಕೋಣಂದೂರಿನ ಸೊನಗಾರರೆ ಕೇರಿಯ ಮನೆಯೊಂದರಲ್ಲಿ ಮಧ್ಯರಾತ್ರಿ ಕಳ್ಳರು ಮನೆಯೊಂದರ ಹಿಂಬಾಗಿಲು ಮುರಿದು ಬೀರುವಿನಲ್ಲಿದ್ದ ₹6.90 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದೊಯ್ದಿದ್ದಾರೆ (thieves steal).➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಹಿಂಬಾಗಿಲಿನಿಂದ ಸೀತಾರಾಮ್ ಎಂಬುವವರ ಮನೆಯೊಳಕ್ಕೆ ಪ್ರವೇಶಿಸಿದ ಕಳ್ಳರು ಬೀಗ ಹಾಕದ ಬೀರುವಿನಲ್ಲಿದ್ದ ₹40,000 ನಗದು, ಇನ್ನೊಂದು ಬೀರುವಿನಲ್ಲಿದ್ದ ಮಾಂಗಲ್ಯ ಸರ, ಚಿನ್ನದ ಸರ, ಉಂಗುರ, ಕಿವಿಯೋಲೆ ಕದ್ದೊಯ್ದಿದ್ದಾರೆ. ಮನೆಯವರೆಲ್ಲರೂ ಮನೆಗಿದ್ದಾಗಲೇ ಈ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ.

KONANDUR-THIRTHAHALLI-NEWS

ಇದನ್ನೂ ಓದಿ » ಶಿವಮೊಗ್ಗದಲ್ಲಿ ಮಾಸ್ಟರ್‌ ಹೆಲ್ತ್‌ ಚೆಕ್‌ ಅಪ್‌ ಪ್ಯಾಕೇಜ್‌ಗೆ ಶೇ.25ರಷ್ಟು ರಿಯಾಯಿತಿ, ಏನೇನೆಲ್ಲ ಚೆಕ್‌ ಮಾಡ್ತಾರೆ?

ಬೆಳಗ್ಗೆ ಎದ್ದ ಕೂಡಲೇ ಚೆಲ್ಲಾಪಿಲ್ಲಿಯಾಗಿದ್ದ ಬೀರುವಿನೊಳಗಿನ ವಸ್ತುಗಳು ಹಾಗೂ ಹಿಂಬಾಗಿಲು ತೆರೆದಿರುವುದನ್ನು ಮನೆಯವರು ನೋಡಿದಾಗ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ. ತೀರ್ಥಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Leave a Comment