ಸಾಗರ ಮಾರಿಕಾಂಬಾ ದೇವಿ ಮೆರವಣಿಗೆ ನೋಡಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಆಘಾತ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಸಾಗರ: ಇಲ್ಲಿನ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿಯ ವನಕ್ಕೆ ಬಿಡುವ ಮೆರವಣಿಗೆಯ (procession) ಸಂದರ್ಭ ಕಳ್ಳರು ವ್ಯಕ್ತಿಯೊಬ್ಬರ ಕೊರಳಿನಲ್ಲಿದ್ದ ಚಿನ್ನದ ಸರ ಕಳ್ಳತನ ಮಾಡಿದ್ದಾರೆ. ಫೆಬ್ರವರಿ 12ರ ತಡರಾತ್ರಿ ಜೆ.ಸಿ. ರಸ್ತೆಯ ಶ್ರೀ ಕಾಳಿಕಾಂಬಾ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ

ಸಾಗರದ ಶ್ರೀಕಾಂತ್‌ ವಜ್ರ ಶೇಠ್‌ ಅವರು ಫೆಬ್ರವರಿ 12ರ ರಾತ್ರಿ 12.45 ರಿಂದ 1 ಗಂಟೆಯ ಸಮಯದಲ್ಲಿ ದೇವಿಯ ಮೆರವಣಿಗೆ ವೀಕ್ಷಿಸಲು ಕಾಳಿಕಾಂಬಾ ದೇವಸ್ಥಾನದ ಬಳಿ ನಿಂತಿದ್ದರು. ಈ ವೇಳೆ ಕಳ್ಳರು ಇವರ ಕೊರಳಿನಲ್ಲಿದ್ದ ಸುಮಾರು 19 ಗ್ರಾಂ ತೂಕದ ಬಂಗಾರದ ಚೈನ್ ಹಾಗೂ ಹವಳ ಸುತ್ತಿರುವ ಪದಕ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಮೆರವಣಿಗೆಯ ಗದ್ದಲದಲ್ಲಿ ಈ ಕೃತ್ಯ ನಡೆದಿದ್ದು, ಸರ ಕಳೆದುಕೊಂಡ ವಿಷಯ ತಡವಾಗಿ ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ – ಮೈಸೂರು – ತಾಳಗುಪ್ಪ ರೈಲುಗಳ ಕುರಿತು ಮಹತ್ವದ ಅಪ್‌ಡೇಟ್‌

ಕಳ್ಳತನವಾದ ಬಂಗಾರದ ಸರದ ಮೌಲ್ಯ ಸುಮಾರು ₹1,05,000 ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಶ್ರೀಕಾಂತ್‌ ವಜ್ರ ಶೇಠ್‌ ದೂರು ನೀಡಿದ್ದಾರೆ. ಸಾಗರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment