ಶಿವಮೊಗ್ಗ: ಕೋಟೆ ಮಾರಿಕಾಂಬ ಜಾತ್ರೆಯಲ್ಲಿ ಕುಟುಂಬದಿಂದ ಬೇರ್ಪಟ್ಟು ಕಳೆದುಹೋಗಿದ್ದ 80 ವರ್ಷದ ಮಹಿಳೆಯನ್ನು 112 ತುರ್ತು ಸ್ಪಂದನಾ ಪೊಲೀಸ್ (112 police) ಸಿಬ್ಬಂದಿ ಪತ್ತೆಹಚ್ಚಿ, ವಾಹನದಲ್ಲಿ ಅವರ ಮನೆಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ.
ಶುಕ್ರವಾರ ಮಧ್ಯರಾತ್ರಿ 12:30ರ ಹೊತ್ತಿಗೆ ವೃದ್ಧೆ ತಮ್ಮ ಸಂಬಂಧಿಕರೊಂದಿಗೆ ಮಾರಿಕಾಂಬಾ ಜಾತ್ರೆಗೆ ಬಂದಿದ್ದರು. ಆದರೆ ಜನದಟ್ಟಣೆಯ ನಡುವೆ ಅವರು ತಮ್ಮ ಕುಟುಂಬದವರಿಂದ ಬೇರ್ಪಟ್ಟು ದಾರಿ ತಪ್ಪಿದ್ದರು. ಈ ಬಗ್ಗೆ ಕುಟುಂಬದವರು 112ಗೆ ಮಾಹಿತಿ ನೀಡಿದ್ದರು.


ಕೂಡಲೇ ಕಾರ್ಯಪ್ರವೃತ್ತರಾದ ಇ.ಆರ್.ವಿ ಸಿಬ್ಬಂದಿ ಕೋಟೆ ಪೊಲೀಸ್ ಠಾಣೆಯ ಸಿಪಿಸಿ ಗಿರೀಶ್ ಮತ್ತು ಡಿ.ಎ.ಆರ್ ಶಿವಮೊಗ್ಗದ ಎ.ಹೆಚ್.ಸಿ ಚರಣ್ ಅವರು ತಕ್ಷಣ ಸ್ಥಳಕ್ಕೆ ಧಾವಿಸಿದರು. ಜಾತ್ರೆಯಲ್ಲಿ ಹುಡುಕಾಟ ನಡೆಸಿ ವೃದ್ಧೆಯನ್ನು ಪತ್ತೆಹಚ್ಚಿದ್ದಾರೆ. ಅಲ್ಲದೆ ವಿಳಾಸವನ್ನು ಖಚಿತಪಡಿಸಿಕೊಂಡ ಪೊಲೀಸ್ ಸಿಬ್ಬಂದಿ, ಅವರನ್ನು ಇ.ಆರ್.ವಿ ವಾಹನದಲ್ಲಿಯೇ ಕರೆದೊಯ್ದು ಮನೆಗೆ ಬಿಟ್ಟು ಬಂದಿದ್ದಾರೆ. ಪೊಲೀಸರ ಕಾರ್ಯಕ್ಕೆ ವೃದ್ಧೆಯ ಕುಟುಂಬದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ – ನಂದಿನಿ ಗ್ರಾಹಕರಿಗೆ ಗುಡ್ ನ್ಯೂಸ್, 1 ಕೆ.ಜಿ ಬಕೆಟ್ ಮೊಸರು ಮಾರುಕಟ್ಟೆಗೆ ಎಂಟ್ರಿ, ಎಷ್ಟಿರುತ್ತೆ ರೇಟ್?
