ಶಿವಮೊಗ್ಗ: ರಾಜ್ಯಾದ್ಯಂತ ಮೇ ತಿಂಗಳಲ್ಲಿ ಬಿಸಿಲಿನ ತಾಪಮಾನ (Heat Wave) ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆ ಜಾನುವಾರುಗಳ ಆರೋಗ್ಯ ಕಾಪಾಡಲು ಪಶುಪಾಲಕರು ಮುನ್ನೆಚ್ಚರಿಕೆ ವಹಿಸುವಂತೆ ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ತಿಳಿಸಿದ್ದಾರೆ.
ಪಶುಪಾಲಕರಿಗೆ ನೀಡಿದ ಸೂಚನೆಗಳೇನು?
- ನೆರಳಿನ ಆಸರೆ: ಮಧ್ಯಾಹ್ನದ ಕಡು ಬಿಸಿಲಿನಲ್ಲಿ ಜಾನುವಾರುಗಳನ್ನು ಮೇಯಲು ಬಿಡಬಾರದು. ಬದಲಿಗೆ ಮರಗಳ ಕೆಳಗೆ ಅಥವಾ ತಂಪಾದ ನೆರಳಿನ ಪ್ರದೇಶಗಳಲ್ಲಿ ಅವುಗಳನ್ನು ಕಟ್ಟಿಹಾಕಬೇಕು.
- ಕೊಟ್ಟಿಗೆಯ ತಂಪು: ಕೊಟ್ಟಿಗೆಯ ಮೇಲ್ಛಾವಣಿಯ ತಾಪಮಾನ ಕಡಿಮೆ ಮಾಡಲು ಸುಣ್ಣದ ಲೇಪನ ಮಾಡಬೇಕು ಅಥವಾ ತೆಂಗಿನ ಗರಿಗಳನ್ನು ಹೊದಿಸಬೇಕು.
- ದೇಹದ ಉಷ್ಣತೆ ನಿಯಂತ್ರಣ: ಮಧ್ಯಾಹ್ನದ ವೇಳೆ ಜಾನುವಾರುಗಳಿಗೆ ಒದ್ದೆಯಾದ ಗೋಣಿ ಚೀಲಗಳನ್ನು ಹೊದಿಸುವುದು ಉತ್ತಮ. ಜಾನುವಾರುಗಳ ಮೈಮೇಲೆ ನೀರನ್ನು ಸಿಂಪಡಿಸುವ ಮೂಲಕ ಅವುಗಳ ದೇಹವನ್ನು ತಂಪಾಗಿರಿಸಬೇಕು.
- ನೀರು ಮತ್ತು ಆಹಾರ: ಜಾನುವಾರುಗಳಿಗೆ ಕುಡಿಯಲು ಸದಾ ಕಾಲ ಸ್ವಚ್ಛ ಮತ್ತು ತಂಪಾದ ನೀರಿನ ವ್ಯವಸ್ಥೆ ಇರಬೇಕು. ಆಹಾರದಲ್ಲಿ ರಸಮೇವು, ಪೌಷ್ಟಿಕಾಂಶದ ಪೂರಕಗಳನ್ನು ನೀಡಲು ಗಮನ ಹರಿಸಬೇಕು.
- ಕೀಟಗಳ ನಿಯಂತ್ರಣ: ಕೊಟ್ಟಿಗೆಯಲ್ಲಿ ಸೊಳ್ಳೆ ಮತ್ತು ಕೀಟಗಳ ಬಾಧೆಯನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.
ಇದನ್ನೂ ಓದಿ : ಶಿವಮೊಗ್ಗದಲ್ಲಿ ಇವತ್ತು ಅಡಿಕೆ ರೇಟ್ ಎಷ್ಟಿದೆ? ತೀರ್ಥಹಳ್ಳಿ, ಭದ್ರಾವತಿಯಲ್ಲಿ ಯಾವ್ಯಾವ ಅಡಿಕೆ ಧಾರಣೆ ಏನಿದೆ?
ಈ ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ಪಶುಪಾಲಕರು ತಮ್ಮ ಜಾನುವಾರುಗಳ ಆರೋಗ್ಯ ಮತ್ತು ಹಾಲಿನ ಉತ್ಪಾದನೆಯನ್ನು ಸ್ಥಿರವಾಗಿಟ್ಟುಕೊಳ್ಳಬಹುದು ಎಂದು ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಕಟಣೆ ತಿಳಿಸಿದೆ.
How can farmers protect livestock from the intense May heat wave in Karnataka? Read the essential guidelines issued by the Shivamogga Veterinary College for animal care.








