ಶಿವಮೊಗ್ಗ: ಹೊನ್ನಾಳಿ ವಿದ್ಯುತ್ ಸ್ವೀಕರಣ ಕೇಂದ್ರದ ವ್ಯಾಪ್ತಿಯಲ್ಲಿ ತ್ರೈಮಾಸಿಕ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂನ್ 20ರಂದು ಬೆಳಗ್ಗೆ 10:30 ರಿಂದ ಸಂಜೆ 5:30ರವರೆಗೆ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.
ಎಲ್ಲೆಲ್ಲಿ ಕರೆಂಟ್ ಇರಲ್ಲ?
ಆನವೇರಿ, ಸೈದರಕಲ್ಲಹಳ್ಳಿ, ನಿಂಬೆಗೊಂದಿ, ಮಂಗೋಟೆ, ಮೈದೊಳಲು, ಗುಡುಮಘಟ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆನವೇರಿ, ಇಟ್ಟಿಗೆಹಳ್ಳಿ, ಇಟ್ಟಿಗೆಹಳ್ಳಿ ಕ್ಯಾಂಪ್, ಸೈದರಕಲ್ಲಹಳ್ಳಿ, ಕುರುಬರ ವಿಠಲಾಪುರ, ಶ್ರೀಹರಿಪುರ, ಆದ್ರಿಹಳ್ಳಿ, ದಿಗ್ಗೇನಹಳ್ಳಿ, ನಿಂಬೆಗೊಂದಿ, ಅರಿಶಿನಘಟ್ಟ, ಅರಿಶಿನಘಟ್ಟ ತಾಂಡಾ, ವಡೇರಪುರ, ಮಂಗೋಟೆ, ನಾಗಸಮುದ್ರ, ಗುಡುದಮ್ಮನಹಳ್ಳಿ, ಮೈದೊಳಲು, ಮಲ್ಲಾಪುರ, ಕಲ್ಲಜ್ನಾಳ್, ಗುಡುಮಘಟ್ಟೆ, ತಡಸ, ಮಲ್ಲಿಗೇನಹಳ್ಳಿ, ಲಕ್ಷ್ಮೀಪುರ ಕ್ಯಾಂಪ್, ಜಂಗಮರಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಸಹಕರಿಸಬೇಕು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

