ಶಿವಮೊಗ್ಗ ಲೈವ್
ಶಿವಮೊಗ್ಗ: ನಗರದ ಕೃಷಿ ಕಾಲೇಜು ಎದುರು ಖಾಸಗಿ ಬಸ್ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೋಮಿನಕೊಪ್ಪ ನಿವಾಸಿ ಆನಂದಪ್ಪ (48) ಮೃತರು.
ಶುಕ್ರವಾರ ರಾತ್ರಿ ಕೃಷಿ ಕಾಲೇಜು ಎದುರಿನ ಚನ್ನಮುಂಭಾಪುರದಲ್ಲಿರುವ ಪತ್ನಿ ಮನೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಈ ವೇಳೆ ಶಿವಮೊಗ್ಗದಿಂದ ಆನವಟ್ಟಿ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಮೃತ ಆನಂದಪ್ಪ ಅವರಿಗೆ ಪತ್ನಿ, ಪತ್ರಕರ್ತ ರಾಕೇಶ್ ಸೇರಿ ಇಬ್ಬರು ಮಕ್ಕಳಿದ್ದಾರೆ. ಶಿವಮೊಗ್ಗ ಪೂರ್ವ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

