ಶಿವಮೊಗ್ಗ ಲೈವ್.ಕಾಂ | SHIMOGA | 25 ಜನವರಿ 2020
ಶ್ರೀ ಕ್ಷೇತ್ರ ಕೂಡಲಿಯಲ್ಲಿ ಮರಳು ಗಣಿಗಾರಿಕೆ ನಿಲ್ಲಿಸುವಂತೆ ಆಗ್ರಹಿಸಿ ಕೂಡಲಿ ಗ್ರಾಮಸ್ಥರು ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಮನವಿ ಸಲ್ಲಿಸಿದರು. ಕೂಡಲಿ ಪುರಾಣ ಪ್ರಸಿದ್ಧ ಮತ್ತು ಐತಿಹಾಸಿಕ ಗ್ರಾಮವಾಗಿದ್ದು ಇತ್ತೀಚೆಗೆ ಮರಳುಗಾರಿಕೆಯಿಂದ ಈ ಗ್ರಾಮ ಅಳಿವಿನ ಅಂಚಿಗೆ ಸಾಗುತ್ತಿದೆ ಎಂದು ಆರೋಪಿಸಿದರು.
ಮರಳು ಗಣಿಗಾರಿಕೆಯಿಂದ ಇಡೀ ಗ್ರಾಮವೇ ನಶಿಸಿ ಹೋಗುವಂತಹ ಸ್ಥಿತಿಗೆ ತಲುಪಿದೆ. ಕೂಡಲಿ ಶ್ರೀ ಕ್ಷೇತ್ರ ಶಂಕರಾಚಾರ್ಯರ ಸ್ಥಾಪಿತ ಮೂಲ ಶಾರದಾಂಬೆಯ ಮಹಾಸಂಸ್ಥಾನ, ಆರ್ಯ ಆರೋಭ್ಯ ತೀರ್ಥ ಮಹಾಸಂಸ್ಥಾನಗಳು ಇಲ್ಲಿದ್ದು, ಗ್ರಾಮದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಹತ್ತಾರು ದೇವಸ್ಥಾನಗಳಿವೆ. ಅಂದಾಜು 2,500 ಜನರು ಇಲ್ಲಿ ವಾಸಿಸುತ್ತಿದ್ದಾರೆ. ಪವಿತ್ರ ತುಂಗಾ ಮತ್ತು ಭದ್ರಾ ನದಿಗಳ ಸಂಗಮ ಇದಾಗಿದೆ. ಇಂತಹ ಪವಿತ್ರ ಕ್ಷೇತ್ರದಲ್ಲಿ ಅಕ್ರಮವಾಗಲಿ ಸಕ್ರಮವಾಗಲಿ ಮರಳು ಗಣಿಗಾರಿಕೆ ಮಾಡಬಾರದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮರಳು ಗಣಿಗಾರಿಕೆಯಿಂದ ಶಾಲಾ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಜನತೆಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ದನ ಕರುಗಳು ನೀರು ಕುಡಿಯಲು ಹೋಗಿ ಮಣ್ಣು ಕುಸಿದು ಪ್ರಾಣ ಕಳೆದುಕೊಂಡಿವೆ ಎಂದು ದೂರಿದರು. ಮರಳು ಗಣಿಗಾರಿಕೆ ನಿಲ್ಲಿಸಬೇಕು ಮತ್ತು ಕೂಡಲಿ ಗ್ರಾಮವನ್ನು ಉಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಗ್ರಾಮಸ್ಥರಾದ ನಿಂಗಪ್ಪ, ಶೇಖರಪ್ಪ, ಕೃಷ್ಣಪ್ಪ, ರಂಗನಾಥ, ಶ್ರೀನಿವಾಸ, ಹರೀಶ್ ಇದ್ದರು.
- ಬೆಳಗೆದ್ದು ಮನೆ ಪಕ್ಕದ ಗೋಡನ್ಗೆ ಹೋದವರಿಗೆ ಕಾದಿತ್ತು ಆಘಾತ, ಒಂದೇ ರೀತಿ ಎರಡು ಪ್ರತ್ಯೇಕ ಪ್ರಕರಣ
- ಶಿವಮೊಗ್ಗದಲ್ಲಿ ಬಹಿರಂಗ ಪ್ರಚಾರ ಇವತ್ತೇ ಕೊನೆ, ಯಾವ್ಯಾವ ಅಭ್ಯರ್ಥಿಯ ಪ್ರಚಾರ ಹೇಗಿದೆ? ಇಲ್ಲಿದೆ ಡಿಟೇಲ್ಸ್
- ಶಿವಮೊಗ್ಗ – ಕುಂಸಿ ಮಧ್ಯೆ ರೈಲ್ವೆ ಲೆವೆಲ್ ಕ್ರಾಸಿಂಗ್ ಬಂದ್, ವಾಹನಗಳಿಗೆ ಪರ್ಯಾಯ ಮಾರ್ಗ, ಯಾವುದದು?
- ಶಿವಮೊಗ್ಗದಲ್ಲಿ ಇವತ್ತು ಎಷ್ಟಿರುತ್ತೆ ತಾಪಮಾನ? ಇಲ್ಲಿದೆ ಇಡೀ ದಿನದ ಹವಾಮಾನ ವರದಿ
- ಶಿವಮೊಗ್ಗದಲ್ಲಿ ಪ್ರಜ್ವಲ್ ಪೆನ್ಡ್ರೈವ್ ಕೇಸ್ ವಿರುದ್ಧ ಅಕ್ರೋಶ, ಡಿಸಿ ಮೂಲಕ ಸಿಎಂಗೆ ಪತ್ರ
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]