ಶಿವಮೊಗ್ಗ ಗಾಡಿಕೊಪ್ಪದ ಬಳಿ ಚಾನೆಲ್’ನಲ್ಲಿ ಮನೆಗಳ್ಳನ ಮೃತದೇಹ, ಅನುಮಾನಾಸ್ಪದ ಸಾವು

vinobanagara polic station and police jeep

ಶಿವಮೊಗ್ಗ ಲೈವ್.ಕಾಂ | SHIMOGA | 9 ಜನವರಿ 2020 ತುಂಗಾ ನಾಲೆಯಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಠಕ್ಕರ್ ಫಯಾಜ್ ಎಂದು ಗುರುತಿಸಲಾಗಿದೆ. ಗಾಡಿಕೊಪ್ಪದ ಬಳಿ ಇರುವ ತುಂಗಾ ನಾಲೆಯಲ್ಲಿ ಮೃತದೇಹ ಪತ್ತೆಯಾಗಿದೆ. ವಿನೋಬನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಠಕ್ಕರ್ ಫಯಾಜ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈತ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಶಿವಮೊಗ್ಗದ ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳಿವೆ. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ … Read more

ಶಿವಮೊಗ್ಗ ಅಸಿಸ್ಟೆಂಟ್ ಕಮಿಷನರ್ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಕೊನೆ ಫೋನ್ ಕರೆಯಿಂದ ಹೊರಬಿತ್ತು ನಿಜ ಕಾರಣ

Suicide-Hanging-General

ಶಿವಮೊಗ್ಗ ಲೈವ್.ಕಾಂ | SHIMOGA | 07 ಜನವರಿ 2020 ಶಿವಮೊಗ್ಗದ ಅಸಿಸ್ಟೆಂಟ್ ಕಮಿಷನರ್ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಘಟನೆ ನಡೆದು 12 ದಿನದ ಬಳಿಕ ಮತ್ತೊಂದು ದೂರು ದಾಖಲಾಗಿದೆ. ಸರ್ಕಾರಿ ಶಾಲೆ ಶಿಕ್ಷಕರೊಬ್ಬರ ಮೇಲೆ ಪ್ರಕರಣ ದಾಖಲಾಗಿದೆ. ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಅವರ ಪತ್ನಿ ಸುಮಾ (44) ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿರುವ ನಿಸರ್ಗ ಲೇಔಟ್ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಡಿಸೆಂಬರ್ 24ರಂದು ಘಟನೆ ನಡೆದಿತ್ತು. ಮಗುವಾಗಿಲ್ಲ ಎಂದು ಮನನೊಂದಿದ್ದರು … Read more

ಶಿವಮೊಗ್ಗ – ಮೈಸೂರು ರೈಲಿಗೆ ಸಿಲುಕಿ ಯುವತಿ ಸಾವು, ವಿದ್ಯಾನಗರ ರೈಲ್ವೆ ನಿಲ್ದಾಣ ಸಮೀಪದಲ್ಲಿ ಘಟನೆ

ಶಿವಮೊಗ್ಗ ಲೈವ್.ಕಾಂ | SHIMOGA | 6 ಜನವರಿ 2020 ಶಿವಮೊಗ್ಗ ವಿದ್ಯಾನಗರ ರೈಲ್ವೆ ನಿಲ್ದಾಣ ಸಮೀಪ ರೈಲಿಗೆ ಸಿಲುಕಿ ಯುವತಿ ಸಾವನ್ನಪ್ಪಿದ್ದಾಳೆ. ಅನಾರೋಗ್ಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಶಂಕಿಸಲಾಗಿದೆ. ರಕ್ಷಿತಾ (18) ಮೃತ ದುರ್ದೈವಿ. ಬೆಳಗ್ಗೆ ಶಿವಮೊಗ್ಗದಿಂದ ಮೈಸೂರಿಗೆ ತೆರಳುವ ರೈಲಿಗೆ ಸಿಲುಕಿ ರಕ್ಷಿತಾ ಮೃತಪಟ್ಟಿದ್ದಾಳೆ. ಫಿಟ್ಸ್, ಹರ್ನಿಯಾ ಆಪರೇಷನ್ ರಕ್ಷಿತಾ ಬಹು ವರ್ಷದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಪದೇ ಪದೇ ಫಿಟ್ಸ್ ಬರುತ್ತಿತ್ತು ಎಂದು ಆಕೆಯ ತಾಯಿ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಆಕೆಗೆ ಹರ್ನಿಯಾ ಆಪರೇಷನ್ ಕೂಡ … Read more

ಹೊಸ ವರ್ಷ ಶುರುವಾಗಿ ಎರಡೇ ಗಂಟೆಗೆ ATNC ಕಾಲೇಜು ಮುಂದೆ ರಸ್ತೆಯಲ್ಲಿ ದರೋಡೆ, ಯುವಕನಿಗೆ ಥಳಿಸಿ ಮೊಬೈಲ್, ದುಡ್ಡು ಕಿತ್ತು ಪರಾರಿ

police cap

ಶಿವಮೊಗ್ಗ ಲೈವ್.ಕಾಂ | SHIMOGA | 5 ಜನವರಿ 2020 ಹೊಸ ವರ್ಷ ಶುರುವಾಗಿ ಎರಡೇ ಗಂಟೆಯಲ್ಲಿ ಶಿವಮೊಗ್ಗದ ಎಟಿಎನ್’ಸಿ ಕಾಲೇಜು ಮುಂಬಾಗ ದುಷ್ಕರ್ಮಿಗಳು, ಯುವಕನೊಬ್ಬನನ್ನು ಹಿಡಿದು ಥಳಿಸಿ, ಮೊಬೈಲ್, ದುಡ್ಡು, ಎಟಿಎಂ ಸಾಫ್ಟ್’ವೇರ್ ಟೂಲ್ಸ್ ಕದ್ದೊಯ್ದಿದ್ದಾರೆ. ಜನವರಿ ಒಂದರಂದು ರಾತ್ರಿ 2 ಗಂಟೆ ಹೊತ್ತಿಗೆ ಘಟನೆ ನಡೆದಿದೆ. ಕಿರಣ್ ಕುಮಾರ್ ಎಂಬುವವರು ನಡೆದುಕೊಂಡು ಬರುವಾಗ ಮೂವರು ದುಷ್ಕರ್ಮಿಗಳು ಅವರ ಮೇಲೆ ಅಟ್ಯಾಕ್ ಮಾಡಿದ್ದಾರೆ.] ಘಟನೆ ವಿವರ ತುಮಕೂರಿಗೆ ತೆರಳಿದ್ದ ಕಿರಣ್ ಕುಮಾರ್, ಕರ್ನಾಟಕ ಸಂಘದ ಬಳಿ … Read more

ಹೊಸಮನೆಯಲ್ಲಿ ಕುತ್ತಿಗೆ ಮೇಲೆ ರಾಡ್ ಬಿದ್ದು ಎಂಟು ವರ್ಷದ ಬಾಲಕ ಸಾವು

ಶಿವಮೊಗ್ಗ ಲೈವ್.ಕಾಂ | SHIMOGA | 4 ಜನವರಿ 2020 ವೆಲ್ಡಿಂಗ್ ಶಾಪ್’ನವರ ನಿರ್ಲಕ್ಷ್ಯಕ್ಕೆ ಶಿವಮೊಗ್ಗದ ಹೊಸಮನೆ ಬಡಾವಣೆಯಲ್ಲಿ ಬಾಲಕ ಬಲಿಯಾಗಿದ್ದಾನೆ. ಕುತ್ತಿಗೆ ಮೇಲೆ ರಾಡ್ ಬಿದ್ದು ಎಂಟು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಯುವರಾಜ್ (8) ಮೃತ ಬಾಲಕ. ಮನೆಯಿಂದ ಅಂಗಡಿಗೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಹೊಸಮನೆ ಬಡಾವಣೆಯ ಚಾನಲ್ ಏರಿಯಾದಲ್ಲಿರುವ ವೆಂಕಟೇಶ್ವರ ಇಂಡಸ್ಟ್ರೀಸ್ ವೆಲ್ಡಿಂಗ್ ಶಾಪ್’ನವರು, ದೊಡ್ಡದೊಂಡು ರಾಡ್’ಗೆ ಬಣ್ಣ ಹಚ್ಚುತ್ತಿದ್ದರು. ಈ ವೇಳೆ ರಾಡ್ ಜಾರಿ, ದಾರಿಯಲ್ಲಿ ಹೋಗುತ್ತಿದ್ದ ಯುವರಾಜ್ ಮೇಲೆ ಬಿದ್ದಿದೆ … Read more

ಶಿವಮೊಗ್ಗ ಭದ್ರಾವತಿ ರಸ್ತೆಯಲ್ಲಿ ಭೀಕರ ಅಪಘಾತ, ಸ್ಥಳದಲ್ಲೇ ವಕೀಲ ಸಾವು, ಕಾರಿನ ಮುಂಭಾಗ ನುಜ್ಜುಗುಜ್ಜು

ಶಿವಮೊಗ್ಗ ಲೈವ್.ಕಾಂ | SHIMOGA | 4 ಜನವರಿ 2020 ನಿದಿಗೆ ಬಳಿ ರಾತ್ರಿ ಭೀಕರ ಅಪಘಾತ ಸಂಭವಿಸಿದೆ. ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ವಕೀಲರೊಬ್ಬರು ಸಾವನ್ನಪ್ಪಿದ್ದಾರೆ. ಹೇಗಾಯ್ತು ಘಟನೆ? ಶಿವಮೊಗ್ಗ – ಭದ್ರಾವತಿ ರಸ್ತೆಯಲ್ಲಿ ನಿದಿಗೆ ಬಳಿ ಕೆಟ್ಟು ನಿಂತಿದ್ದ ಲಾರಿಗೆ, ಕಾರು ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಚಾಲಕ ಎಲ್.ಜಿ.ಗಂಗಾಧರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.  ಕಾರಿನ ಮುಂಬಾಗ ನುಜ್ಜುಗುಜ್ಜಾಗಿದೆ. ಕಾರ್ಯಕ್ರಮ ಮುಗಿಸಿ ಮರಳುತ್ತಿದ್ದರು ಗಂಗಾಧರ್ ಅವರು ವಕೀಲರಾಗಿದ್ದು, ಶಿವಮೊಗ್ಗದಲ್ಲಿ ನಡೆದ ವಕೀಲ ದಿನಾಚರಣೆಯ ಕಾರ್ಯಕ್ರಮ ಮುಗಿಸಿ ಮನೆಗೆ … Read more

ಜಗಳವಾಡುತ್ತಲೇ ಹೆಂಡತಿಗೆ ಇರಿದ ಗಂಡ, ಚಾಕು ಸಹಿತ ಪೊಲೀಸ್ ಸ್ಟೇಷನ್’ಗೆ ಬಂದ, ಘಟನೆಗೇನು ಕಾರಣ ಗೊತ್ತಾ?

030120 Wife Attacked 1

ಶಿವಮೊಗ್ಗ ಲೈವ್.ಕಾಂ | SHIMOGA | 3 ಜನವರಿ 2020 ಕೌಟುಂಬಿಕ ಕಲಹದಿಂದಾಗಿ ವ್ಯಕ್ತಿಯೊಬ್ಬ ತನ್ನ ಹೆಂಡತಿಗೆ ಚಾಕು ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿವಮೊಗ್ಗದ ಮಿಳಘಟ್ಟದಲ್ಲಿ ಘಟನೆ ನಡೆದಿದೆ. ಆರ್ಮುಗಂ ಎಂಬಾತ ತನ್ನ ಪತ್ನಿ ಅಂಜಲಿಗೆ ಚಾಕು ಇರಿದಿದ್ದಾನೆ. ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿ ಅವರನ್ನು ಆಕೆಯ ತಂದೆ ಪೂಮಲೈ, ಅಕ್ಕಪಕ್ಕದ ಮನೆಯವರ ನೆರವಿನೊಂದಿಗೆ ಕೂಡಲೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಂಜಲಿ ಸ್ಥಿತಿ ಗಂಭೀರವಾಗಿದೆ. ಘಟನೆ ಬಳಿಕ … Read more

ವಿದ್ಯಾನಗರ ರೈಲ್ವೆ ನಿಲ್ದಾಣದ ಮುಂದೆ ನಿಲ್ಲಿಸಿದ್ದ ಕಾರಿನಲ್ಲಿ ಮಹಿಳೆ ಶವ ಪತ್ತೆ

ಶಿವಮೊಗ್ಗ ಲೈವ್.ಕಾಂ | SHIMOGA | 2 ಜನವರಿ 2020 ರೈಲ್ವೆ ನಿಲ್ದಾಣದ ಪಾರ್ಕಿಂಗ್’ನಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಮೃತದೇಹವು ಕೊಳೆತ ಸ್ಥತಿಯಲ್ಲಿ ಪತ್ತೆಯಾಗಿದ್ದು, ಗುರುತಿಸಲು ಅಸಾಧ್ಯವಾಗಿದೆ. ಮಹಾದೇವಿ ಟಾಕೀಸ್ ರೈಲ್ವೆ ನಿಲ್ದಾಣದ ಪಾರ್ಕಿಂಗ್’ನಲ್ಲಿ ಘಟನೆ ನಡೆದಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೋಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಮಾರು ಹತ್ತು ದಿನದ ಹಿಂದೆ, ಅಪರಿಚಿತ ವ್ಯಕ್ತಿಯೊಬ್ಬ KA 20 MA 8877 ನಂಬರಿನ ಮಾರುತಿ ಓಮ್ನಿ ಕಾರನ್ನು ತಂದ ರೈಲ್ವೆ … Read more

ಡ್ರಾಪ್ ಕೊಟ್ಟ ವಾಹನ ಚಾಲಕನ ಮೊಬೈಲನ್ನೇ ಎಗರಿಸಿದ್ದ ಖತರ್ನಾಕ್ ಕಳ್ಳ ಸೆಂಟ್ರಲ್ ಜೈಲು ಪಾಲು

prison hand cuff image

ಶಿವಮೊಗ್ಗ ಲೈವ್.ಕಾಂ | SHIMOGA | 31 ಡಿಸೆಂಬರ್ 2019 ರಸ್ತೆ ಮಧ್ಯೆ ನಿಂತು ಡ್ರಾಪ್ ಕೇಳಿದ. ವಾಹನದಿಂದ ಇಳಿಯುವಾಗ ಚಾಲಕನ ಸ್ಮಾರ್ಟ್ ಫೋನನ್ನೇ ಎಗರಿಸಿದ. ಮಾಡಿದ ತಪ್ಪಿಗೆ ಜೈಲುಪಾಲದ ಮೊಬೈಲ್ ಕಳ್ಳ. ಏನಿದು ಘಟನೆ? ಹೇಗಾಯ್ತು ಕಳ್ಳತನ? ಭದ್ರಾವತಿಯ ಹೊನ್ನಟ್ಟಿ ಹೊಸೂರು ಗ್ರಾಮದ ಬಸವಣ್ಯಪ್ಪ ಎಂಬುವವರು ಸಿಲಿಂಡರ್ ಲಾರಿ ಚಾಲನೆ ಮಾಡಿಕೊಂಡು ಬರುತ್ತಿದ್ದರು. ಅಂಕೋಲದಿಂದ ಶಿವಮೊಗ್ಗಕ್ಕೆ ಬರುವಾಗ ಶಿಕಾರಿಪುರದ ಬಳಿ ತರಲಘಟ್ಟ ಕ್ಯಾಂಪ್’ನ ರಾಜೇಶ್ ಎಂಬಾತ, ಡ್ರಾಪ್ ಕೇಳಿದ್ದಾನೆ. ಡ್ರಾಪ್ ಪಡೆದ ರಾಜೇಶ, ಶಿವಮೊಗ್ಗದ ಮಹಾವೀರ … Read more

ಶಿವಮೊಗ್ಗ MRS ಸರ್ಕಲ್’ನಲ್ಲಿ ಅಪಘಾತ, ಲಾರಿ, ಬೈಕು ಡಿಕ್ಕಿ, ಒಬ್ಬ ಸ್ಥಳದಲ್ಲೇ ಸಾವು

ಶಿವಮೊಗ್ಗ ಲೈವ್.ಕಾಂ | SHIMOGA | 30 ಡಿಸೆಂಬರ್ 2019 ಶಿವಮೊಗ್ಗದ MRS ಸರ್ಕಲ್’ನಲ್ಲಿ ದ್ವಿಚಕ್ರ ವಾಹನ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದೆ. ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿದ್ದಾನೆ. LBS ನಗರದ ಪ್ರಸಾದ್ (35) ಮೃತ ಬೈಕ್ ಚಾಲಕ. MRS ಸರ್ಕಲ್’ನಲ್ಲಿ ಲಾರಿ ಡಿಕ್ಕಿ ಹೊಡೆದಿದ್ದರಿಂದ ಪ್ರಸಾದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಾಲಕನಿಗೆ ಬಿತ್ತು ಗೂಸ ಘಟನೆ ಬಳಿಕ ಲಾರಿ ಚಾಲಕನಿಗೆ ಸ್ಥಳೀಯರು ಗೂಸ ಕೊಟ್ಟಿದ್ದಾರೆ. ಪೊಲೀಸರು ಕೂಡಲೇ ಚಾಲಕನನ್ನು ರಕ್ಷಿಸಿ ಠಾಣೆಗೆ ಎಳೆದೊಯ್ದರು. ಪೂರ್ವ ಸಂಚಾರ … Read more