ಶಿವಮೊಗ್ಗ, ಹುಬ್ಬಳ್ಳಿ ಜನಶತಾಬ್ದಿ ರೈಲುಗಳ ಕುರಿತು ನೈಋತ್ಯ ರೈಲ್ವೆಯಿಂದ ಮಹತ್ವದ ಅಪ್‌ಡೇಟ್‌

shimoga-to-bangalore-jan-shatabdi-train-railway.webp

ರೈಲ್ವೆ ಸುದ್ದಿ: ಶಿವಮೊಗ್ಗ ಮತ್ತು ಹುಬ್ಬಳ್ಳಿ ಜನಶತಾಬ್ದಿ (Jan Shatabdi) ರೈಲುಗಳು ತಿಪಟೂರು ನಿಲ್ದಾಣದಲ್ಲಿ ನೀಡುತ್ತಿದ್ದ ನಿಲುಗಡೆ ಅವಧಿಯನ್ನು ಮತ್ತೆ ಮುಂದುವರೆಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ತಿಪಟೂರು ನಿಲ್ದಾಣದಲ್ಲಿ ರೈಲು ಸಂಖ್ಯೆ 12079/12080 ಕೆಎಸ್ಆರ್ ಬೆಂಗಳೂರು – ಎಸ್ಎಸ್ಎಸ್ ಹುಬ್ಬಳ್ಳಿ – ಕೆಎಸ್ಆರ್ ಬೆಂಗಳೂರು ಜನ ಶತಾಬ್ದಿ ಎಕ್ಸ್‌ಪ್ರೆಸ್‌ ಮತ್ತು 12089/12090 ಕೆಎಸ್ಆರ್ ಬೆಂಗಳೂರು – ಶಿವಮೊಗ್ಗ ಟೌನ್ – ಕೆಎಸ್ಆರ್ ಬೆಂಗಳೂರು ಜನ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲುಗಳಿಗೆ ನೀಡಲಾಗಿದ್ದ ತಾತ್ಕಾಲಿಕ ನಿಲುಗಡೆಯನ್ನು ಇನ್ನೂ … Read more

ರಸ್ತೆ ರಿಪೇರಿ ಎಫಕ್ಟ್‌, ಆರು ಗಂಟೆಯಿಂದ ಆನ್‌ಲೋಡ್‌ ಆಗದೆ ನಿಂತಲ್ಲೆ ನಿಂತ ಗೂಡ್ಸ್‌ ರೈಲು

Goods-Train-Stopped-in-Shimoga-Railway-station.

ಶಿವಮೊಗ್ಗ: ಹೊನ್ನಾಳಿ ರಸ್ತೆಯ ಫ್ಲೈ ಓವರ್‌ ಬಳಿ ರಿಪೇರಿ ಕಾಮಗಾರಿ ರೈಲ್ವೆ ಇಲಾಖೆಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಆರು ಗಂಟೆಗು ಹೆಚ್ಚು ಹೊತ್ತಿನಿಂದ ಗೂಡ್ಸ್‌ ರೈಲು (Goods Train) ಅನ್‌ ಲೋಡ್‌ ಆಗದೆ ನಿಂತಲ್ಲಿಯೇ ನಿಲ್ಲುವಂತಾಗಿದೆ. ರೈಲ್ವೆ ನಿಲ್ದಾಣದಲ್ಲಿ ಕೊನೆಯ ಪ್ಲಾಟ್‌ ಫಾರಂ ಅನ್ನು ಗೂಡ್ಸ್‌ ರೈಲುಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಗೂಡ್ಸ್‌ ರೈಲುಗಳ ಬಳಿ ಲಾರಿಗಳು ತೆರಳಲು ಅನುವಾಗುವಂತೆ ಸಂರ್ಪಕ ರಸ್ತೆಯನ್ನು ನಿರ್ಮಿಸಲಾಗಿದೆ. ಶಾಂತಿನಗರ ಕ್ರಾಸ್‌ ಬಳಿ ಹೊನ್ನಾಳಿ ರಸ್ತೆಯ ಫ್ಲೈ ಓವರ್‌ ಪಕ್ಕದಿಂದ ಲಾರಿಗಳು ರೈಲ್ವೆ … Read more

ಶಿವಮೊಗ್ಗ – ಭದ್ರಾವತಿ ರೈಲು ಮಾರ್ಗ ಪರಿಶೀಲನೆ, ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗ

Shimoga-Yeshwanthapura-Train-South-Western-Railway

ರೈಲ್ವೆ ಸುದ್ದಿ: ಶಿವಮೊಗ್ಗ – ಭದ್ರಾವತಿ ನಡುವಿನ ಎಲ್‌.ಸಿ (level crossing) 42,46 ಮತ್ತು 47 ಗಳನ್ನು ಮುಚ್ಚಲು ಮತ್ತು ಪರೀಕ್ಷೆಗಾಗಿ ಅ.28 ರಿಂದ ನ.3 ರವರೆಗೆ ವಿವಿಧ ದಿನಗಳಂದು ವಾಹನಗಳು ಮತ್ತು ಸಾರ್ವಜನಿಕರು ತಾತ್ಕಾಲಿಕವಾಗಿ ಸಮೀಪದ ಬದಲಿ ಮಾರ್ಗಗಳಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಎಲ್‌ಸಿ 43- ಯಲವಟ್ಟಿ ರಸ್ತೆ: ಅ.28ರ ಬೆಳಗ್ಗೆ 8 ರಿಂದ ಅ.29 ರ ಸಂಜೆ 6ರವರೆಗೆ ಎಲ್.ಸಿ.46 ಮುಖಾಂತರ ಹೊಸೊಡಿ ರಸ್ತೆ, ಯಲವಟ್ಟಿ ರಸ್ತೆ ಸಂಪರ್ಕ ಬದಲಿ ಮಾರ್ಗ. ಎಲ್‌ಸಿ 46- … Read more

ಶಿವಮೊಗ್ಗ ರೈಲ್ವೆ ನಿಲ್ದಾಣದ ಪ್ರೀ ಪೇಯ್ಡ್‌ ಆಟೋ ಕೌಂಟರ್‌ ಹೇಗಿದೆ? ಕಾರ್ಯನಿರ್ವಾಹಣೆ ಹೇಗೆ? ಇಲ್ಲಿದೆ ಪಾಯಿಂಟ್ಸ್‌

251025 Prepaid Auto booking in Shimoga railway station

ಶಿವಮೊಗ್ಗ: ಬಹು ವರ್ಷದ ಬೇಡಿಕೆಯಾಗಿದ್ದ ಪ್ರೀ ಪೇಯ್ಡ್‌ ಆಟೋ (Pre Paid) ವ್ಯವಸ್ಥೆ ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ಆರಂಭವಾಗಿದೆ. ಮೊದಲ ದಿನದಿಂದಲೇ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈಲು ಇಳಿದ ಪ್ರಯಾಣಿಕರು ಯಾವುದೇ ಕಿರಿಕಿರಿ ಇಲ್ಲದೆ ಆಟೋದಲ್ಲಿ ನಿಗದಿತ ಸ್ಥಳಕ್ಕೆ ತಲುಪುತ್ತಿದ್ದಾರೆ. ಪ್ರೀ ಪೇಯ್ಡ್‌ ಆಟೋ ವ್ಯವಸ್ಥೆ ಅಗತ್ಯತೆ ಕುರಿತು ಈ ಹಿಂದೆ ಶಿವಮೊಗ್ಗ ಲೈವ್.ಕಾಂ ವರದಿ ಮಾಡಿತ್ತು. ಪ್ರೀ ಪೇಯ್ಡ್‌ ವ್ಯವಸ್ಥೆ ಜಾರಿಯಾದ ಮೇಲೆ ಪ್ರಯಾಣಿಕರ ಅಭಿಪ್ರಾಯ ಸಹಿತ ವರದಿ ಪ್ರಕಟಿಸಲಾಯಿತು. ಪ್ರೀ ಪೇಯ್ಡ್‌ ಆಟೋ … Read more

ರೈಲು ಇಳಿದು ಹಬ್ಬದ ಖುಷಿಯಲ್ಲಿ ನಿಲ್ದಾಣದಿಂದ ಹೊರ ಹೋಗುತ್ತಿದ್ದ ನಾಲ್ವರಿಗೆ ರೈಲ್ವೆ ಪೊಲೀಸರಿಂದ ಶಾಕ್, ಆಗಿದ್ದೇನು?

251025-case-filed-against-4-members-for-taking-crackers-in-train.webp

ಶಿವಮೊಗ್ಗ: ನಿಷೇಧವಿದ್ದರು ರೈಲಿನಲ್ಲಿ ಪಟಾಕಿ ಸಾಗಿಸಿದ ಆರೋಪದ ಹಿನ್ನೆಲೆ ನಾಲ್ವರ ವಿರುದ್ಧ ಶಿವಮೊಗ್ಗ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಟಾಕಿ (Crackers) ಬಾಕ್ಸ್‌ಗಳನ್ನು ವಶಕ್ಕೆ ಪಡೆದು ನಾಲ್ವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆಪರೇಷನ್‌ ಸಂರಕ್ಷ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದ ರೈಲ್ವೆ ಪೊಲೀಸರು, ಶಿವಮೊಗ್ಗ ನಿಲ್ದಾಣದಲ್ಲಿ ಪಟಾಕಿ ಬಾಕ್ಸ್‌ ಸಹಿತ ಪ್ರತ್ಯೇಕ ಪ್ರಕರಣದಲ್ಲಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ರೈಲಿನಲ್ಲಿ ಪಟಾಕಿ ಸಾಗಣೆ ನಿಷೇಧವಿದೆ. ಹಾಗಿದ್ದು ಪಟಾಕಿ ತಂದಿದ್ದಕ್ಕೆ ನೊಟೀಸ್‌ ನೀಡಿ, ಪಟಾಕಿಗಳನ್ನು ವಶಕ್ಕೆ ಪಡೆದಿದ್ದಾರೆ. ನಾಲ್ವರು ಆರೋಪಿಗಳು ನ್ಯಾಯಾಲಯಕ್ಕೆ … Read more

ಶಿವಮೊಗ್ಗ ರೈಲ್ವೆ ನಿಲ್ದಾಣ, ಅನುಮಾನದ ಮೇಲೆ ಮಹಿಳೆ ವಿಚಾರಣೆ, ಸಖಿ ಕೇಂದ್ರಕ್ಕೆ ರವಾನೆ, ಏನಿದು ಕೇಸ್‌?

251025-Woman-rescued-at-Shimoga-Railway-Station.webp

ಶಿವಮೊಗ್ಗ: ಪತಿಯ ಕಿರುಕುಳ ತಾಳದೆ ರಾಜ್ಯ ಬಿಟ್ಟು ಬಂದಿದ್ದ 28 ವರ್ಷದ ಮಹಿಳೆಯೊಬ್ಬರನ್ನು ಶಿವಮೊಗ್ಗದ ರೈಲ್ವೆ (Railway) ಪೊಲೀಸರು ರಕ್ಷಣೆ ಮಾಡಿದ್ದಾರೆ. ಆಂಧ್ರದ ಕಡಪ ಜಿಲ್ಲೆಯ 28 ವರ್ಷದ ಮಹಿಳೆ, ರೈಲಿನಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ್ದರು. ಅನುಮಾನದ ಮೇರೆಗೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ಆಕೆಯ ವಿಚಾರಣೆ ಮಾಡಿದಾಗ ಪತಿಯ ಕಿರುಕುಳದ ಕುರಿತು ಮಾಹಿತಿ ನೀಡಿದ್ದರು. ಮದ್ಯ ಸೇವಿಸಿ ಬಂದು ಪತಿ ತನ್ನ ಮೇಲೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದ. ಇದರಿಂದ ಮನನೊಂದು ಊರು ಬಿಟ್ಟು ಬಂದಿರುವುದಾಗಿ ಆಕೆ … Read more

ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಕೊನೆಗೂ ಶುರುವಾಯ್ತು ಪ್ರೀ ಪೇಯ್ಡ್‌ ಆಟೋ ಕೌಂಟರ್‌, ಹೇಗಿದೆ ವ್ಯವಸ್ಥೆ?

211025 Prepaid Auto in shimoga railway station.

ಶಿವಮೊಗ್ಗ: ಕೊನೆಗೂ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಪ್ರೀ ಪೇಯ್ಡ್‌ (Pre Paid) ಆಟೋ ವ್ಯವಸ್ಥೆ ಜಾರಿಗೆ ಬಂದಿದೆ. ಯದ್ವ ತದ್ವ ಹಣ ವಸೂಲಿ ಮಾಡುತ್ತಿದ್ದ ಕೆಲವು ಆಟೋ ಚಾಲಕರಿಗೆ ಮೂಗು ದಾರ ಬಿದ್ದಂತಾಗಿದೆ. ಪೊಲೀಸರ ಈ ಕ್ರಮದಿಂದಾಗಿ ಸದ್ಯ ನಾಗರಿಕರು ನಿರಾಳವಾಗಿದ್ದಾರೆ. ಪ್ರೀ ಪೇಯ್ಡ್‌ ಆಟೋ ವ್ಯವಸ್ಥೆಗೆ ಬಹು ವರ್ಷದಿಂದ ಬೇಡಿಕೆ ಇತ್ತು. ಈಗ ಈ ವ್ಯವಸ್ಥೆ ಜಾರಿಗೆ ಬಂದಿದ್ದು ರೈಲ್ವೆ ನಿಲ್ದಾಣದಿಂದ ಹೊರ ಬರುತ್ತಿದ್ದಂತೆ ಪ್ರಯಾಣಿಕರು ಸೀದ ಈ ಕೌಂಟರ್‌ಗಳತ್ತ ಆಗಮಿಸಿ ರಶೀದಿ ಪಡೆದು ಖುಷಿಯಿಂದ … Read more

ಶಿವಮೊಗ್ಗ – ಭದ್ರಾವತಿ ರೈಲು ಮಾರ್ಗ ಪರೀಶೀಲನೆ, ವಾಹನಗಳ ಒಡಾಟಕ್ಕೆ ಬದಲಿ ಮಾರ್ಗ

railway-track-general-image.webp

ಶಿವಮೊಗ್ಗ: ಶಿವಮೊಗ್ಗ – ಭದ್ರಾವತಿ ಮಧ್ಯೆ ರೈಲ್ವೆ ಮಾರ್ಗದಲ್ಲಿ (Railway Route) ಪರೀಕ್ಷೆ ಹಿನ್ನೆಲೆ ಅ.19 ರಿಂದ 25ರವರೆಗೆ ವಿವಿಧ ದಿನಗಳಂದು ತಾತ್ಕಾಲಿಕವಾಗಿ ವಾಹನಗಳು ಮತ್ತು ಸಾರ್ವಜನಿಕರು ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಅಪರ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಯಾವಾಗ ಯಾವ ಗೇಟ್‌ಗಳು ಬಂದ್? ಎಲ್‌ಸಿ 35- ಲಕ್ಷ್ಮೀಪುರ ರಸ್ತೆ: ಅ. 19ರ ಬೆಳಗ್ಗೆ 8 ರಿಂದ ಅ.20 ರ ಸಂಜೆ 6ರವರೆಗೆ ಬಿ.ಹೆಚ್.ರಸ್ತೆ ಮುಖಾಂತರ ಕಡದಕಟ್ಟೆ – ಹೆಬ್ಬಂಡಿ ರಸ್ತೆ ಸಂಪರ್ಕ – ಲಕ್ಷ್ಮೀಪುರ ರಸ್ತೆ ಮಾರ್ಗ. ಎಲ್‌ಸಿ … Read more

ದೀಪಾವಳಿಗೆ ಯಶವಂತಪುರ – ತಾಳಗುಪ್ಪ ಮಧ್ಯೆ ವಿಶೇಷ ರೈಲು, ಯಾವಾಗ ಹೊರಡಲಿದೆ? ಎಲ್ಲೆಲ್ಲಿ ನಿಲುಗಡೆ ಇರಲಿದೆ?

Electric-Locomotive-train-for-Shimoga

ರೈಲ್ವೆ ಸುದ್ದಿ: ದೀಪಾವಳಿ ಹಬ್ಬದ ಸಂದರ್ಭ ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕೆ ಯಶವಂತಪುರ – ತಾಳಗುಪ್ಪ – ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್‌ ರೈಲು (Special Train) ಸೇವೆಯನ್ನು ನೈಋತ್ಯ ರೈಲ್ವೆ ವಿಸ್ತರಣೆ ಮಾಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ರೈಲು ಸಂಖ್ಯೆ 06587 ಯಶವಂತಪುರ – ತಾಳಗುಪ್ಪ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 17 ಮತ್ತು 24 ರಂದು ರಾತ್ರಿ 10.30ಕ್ಕೆ ಯಶವಂತಪುರದಿಂದ ಹೊರಟು ಮರುದಿನ (ಶನಿವಾರ) ಬೆಳಗ್ಗೆ 4.15ಕ್ಕೆ ತಾಳಗುಪ್ಪ ತಲುಪಲಿದೆ. ರೈಲು ಸಂಖ್ಯೆ 06588 ತಾಳಗುಪ್ಪ … Read more

ಶಿವಮೊಗ್ಗದಿಂದ ಹೊಸ ರೈಲ್ವೆ ಮಾರ್ಗಗಳು, ರೈಲ್ವೆ ಸೌಧದಲ್ಲಿ ಸಂಸದ ರಾಘವೇಂದ್ರ ಮಹತ್ವದ ಮೀಟಿಂಗ್‌, ಇಲ್ಲಿದೆ ಡಿಟೇಲ್ಸ್

MP-BY-Raghavendra-visit-Rail-Soudha-in-Hubli.

ರೈಲ್ವೆ ಸುದ್ದಿ: ಹುಬ್ಬಳ್ಳಿಯ ರೈಲ್ವೆ ಸೌಧಕ್ಕೆ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿದ್ದರು. ನೈಋತ್ಯ ವಲಯದ ರೈಲ್ವೆ ಜನರಲ್‌ ಮ್ಯಾನೇಜರ್‌ ಮುಕುಲ್‌ ಸರಣ್‌ ಮಾಥೂರ್‌ ಅವರನ್ನು ಭೇಟಿಯಾಗಿ ವಿವಿಧ ರೈಲ್ವೆ ಯೋಜನೆಗಳ (Railway) ಕುರಿತು ಚರ್ಚೆ ನಡೆಸಿದರು. ಸಂಸದ ರಾಘವೇಂದ್ರ ಏನೆಲ್ಲ ಚರ್ಚಿಸಿದರು? ಶಿವಮೊಗ್ಗದಿಂದ ಮಂಗಳೂರು ಮತ್ತು ಹುಬ್ಬಳ್ಳಿಗೆ ನೇರ ರೈಲ್ವೆ ಸಂಪರ್ಕ ಕಲ್ಪಿಸುವ ರೈಲು ಯೋಜನೆಗಳ ಸಮೀಕ್ಷೆ ನಡೆಸಿ, ಶೀಘ್ರ ಕಾಮಗಾರಿ ಆರಂಭಿಸಬೇಕು. ಇದರಿಂದ ಅಕ್ಕಪಕ್ಕದ ಜಿಲ್ಲೆಯ ಜನರಿಗು ಅನುಕೂಲವಾಗಲಿದೆ ಎಂದು ಸಂಸದ ರಾಘವೇಂದ್ರ ಮನವಿ … Read more