ಸೇತುವೆ ಮೇಲಿಂದ ಹಳ್ಳಕ್ಕೆ ಉರುಳಿದ ಟಿಪ್ಪರ್‌, ಸಂಪೂರ್ಣ ಜಖಂ, ಸ್ವಲ್ಪದರಲ್ಲಿ ತಪ್ಪಿತು ಪ್ರಾಣಹಾನಿ

Tipper-Lorry-mattihalla-near-anaveri.

SHIVAMOGGA LIVE NEWS | 5 FEBRUARY 2024 HOLEHONNURU : ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಸೇತುವೆಯಿಂದ ಹಳ್ಳಕ್ಕೆ ಬಿದ್ದಿದೆ. ಅದೃಷ್ಟವಶಾತ್‌ ಲಾರಿ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ. ಆನವೇರಿ ಸಮೀಪದ ಮತ್ತಿಹಳ್ಳ ಸೇತುವೆ ಮೇಲಿಂದ ಲಾರಿ ಕೆಳಗೆ ಬಿದ್ದಿದೆ. ಎದುರಿನಿಂದ ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಲಾರಿ ಚಾಲಕ ಯತ್ನಿಸಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡು ಸೇತುವೆಯಿಂದ ಹಳ್ಳಕ್ಕೆ ಉರುಳಿದೆ ಎನ್ನಲಾಗಿದೆ. ಬಿದ್ದ ರಭಸಕ್ಕೆ ಚಕ್ರಗಳು ಕಳಚಿಕೊಂಡು, ಲಾರಿ ಜಖಂ ಆಗಿದೆ. ಎರಡು ಕ್ರೇನ್‌ಗಳನ್ನು ಬಳಸಿ ಭಾನುವಾರ … Read more

ಭದ್ರಾ ಡ್ಯಾಂನಿಂದ ನದಿಗೆ ನೀರು ಹರಿಸಲು ದಿನಾಂಕ ಫಿಕ್ಸ್‌, ನೀರು ಬಿಡಲು ಇದೆ 2 ಕಾರಣ, ಎಷ್ಟು ಕ್ಯೂಸೆಕ್‌ ಬಿಡಲಾಗುತ್ತೆ?

Bhadra-Dam-General-Image

SHIVAMOGGA LIVE NEWS | 1 FEBRUARY 2024 SHIMOGA : ಫೆ.5 ರಿಂದ ಫೆ.10ರವರೆಗೆ ಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಲಾಗುತ್ತದೆ ಎಂದು ಕರ್ನಾಟಕ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎಷ್ಟು ನೀರು ಹರಿಸಲಾಗುತ್ತದೆ? ಫೆ.5ರ ರಾತ್ರಿ 10 ಗಂಟೆಯಿಂದ ಫೆ.10ರ ರಾತ್ರಿ 10 ಗಂಟೆವರೆಗೆ ಪ್ರತಿ ದಿನ 2 ಸಾವಿರ ಕ್ಯೂಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತದೆ. ಒಟ್ಟು 12 ಸಾವಿರ ಕ್ಯೂಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತದೆ ಎಂದು ತಿಳಿಸಲಾಗಿದೆ. ನೀರು ಹರಿಸಲು … Read more

ರಾಜಾರೋಷವಾಗಿ ಹಿಟಾಚಿ, ಜೆಸಿಬಿ, ಟ್ರಾಕ್ಟರ್‌ ಬಳಸಿ ಕೆರೆ ಒತ್ತುವರಿ

lake-occupy-at-holehonnur-farmers-protest

SHIVAMOGGA LIVE NEWS | 29 JANUARY 2024 HOLEHONNURU : ಕೊಪ್ಪ ದೊಡ್ಡಕೆರೆ ಜಾಗವನ್ನು ಕೆರೆಬೀರನಹಳ್ಳಿ ಗ್ರಾಮ ಸಮೀಪ ಅಕ್ರಮವಾಗಿ ಒತ್ತುವರಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಅಚ್ಚುಕಟ್ಟು ಪ್ರದೇಶದ ರೈತರು ತಡೆದು ಪೊಲೀಸರಿಗೆ ದೂರು ನೀಡಿದ್ದಾರೆ. ಹಿಟಾಚಿ, ಜೆಸಿಬಿ ಯಂತ್ರಗಳನ್ನು ಬಳಸಿ ಕೆರೆ ಒತ್ತುವರಿ ಮಾಡಲಾಗುತ್ತಿತ್ತು. ಇದನ್ನು ಗಮನಿಸಿದ ಅಚ್ಚುಕಟ್ಟು ಭಾಗದ ರೈತರು ಸ್ಥಳಕ್ಕೆ ತೆರಳಿ ಒತ್ತುವರಿ ಕಾರ್ಯವನ್ನು ತಡೆದಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಹಿಟಾಚಿ, ಜೆಸಿಬಿ, … Read more

ಹೊಳೆಹೊನ್ನೂರಿನಲ್ಲಿ 22 ಪೌರ ಕಾರ್ಮಿಕರನ್ನು ದಿಢೀರ್‌ ಕೈಬಿಟ್ಟ ಪಟ್ಟಣ ಪಂಚಾಯಿತಿ, ಆಕ್ರೋಶ

holehonnur name graphics

SHIVAMOGGA LIVE NEWS | 24 JANUARY 2024 HOLEHONNURU : ಪಟ್ಟಣ ಪಂಚಾಯಿತಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ 22 ಪೌರ ಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ಕೈ ಬಿಡಲಾಗಿದೆ. ಈ ಕ್ರಮ ಖಂಡಿಸಿ ಸ್ಥಳೀಯ ಮುಖಂಡರೊಂದಿಗೆ ಪೌರ ಕಾರ್ಮಿಕರು ಮುಖ್ಯಾಧಿಕಾರಿ ಕಚೇರಿಗೆ ತೆರಳಿ ಪ್ರಶ್ನಿಸಿದರು. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಮೂರ್ನಾಲ್ಕು ವರ್ಷದಿಂದ ಕೆಲಸ ಮಾಡುತ್ತಿರುವ 22 ಪೌರ ಕಾರ್ಮಿಕರಿಗೆ ಇನ್ಮುಂದೆ ಕೆಲಸಕ್ಕೆ ಬಾರದಂತೆ ತಿಳಿಸಲಾಗಿದೆ. ಸೇವೆ ಕಾಯಂ ಆಸೆಯಿಂದ ಕಾಯುತ್ತಿದ್ದ ಕಾರ್ಮಿಕರಿಗೆ ಪಟ್ಟಣ ಪಂಚಾಯಿತಿ … Read more

ಹೊಳೆಹೊನ್ನೂರು ಸಮೀಪ ಕಂಬದ ಮೇಲಿದ್ದ ಲೈನ್‌ ಮ್ಯಾನ್‌ಗೆ ವಿದ್ಯುತ್‌ ಶಾಕ್‌, ಸಾವು

Lineman-chandrashekar-lamani-holehonnuru-mescom

SHIVAMOGGA LIVE NEWS | 23 JANUARY 2024 HOLEHONNURU : ವಿದ್ಯುತ್‌ ಕಂಬದಲ್ಲಿ ಲೈನ್‌ ದುರಸ್ಥಿ ವೇಳೆ ವಿದ್ಯುತ್‌ ಪ್ರವಹಿಸಿ ಲೈನ್‌ ಮ್ಯಾನ್‌ ಸಾವನ್ನಪ್ಪಿದ್ದಾರೆ. ಅರಹತೊಳಲು ಕೈಮರದ ಸಮೀಪ ಹನುಮಂತಾಪುರ ರಸ್ತೆಯ ಪೆಟ್ರೋಲ್‌ ಬಂಕ್‌ ಮುಂಭಾಗ ಘಟನೆ ಸಂಭವಿಸಿದೆ. ಚಂದ್ರಶೇಖರ್‌ ಲಮಾಣಿ (27) ಮೃತರು. ಬ್ಯಾಡಗಿ ತಾಲೂಕು ಸಿಡೆನೂರು ಗ್ರಾಮದ ಚಂದ್ರಶೇಖರ್‌, ಜ್ಯೂನಿಯರ್‌ ಲೈನ್‌ಮ್ಯಾನ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಘಟನೆ ಸಂಭವಿಸಿದ್ದು ಹೇಗೆ? ತೋಟಗಳ ಐಪಿ ಸೆಟ್‌ ಲೈನ್‌ ದುರಸ್ಥಿ ವೇಳೆ ಘಟನೆ ಸಂಭವಿಸಿದೆ. ಕಂಬದ … Read more

ಫೈನಾನ್ಸ್‌ ಸಂಸ್ಥೆಯಲ್ಲಿ ಸುಲಭವಾಗಿ 2 ಲಕ್ಷ ರೂ.ವರೆಗೆ ಸಾಲ, ನಂಬಿದ ಭದ್ರಾವತಿ ಯುವಕನಿಗೆ ಕಾದಿತ್ತು ಆಘಾತ

Online-Fraud-Case-image

SHIVAMOGGA LIVE NEWS | 22 JANUARY 2024 SHIMOGA : ಎರಡು ಲಕ್ಷ ರೂ.ವರೆಗೆ ಸುಲಭವಾಗಿ ಸಾಲ ದೊರೆಯಲಿದೆ ಎಂದು ಫೇಸ್‌ಬುಕ್‌ನಲ್ಲಿದ್ದ ಜಾಹೀರಾತು ನಂಬಿ ಕರೆ ಮಾಡಿದ್ದ ಭದ್ರಾವತಿ ಯುವಕನಿಗೆ (ಹೆಸರು ಗೌಪ್ಯ) 36,500 ರೂ. ವಂಚನೆಯಾಗಿದೆ. ಜಾಹೀರಾತಿನಲ್ಲಿದ್ದ ಮೊಬೈಲ್‌ ನಂಬರ್‌ಗೆ ಭದ್ರಾವತಿಯ ಯುವಕ ಕರೆ ಮಾಡಿದ್ದ. ಅತ್ತ ಕಡೆಯಿಂದ ಮಾತನಾಡಿದ ವ್ಯಕ್ತಿ ತಾವು ಮಂಗಳೂರಿನ ಫೈನಾನ್ಸ್‌ ಸಂಸ್ಥೆ ಎಂದು ಪರಿಚಯಿಸಿಕೊಂಡಿದ್ದ. ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ ಬುಕ್‌ ವಿವರ, ಪ್ಯಾನ್‌ ಕಾರ್ಡ್‌ ವಾಟ್ಸಪ್‌ ಮಾಡುವಂತೆ … Read more

ಮನೆಗೆ ಬೆಂಕಿ, ಧಗಧಗ ಹೊತ್ತಿ ಉರಿದ ಹಣ, ಗೃಹೋಪಯೋಗಿ ವಸ್ತುಗಳು

Bhadravathi-Short-Circuit-at-a-house

SHIVAMOGGA LIVE NEWS | 20 JANUARY 2024 BHADRAVATHI : ಆಕಸ್ಮಿಕ ಬೆಂಕಿಗೆ ಮನೆಯಲ್ಲಿದ್ದ ವಸ್ತುಗಳು ಸುಟ್ಟು ಹೋಗಿವೆ. ಭದ್ರಾವತಿ ಪಟ್ಟಣದ ಹಳದಮ್ಮ ಬೀದಿಯಲ್ಲಿ ಘಟನೆ ಸಂಭವಿಸಿದೆ. ಶಾರ್ಟ್‌ ಸರ್ಕಿಟ್‌ನಿಂದಾಗಿ ಬೆಂಕಿ ಹೊತ್ತುಕೊಂಡಿರಬಹುದು ಎಂದು ಶಂಕಿಸಲಾಗಿದೆ. ವಾಸು ಎಂಬುವವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಲಕ್ಷಾಂತರ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸುಟ್ಟು ಹಾನಿಯಾಗಿವೆ. ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಇದನ್ನೂ ಓದಿ – ವೀಲಿಂಗ್‌ ಮಾಡಿದವರಿಗೆ ಮತ್ತೆ … Read more

ಪೆನ್ಸಿಲ್‌ ಲೆಡ್‌ನಲ್ಲಿ 1 ಸೆಂಟಿ ಮೀಟರ್‌ನ ರಾಮ ಮಂದಿರ ನಿರ್ಮಿಸಿದ ಭದ್ರಾವತಿ ಯುವಕ, ಹೇಗಿದೆ? ನಿರ್ಮಿಸಿದ್ದು ಹೇಗೆ?

One-cm-ram-mandir-in-pencil-led-by-bhadravathi-varun-achar.

SHIVAMOGGA LIVE NEWS | 19 JANUARY 2024 BHADRAVATHI : ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಈ ಮಧ್ಯೆ ಭದ್ರಾವತಿಯ ಮೈಕ್ರೋ ಆರ್ಟಿಸ್ಟ್‌ ವರುಣ್‌ ಆಚಾರ್‌ ಪೆನ್ಸಿಲ್‌ ಲೆಡ್‌ನಲ್ಲಿ ರಾಮ ಮಂದಿರದ ಮಾದರಿ ನಿರ್ಮಿಸಿದ್ದಾರೆ. ಪೆನ್ಸಿಲ್‌ ಲೆಡ್‌ನಲ್ಲಿ ನಿರ್ಮಿಸಿರುವ ರಾಮ ಮಂದಿರದ ಮಾದರಿಯು 1 ಸೆಂಟಿ ಮೀಟರ್‌ನಷ್ಟಿದೆ. ರಾಮ ಮಂದಿರದ ಗೋಪುರಗಳು, ಮೇಲೆ ಕೇಸರಿ ಧ್ವಜವಿದೆ. ಅತ್ಯಂತ ಸೂಕ್ಷ್ಮವಾಗಿ, ಸ್ಪಷ್ಟವಾಗಿ ಮಾದರಿಯನ್ನು ನಿರ್ಮಿಸಿದ್ದಾರೆ. ಭದ್ರಾವತಿ ಓಲ್ಡ್‌ ಟೌನ್‌ ನಿವಾಸಿ ವರುಣ್‌ ಆಚಾರ್‌ ಸಹಕಾರ … Read more

ಅಡಿಕೆ ತುಂಬಿದ್ದ ಬೊಲೇರೊ ಪಿಕಪ್‌ ಪಲ್ಟಿ, ಮೂವರು ಸಾವು

Bolero-Pick-up-near-chinnikatte-joga

SHIVAMOGGA LIVE NEWS | 15 JANUARY 2024 HOLEHONNURU : ಹಸಿ ಅಡಿಕೆ ತುಂಬಿದ್ದ ಬೊಲೇರೊ ಪಿಕಪ್‌ ವಾಹನ ಪಲ್ಟಿಯಾಗಿ ಮೂವರು ಸಾವನ್ನಪ್ಪಿದ್ದಾರೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿನ್ನಿಕಟ್ಟೆ ಜೋಗದ ಬಳಿಕ ಘಟನೆ ಸಂಭವಿಸಿದೆ. ಭದ್ರಾವತಿ ತಾಲೂಕು ಚಂದನಕೆರೆಯ ಮಂಜುನಾಥ್‌ (40), ನಾಗರಾಜ್‌ (42) ಮತ್ತು ಗೌತಮ್‌ (18) ಮೃತಪಟ್ಟಿದ್ದಾರೆ. ಅಪಘಾತ ಸಂಭವಿಸಿದ್ದು ಹೇಗೆ? ಚಂದನಕೆರೆಯ ಅಡಿಕೆ ಖೇಣಿದಾರ ಬಸಪ್ಪ ಎಂಬುವವರು ಶಿಕಾರಿಪುರ ಸಮೀಪ ಅರಿಶಿನಗೆರೆ ಅಡಿಕೆ ತೋಟದಲ್ಲಿ ಅಡಿಕೆ ಕೊಯ್ಲು ಮಾಡಿಸಿದ್ದರು. ಇದಕ್ಕಾಗಿ ಏಳು … Read more

ಭದ್ರಾವತಿಯ ಚಂದ್ರೇಗೌಡ, ಬಾಲಕೃಷ್ಣ ಕಾಂಗ್ರೆಸ್‌ ಪಕ್ಷದಿಂದ ಉಚ್ಛಾಟನೆ

-Congress-Party-Office-Shimoga

SHIVAMOGGA LIVE NEWS | 11 JANUARY 2024 BHADRAVATHI : ಕಾಂಗ್ರೆಸ್ ಮುಖಂಡ ಟಿ.ಚಂದ್ರೇಗೌಡ ಹಾಗೂ ಬಾಲಕೃಷ್ಣ ಅವರನ್ನು ಪಕ್ಷದ ಜಿಲ್ಲಾಧ್ಯಕ್ಷರ ಆದೇಶದ ಮೇರೆಗೆ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ನಗರ ಅಧ್ಯಕ್ಷ ಹಾಗೂ ಜಿಪಂ ಮಾಜಿ ಸದಸ್ಯ ಎಸ್.ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಚಂದ್ರೇಗೌಡ ಹಾಗೂ ಬಾಲಕೃಷ್ಣ ಅವರು ಬಿಜೆಪಿ ಹಾಗೂ ಜೆಡಿಎಸ್ ಜತೆಗೆ ಸೇರಿ ಶಾಸಕ ಬಿ.ಕೆ.ಸಂಗಮೇಶ್ವರ, ಅವರ ಮಕ್ಕಳು, ಪಕ್ಷದ ಅಧ್ಯಕ್ಷರು, ಮುಖಂಡರ ವಿರುದ್ಧ ಸಾರ್ವಜನಿಕ ಸ್ಥಳಗಳಲ್ಲಿ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ. ಪಕ್ಷ … Read more