‘ಆಗ ನಾನೇ ತಪ್ಪು ಮಾಡಿಬಿಟ್ಟೆ, ಇಲ್ಲವಾಗಿದ್ದಲ್ಲಿ ಸಂಗಮೇಶ್ವರ್ ನನ್ನ ಸಂಪುಟದಲ್ಲಿ ಮಂತ್ರಿಯಾಗಿರುತ್ತಿದ್ದರು’

Siddaramaiah-and-Sangameshwara-in-Bhadravathi.

BHADRAVATHI| ನಾನು ಮುಖ್ಯಮಂತ್ರಿ ಆಗಿದ್ದಾಗ ಸಂಗಮೇಶ್ವರ್ ಅವರಿಗೆ ಟಿಕೆಟ್ ಕೊಡದೆ ತಪ್ಪು ಮಾಡಿಬಿಟ್ಟೆ ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಶ್ಚಾತ್ತಾಪದ ನುಡಿಗಳನ್ನು ಆಡಿದರು. (siddaramaiah at bhadravathi) ಭದ್ರಾವತಿಯ ಕನಕ ಮಂಟಪ ಮೈದಾನದಲ್ಲಿ ಶಾಸಕ ಸಂಗಮೇಶ್ವರ ಅವರ 60ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಸಂಗಮೇಶೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭ ಸಂಗಮೇಶ್ವರ್ ಅವರಿಗೆ ಟಿಕೆಟ್ ನೀಡದೆ ಅನ್ಯಾಯ ಮಾಡಿಬಿಟ್ಟೆ. ಆಗ ನನ್ನ ಸ್ನೇಹಿತ ಸಿ.ಎಂ.ಇಬ್ರಾಹಿಂಗೆ ಟಿಕೆಟ್ ಕೊಟ್ಟುಬಿಟ್ಟೆವು. … Read more

ಬೈಪಾಸ್ ರಸ್ತೆಯಲ್ಲಿ ವ್ಯಕ್ತಿ ಕಣ್ಣಿಗೆ ಖಾರದ ಪುಡಿ ಎರಚಿ, ಬಿಯರ್ ಬಾಟಲಿಯಿಂದ ತಲೆಗೆ ಹೊಡೆದ ಅಪರಿಚಿತರು

crime name image

BHADRAVATHI| ರಸ್ತೆ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡುತ್ತ ನಿಂತಿದ್ದ ವ್ಯಕ್ತಿಗೆ ಹಿಂದಿನಿಂದ ಬಂದು ಕಣ್ಣಿಗೆ ಖಾರದ ಪುಡಿ ಎರಚಿ, ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಇಬ್ಬರು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. (attack at bypass road) ಭದ್ರಾವತಿ ಬೈಪಾಸ್ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ನರೇಂದ್ರ ಎಂಬಾತ ಗಾಯಗೊಂಡಿದ್ದಾರೆ. ಅವರನ್ನು ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. (attack at bypass road) ಘಟನೆಗೇನು ಕಾರಣ? ಡ್ರೈ ಫ್ರೂಟ್ ವ್ಯಾಪಾರ ಮಾಡುತ್ತಿರುವ ನೆರೇಂದ್ರ ಅವರು ಗುರುವಾರ ರಾತ್ರಿ ತಮ್ಮ ಮನೆಯಿಂದ ಬೈಪಾಸ್ … Read more

ಶಿವಮೊಗ್ಗಕ್ಕೆ ಇವತ್ತು ಡಿ.ಕೆ.ಶಿವಕುಮಾರ್ ಭೇಟಿ, ಎಲ್ಲೆಲ್ಲಿ ಕಾರ್ಯಕ್ರಮ ನಿಗದಿಯಾಗಿದೆ?

DK-Shivakumar-In-Shimoga-Helipad

SHIMOGA | ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇವತ್ತು ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಸಾಗರ, ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ರಾತ್ರಿ ಶಿವಮೊಗ್ಗದಲ್ಲಿ ಅವರು ವಾಸ್ತವ್ಯ ಮಾಡಲಿದ್ದಾರೆ. (DK shivakumar visit to shimoga) (DK shivakumar visit to shimoga) ಎಲ್ಲಿಗೆಲ್ಲ ಭೇಟಿ ನೀಡಲಿದ್ದಾರೆ? ಡಿ.ಕೆ.ಶಿವಕುಮಾರ್ ಅವರು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಹೊರಡಲಿದ್ದಾರೆ. 11.30ಕ್ಕೆ ಸಾಗರಕ್ಕೆ ಆಗಮಿಸಲಿದ್ದಾರೆ. ತ್ಯಾಗರ್ತಿ ಹೋಬಳಿಯ ಹುತ್ತದಿಂಬ ಗ್ರಾಮದ ಕಾರ್ಯಕರ್ತ ರಮೇಶ್ ಅವರ ಮನೆಗೆ ತೆರಳಲಿದ್ದಾರೆ. … Read more

ಬಿಆರ್‌ಪಿಗೆ ತೆರಳಿದ್ದ ಪ್ರೇಮಿಗಳ ಸುಲಿಗೆ, ಮೂವರು ಬಂಧನ, ಏನೇನೆಲ್ಲ ಸಿಕ್ಕಿದೆ?

Two-arrest-in-BRP-robbery-case.

BHADRAVATHI | ಭದ್ರಾವತಿ ತಾಲೂಕಿನ ಬಿಆರ್‌ಪಿಗೆ ತೆರಳಿದ್ದ ಪ್ರೇಮಿಗಳ ಸುಲಿಗೆ ಮಾಡಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದು 3.65 ಲಕ್ಷ ರೂ. ಮೌಲ್ಯದ ವಸ್ತು ವಶಕ್ಕೆ ಪಡೆದಿದ್ದಾರೆ. (lovers robbery) ಭದ್ರಾವತಿ ತಾರಿಕಟ್ಟೆ ಗ್ರಾಮದ ಸತ್ಯಾನಂದ ಅಲಿಯಾಸ್ ಸ್ನೇಕ್ ಸತ್ಯ (22), ಮೂಲೆಕಟ್ಟೆ ಗ್ರಾಮದ ಟಿ.ಬಾಬು ಅಲಿಯಾಸ್ ಜೋಶ್ವಾ (19) ಮತ್ತು ಬೆಂಗಳೂರು ಜಾಲಹಳ್ಳಿ ಕ್ರಾಸ್‌ನ ವೆಂಕಟೇಶ್ ಅಲಿಯಾಸ್ ಬೆಳ್ಳಿ (22) ಬಂಧಿತರು. ಕ್ಲಿಕ್ ಮಾಡಿ ಇದನ್ನೂ ಓದಿ | ಹಿಂದೂ ಹರ್ಷ ಕುಟುಂಬಕ್ಕೆ ಬೆದರಿಕೆ ಆರೋಪ, ವಿಚಾರಣೆ ವೇಳೆ … Read more

ಮರಿಗಳೊಂದಿಗೆ ದೊಡ್ಡಿಗೆ ನುಗ್ಗಿ ಕುರಿಗಳನ್ನು ಕೊಂದು ಹಾಕಿದ ಹೆಣ್ಣು ಚಿರತೆ

holehonnur name graphics

HOLEHONNUR | ಚಿರತೆಯೊಂದು ತನ್ನ ಮರಿಗಳೊಂದಿಗೆ ಕುರಿ ದೊಡ್ಡಿಗೆ ನುಗ್ಗಿ 5 ಕುರಿಗಳನ್ನು ಕೊಂದು ಹಾಕಿದೆ. (CHEETAH ATTACK) ಭದ್ರಾವತಿ ತಾಲೂಕು ಅರಸನಘಟ್ಟ ತಾಂಡಾದಲ್ಲಿ ಘಟನೆ ಸಂಭವಿಸಿದೆ. ಹೆಣ್ಣು ಚಿರತೆಯೊಂದು ತನ್ನ ನಾಲ್ಕೈದು ಮರಿಗಳೊಂದಿಗೆ ಮಂಜಿಬಾಯಿ ಎಂಬುವವರಿಗೆ ಸೇರಿದ ಕುರಿ ದೊಡ್ಡಿಗೆ ನುಗ್ಗಿ ಕುರಿಗಳನ್ನು ಕೊಂದು ಹಾಕಿದೆ. 4 ಕುರಿಗಳ ಕುತ್ತಿಗೆ ಕಚ್ಚಿ ಅಲ್ಲಿಯೆ ಬಿಟ್ಟು ಹೋಗಿವೆ. ಒಂದು ಕುರಿಯನ್ನು ಎಳೆದುಕೊಂಡು ಹೋಗಿ ಚಾನಲ್ ದಂಡೆ ಮೇಲೆ ತಿಂದು ಹಾಕಿವೆ. ಅರಸನಘಟ್ಟ, ಆದ್ರಿಹಳ್ಳಿ, ದಿಗ್ಗೆಹಳ್ಳಿ ಭಾಗದಲ್ಲಿ ಹೆಣ್ಣು … Read more

ಭದ್ರಾವತಿಗೆ ಸಿದ್ದರಾಮಯ್ಯ ಭೇಟಿ, ಶಿವಮೊಗ್ಗದಲ್ಲಿ ವಾಸ್ತವ್ಯ, ಎಲ್ಲಿಗೆಲ್ಲ ತೆರಳಲಿದ್ದಾರೆ?

Siddaramaiah-in-Shimoga-Helipad.

BHADRAVATHI | ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭದ್ರಾವತಿಗೆ ಭೇಟಿ ನೀಡುತ್ತಿದ್ದಾರೆ. ಶಾಸಕ ಸಂಗಮೇಶ್ವರ್ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾತ್ರಿ ಶಿವಮೊಗ್ಗದಲ್ಲಿಯೆ ವಾಸ್ತವ್ಯ ಹೂಡಲಿದ್ದಾರೆ. (SIDDARAMAIAH VISIT TO BHADRAVATHI) ಅ.28ರಂದು ಮಧ್ಯಾಹ್ನ 3.45ಕ್ಕೆ ಭದ್ರಾವತಿಯ ಮಿಲಿಟರಿ ಕ್ಯಾಂಪಸ್ ಹೆಲಿಪ್ಯಾಡ್ ಗೆ ಸಿದ್ದರಾಮಯ್ಯ ಅವರು ಆಗಮಿಸಲಿದ್ದಾರೆ. ಶಾಸಕ ಸಂಗಮೇಶ್ವರ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ. ರಾತ್ರಿ 8.30ಕ್ಕೆ ಶಿವಮೊಗ್ಗಕ್ಕೆ ಆಗಮಿಸುವ ಸಿದ್ದರಾಮಯ್ಯ ಅವರು ವಾಸ್ತವ್ಯ ಮಾಡಲಿದ್ದಾರೆ. ಅ.29ರಂದು ಬೆಳಗ್ಗೆ 10 ಗಂಟೆಗೆ ಹೆಲಿಕಾಪ್ಟರ್ ಮೂಲಕ … Read more

ಭದ್ರಾವತಿಯಲ್ಲಿ ಶಿವಮೊಗ್ಗದ ಆಟೋ ಚಾಲಕನ ಕೊಲೆ ಕೇಸ್, ಇಬ್ಬರು ಆರೆಸ್ಟ್, ಯಾರದು? ಕಾರಣವೇನು?

Bhadravathi-Old-town-police-arrest-two-in-murder-case

BHADRAVATHI | ದೊಣ್ಣೆಯಿಂದ ಹೊಡೆದು ಆಟೋ ಚಾಲಕನ ಕೊಲೆ ಪ್ರಕರಣ ಸಂಬಂಧ ಭದ್ರಾವತಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪರಿಚಿತರೆ ಆಟೋ ಚಾಲಕನ ಹತ್ಯೆ ಮಾಡಿದ್ದಾರೆ. (auto driver) ಭದ್ರಾವತಿ ತಾಲೂಕು ಕಾಚಗೊಂಡನಹಳ್ಳಿಯ ಕುಶಾಲ್ ಕುಮಾರ್  ಮತ್ತು ಹುತ್ತಾ ಕಾಲೋನಿಯ ಸೋಮಶೇಖರ್ ಅಲಿಯಾಸ್ ಮುಟ್ಟ ಅಲಿಯಾಸ್ ಕಪ್ಪೆ ಬಂಧಿತರು. (auto driver) ದೊಣ್ಣೆಯಿಂದ ಹೊಡೆದು ಕೊಲೆ ಅ.24ರಂದು ಬೆಳಗ್ಗೆ ಭದ್ರಾವತಿಯ ಎಪಿಎಂಸಿ ಆವರಣದ ಮ್ಯಾಮ್ಕೋಸ್ ಕಟ್ಟಡದ ಬಳಿ ಖಾಲಿ ಜಾಗದಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿತ್ತು. ಪೊಲೀಸರು ಸ್ಥಳಕ್ಕೆ … Read more

ಭದ್ರಾವತಿಯಲ್ಲಿ ಶಿವಮೊಗ್ಗದ ಆಟೋ ಚಾಲಕನ ಹತ್ಯೆ, ಮೃತದೇಹದ ಪಕ್ಕದಲ್ಲಿ ಸಿಕ್ತು ರಕ್ತಸಿಕ್ತ ದೊಣ್ಣೆ

murder graphical image

BHADRAVATHI | ಶಿವಮೊಗ್ಗದ ಆಟೋ ಚಾಲಕನನ್ನು ಭದ್ರಾವತಿಯಲ್ಲಿ ಹತ್ಯೆ ಮಾಡಲಾಗಿದೆ‌. ಬೆಳಗ್ಗೆ ಆತನ ಮೃತದೇಹ ಪತ್ತೆಯಾಗಿದೆ. (AUTO DRIVER MURDER) ರೂಪೇಶ್ ಕುಮಾರ್ (45) ಎಂಬಾತನ ಹತ್ಯೆಯಾಗಿದೆ. ಎಪಿಎಂಸಿ ಬಳಿ ಘಟನೆ ನಡೆದಿದೆ. ದೊಣ್ಣೆಗಳಿಂದ ತಲೆಗೆ ಹೊಡೆದು ಹತ್ಯೆ ಮಾಡಿರುವ ಶಂಕೆ ಇದೆ. ಮೃತದೇಹದ ಪಕ್ಕದಲ್ಲಿ ರಕ್ತಸಿಕ್ತವಾದ ದೊಣ್ಣೆ ಪತ್ತೆಯಾಗಿದೆ. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ರೂಪೇಶ್ ಕುಮಾರ್ ಮೂಲತಃ ಹೊಳೆಹೊನ್ನೂರಿನವರು. ಶಿವಮೊಗ್ಗದಲ್ಲಿ ನೆಲೆಸಿದ್ದ ಆತ ಆಟೋ ಚಾಲನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಘಟನೆ ಸಂಬಂಧ … Read more

ಮೂರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಆರೋಪಿಗೆ ಕಠಿಣ ಶಿಕ್ಷೆ ಪ್ರಕಟ, ಶಿಕ್ಷೆ ಏನು?

Posco-case-20-year-jail-for-Bhadravathi-Raghavendra

SHIMOGA | ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ ಹಿನ್ನೆಲೆ ಅಪರಾಧಿಗೆ ಶಿವಮೊಗ್ಗ ನ್ಯಾಯಾಲಯ ಕಠಿಣ ಶಿಕ್ಷೆ (imprisonment) ನೀಡಿದೆ. ಭದ್ರಾವತಿ ತಾಲೂಕಿನ ಗ್ರಾಮವೊಂದರ ನಿವಾಸಿ ರಾಘವೇಂದ್ರ ದುಷ್ಕೃತ್ಯ ಎಸಗಿರುವುದು ಸಾಬೀತಾಗಿದೆ. ಏನಿದು ಪ್ರಕರಣ? (imprisonment) ಭದ್ರಾವತಿ ತಾಲೂಕು ಗ್ರಾಮವೊಂದರ ವಾಸಿ ರಾಘವೇಂದ್ರ, 3 ವರ್ಷ 4 ತಿಂಗಳ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಸಂಬಂಧ ಬಾಲಕಿಯ ತಾಯಿ ದೂರು ನೀಡಿದ್ದರು. ತನಿಖೆ ನಡೆಸಿದ ಭದ್ರಾವತಿ ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಆಗಿದ್ದ … Read more

ರಸ್ತೆ ಪಕ್ಕ ನಿಂತಿದ್ದ ಬೈಕಿಗೆ ಹಿಂಬದಿಯಿಂದ ಮತ್ತೊಂದು ಬೈಕ್ ಡಿಕ್ಕಿ, ಯುವತಿ ಕಾಲಿಗೆ ಗಂಭೀರ ಗಾಯ

Hunasekatte-Junction-Bhadravathi-Umblebyle

BHADRAVATHI | ಪೆಟ್ರೋಲ್ (PETROL) ಖಾಲಿ ಆಗಿದ್ದರಿಂದ ರಸ್ತೆ ಪಕ್ಕ ಬೈಕ್ ನಿಲ್ಲಿಸಿಕೊಂಡು ಪರಿಶೀಲಿಸುತ್ತಿದ್ದಾಗ, ಹಿಂಬದಿಯಿಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಯುವತಿಯ ಕಾಲಿಗೆ ಗಂಭೀರ ಗಾಯವಾಗಿದೆ. ಭದ್ರಾವತಿ ತಾಲೂಕು ಜಂಕ್ಷನ್ ಸಮೀಪ ಘಟನೆ ಸಂಭವಿಸಿದೆ. ಗೋಣಿಬೀಡು ಗ್ರಾಮದ ಅರುಂಧತಿ ಅವರು ಗಾಯಗೊಂಡಿದ್ದಾರೆ. ಹೇಗಾಯ್ತು ಘಟನೆ? (PETROL) ಅರುಂಧತಿ ಅವರು ತಮ್ಮ ಸಂಬಂಧಿ ಅಭಿಷೇಕ್ ಎಂಬುವವರೊಂದಿಗೆ ಶಿವಮೊಗ್ಗದಿಂದ ತಮ್ಮೂರಿಗೆ ಬೈಕಿನಲ್ಲಿ ತೆರಳುತ್ತಿದ್ದರು. ಜಂಕ್ಷನ್ ಸಮೀಪ ಬೈಕ್ ಪೆಟ್ರೋಲ್ (PETROL) ಖಾಲಿಯಾಗಿತ್ತು. ಹಾಗಾಗಿ ಬೈಕನ್ನು ರಸ್ತೆ ಪಕ್ಕಕ್ಕೆ … Read more