SHIRALAKOPPA | ಪಟ್ಟಣ ಪಂಚಾಯಿತಿಗೆ ಸೇರಿದ ಹೊಚ್ಚ ಹೊಸ ಟ್ರಾಕ್ಟರ್ ರಾತ್ರೋರಾತ್ರಿ ನಾಪತ್ತೆ

143879629 1321328578228559 109114340272215003 n 1

ಶಿವಮೊಗ್ಗ ಲೈವ್.ಕಾಂ | SHIRALAKOPPA NEWS | 03 FEBRUARY 2021 ಶಿರಾಳಕೊಪ್ಪ ಪಟ್ಟಣ ಪಂಚಾಯಿತಿಗೆ ಸೇರಿದ್ದ ಹೊಚ್ಚ ಹೊಸ ಟ್ರಾಕ್ಟರ್ ಕಳ್ಳತನವಾಗಿದೆ. ಟ್ರಾಕ್ಟರ್‍ಗೆ ಇನ್ನೂ ನೋಂದಣಿ ಕೂಡ ಆಗಿರಲಿಲ್ಲ. ಹೇಗಾಯ್ತು ಕಳ್ಳತನ? ಘನ ತ್ಯಾಜ್ಯ ನಿರ್ವಹಣೆಗೆ ಹೊಸದಾಗಿ ಟ್ರಾಕ್ಟರ್‍ಗಳನ್ನು ಖರೀದಿಸಲಾಗಿತ್ತು. ಪಟ್ಟಣದ ಸರ್ಕಾರಿ ಆಸ್ಪತ್ರೆ ಹಿಂಭಾಗದಲ್ಲಿ ಇರುವ ಪಟ್ಟಣ ಪಂಚಾಯಿತಿಯ ಜಲ ಶುದ್ಧೀಕರಣ ಘಟಕದ ಆವರಣದಲ್ಲಿ ಅದನ್ನು ನಿಲ್ಲಿಸಲಾಗಿತ್ತು. ಜನವರಿ 30ರ ರಾತ್ರಿ ಟ್ರಾಕ್ಟರ್ ನಾಪತ್ತೆಯಾಗಿದೆ. ನೋಂದಣಿಯೇ ಆಗಿರಲಿಲ್ಲ ಪಟ್ಟಣ ಪಂಚಾಯಿತಿಗಾಗಿ ಇತ್ತೀಚೆಗಷ್ಟೆ 5.50 ಲಕ್ಷ … Read more

SHIMOGA | ಆಪರೇಷನ್ ಒಂಟಿ ಸಲಗ ಶುರು, ಬೆಳಗ್ಗೆಯಿಂದ ಅರಣ್ಯದಲ್ಲಿ ಕೂಂಬಿಂಗ್

030221 Operation Elephant at Umblebyle 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 03 FEBRUARY 2021 ಉಂಬ್ಳೆಬೈಲು ಅರಣ್ಯ ವ್ಯಾಪ್ತಿಯಲ್ಲಿ ‘ಆಪರೇಷನ್ ಒಂಟಿ ಸಲಗ’ ಶುರುವಾಗಿದೆ. ಐದಾರು ವರ್ಷದಿಂದ ಇಲ್ಲಿ ಬೆಳೆ ನಾಶ ಮಾಡುತ್ತ, ಜನರಲ್ಲಿ ಆತಂಕ ಮೂಡಿಸಿರುವ ಒಂಟಿ ಸಲಗ ಸೆರೆ ಹಿಡಿಯುವ ಕಾರ್ಯ ನಡೆಯುತ್ತಿದೆ. ಸಕ್ರೆಬೈಲಿನಿಂದ ಆನೆಗಳ ಆಗಮನ ಒಂಟಿ ಸಲಗವನ್ನು ಹಿಡಿಯಲು ಸಕ್ರೆಬೈಲು ಆನೆ ಬಿಡಾರದ ಮೂರು ಆನೆಗಳು ಕಾರ್ಯಾಚರಣೆಗೆ ಇಳಿದಿವೆ. ಉಂಬ್ಳೆಬೈಲು ಅರಣ್ಯ ವ್ಯಾಪ್ತಿಯಲ್ಲಿ ಇವತ್ತು ಬೆಳಗ್ಗೆಯಿಂದಲೇ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ | ಇದು ಸಣ್ಣ … Read more

BHADRAVATHI | ದೊಡ್ಡೇರಿ ಬಳಿ ಭೀಕರ ಅಪಘಾತ, ಹೊಸಮನೆಯ ಯುವಕ ಸೇರಿ ಇಬ್ಬರ ಸಾವು

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 03 FEBRUARY 2021 ಟ್ರಾಕ್ಟರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ. ಭದ್ರಾವತಿ ತಾಲೂಕು ದೊಡ್ಡೇರಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಭದ್ರಾವತಿಯ ಹೊಸಮನೆ ನಿವಾಸಿ ರಘು (32) ಮತ್ತು ತರೀಕೆರೆಯ ಇಟಿಗಿ ಗ್ರಾಮದ ಶಿವು (30) ಮೃತರು. ಭದ್ರಾವತಿಯಿಂದ ಶಿವನಿ ಗ್ರಾಮಕ್ಕೆ ತೆರಳುತ್ತಿದ್ದ ಟ್ರಾಕ್ಟರ್ ಮತ್ತು ದೊಡ್ಡೇರಿ ಗ್ರಾಮದಿಂದ ಭದ್ರಾವತಿ ಕಡೆಗೆ ತೆರಳುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಬೈಕ್‍ನಲ್ಲಿದ್ದ ರಘು ಮತ್ತು ಶಿವು ಮೃತಪಟ್ಟಿದ್ದಾರೆ. … Read more

THIRTHAHALLI | ದನಕ್ಕೆ ಹೊಡೆದವನ ಮೇಲೆ ಮಾಲೀಕನಿಂದ ಹಲ್ಲೆ, ಜೆಸಿ ಆಸ್ಪತ್ರೆಗೆ ದಾಖಲು

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 03 FEBRUARY 2021 ತೋಟದೊಳಗೆ ನುಗ್ಗಿದ್ದ ದನಕ್ಕೆ ಹೊಡೆದಿದ್ದ ವ್ಯಕ್ತಿ ಮೇಲೆದನದ ಮಾಲೀಕ ಹಲ್ಲೆ ನಡೆಸಿದ್ದಾನೆ. ಅಲ್ಲದೆ ದನಕ್ಕೆ ಹೊಡೆದಿದ್ದಕ್ಕೆ ಪಂಚಾಯಿತಿ ವತಿಯಿಂದ ಮೂರು ಸಾವಿರ ರೂ. ದಂಡ ವಿಧಿಸಲಾಗಿದೆ. ತೋಟಕ್ಕೆ ನುಗ್ಗಿದ್ದ ದನ ಓಡಿಸಿದ್ದರು ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿ ಬಿದರಗೋಡು ಗ್ರಾಮದ ಸತೀಶ್ ಎಂಬುವವರು ಹಲ್ಲೆಗೊಳಗಾದವರು. ಶಂಕರಗೌಡ ಎಂಬುವವರ ತೋಟದಲ್ಲಿ ಸತೀಶ್ ಕೆಲಸ ಮಾಡುತ್ತಿದ್ದರು. ಮೂರು ದಿನದ ಹಿಂದೆ ಶಂಕರಗೌಡ ಅವರ ತೋಟಕ್ಕೆ ನುಗ್ಗಿದ್ದ … Read more

SHIMOGA | ಉಂಬ್ಳೆಬೈಲು ಅರಣ್ಯದ ಒಂಟಿ ಸಲಗ ಸೆರೆಗೆ ಕಾರ್ಯಾಚರಣೆ, ಹೇಗಿರುತ್ತೆ ಆಪರೇಷನ್?

020221 UMBLEBYLE ELEPHANT news 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 02 FEBRUARY 2021 ಉಂಬ್ಳೆಬೈಲು ಅರಣ್ಯ ವಲಯದಲ್ಲಿ  ಬೆಳೆ ನಾಶ ಮಾಡುತ್ತಿರುವ ಕಾಡಾನೆಗಳನ್ನು ಹಿಡಿಯಲು ಸಕ್ರೆಬೈಲು ಬಿಡಾರದ ಆನೆಗಳು ಸಜ್ಜಾಗಿವೆ. ಫೆಬ್ರವರಿ 3ರ ಬೆಳಗ್ಗೆಯಿಂದಲೇ ಕಾರ್ಯಾಚರಣೆ ಆರಂಭವಾಗಲಿದೆ. ಕಾಡಾನೆಗಳ ಉಪಟಳ ಹೆಚ್ಚಾದ ಹಿನ್ನೆಲೆಯಲ್ಲಿ ಅವುಗಳನ್ನು ಹಿಡಿಯಲು ಸರ್ಕಾರ ಸೂಚಿಸಿದೆ. ಅದರನ್ವಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್. ರವಿ ಶಂಕರ್ ಅವರು ವನ್ಯಜೀವಿ ವಿಭಾಗದ ಉಪ ಅರಣ್ಯ  ಸಂರಕ್ಷಣಾಧಿಕಾರಿ ನಾಗರಾಜ್ ಅವರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಅಂತೆಯೆ ಫೆಬ್ರವರಿ … Read more

BHADRAVATHI | ಸದ್ಯದಲ್ಲೇ ಪ್ರಮುಖ ರಸ್ತೆ, ಸರ್ಕಲ್‌ಗಳ ಅಗಲೀಕರಣ, ವರ್ಷ ಮೊದಲೆ ಮುಗಿಯಿತು ಯುಜಿಡಿ ಕೆಲಸ

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 02 FEBRUARY 2021 ಭದ್ರಾವತಿ ನಗರದ ಪ್ರಮುಖ ರಸ್ತೆಗಳು ಮತ್ತು ಸರ್ಕಲ್‍ಗಳನ್ನು ಸದ್ಯದಲ್ಲೇ ಅಗಲೀಕರಣ ಮಾಡಲಾಗುತ್ತದೆ ಎಂದು ನಗರಸಭೆ ಆಯುಕ್ತ ಮನೋಹರ್ ಅವರು ತಿಳಿಸಿದ್ದಾರೆ. ಸರ್.ಎಂ.ವಿ.ಸಭಾಂಗಣದಲ್ಲಿ ಇವತ್ತು ನಗರಸಭೆಯ ಆಯವ್ಯಯದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಆಯುಕ್ತ ಮನೋಹರ್, ಭದ್ರಾವತಿ ಪಟ್ಟಣದ ರಂಗಪ್ಪ ಸರ್ಕಲ್, ಮಾಧವಾಚಾರ್ ಸರ್ಕಲ್ ಸೇರಿದಂತೆ ವಿವಿಧ ವೃತ್ತಗಳ ಅಗಲೀಕರಣ ಮಾಡಲಾಗುತ್ತದೆ. ಚನ್ನಗಿರಿ ರಸ್ತೆಯ ಅಗಲೀಕರಣ ಕಾರ್ಯವು ನಡೆಯಲಿದೆ. ಇದರ ಜೊತೆಗೆ ಇನ್ನಷ್ಟು ರಸ್ತೆ, ಸರ್ಕಲ್‍ ಗಳ … Read more

SHIKARIPURA | 43 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟ

SHIKARIPURA MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 02 FEBRUARY 2021 ಶಿಕಾರಿಪುರ ತಾಲೂಕಿನ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ  ಇವತ್ತು ಮೀಸಲಾತಿ ಪ್ರಕಟಿಸಲಾಗಿದೆ. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಶಿಕಾರಿಪುರದಲ್ಲಿ ಅಧಿಕಾರಿಗಳ ಸಭೆ ನಡೆಸಿ, 43 ಗ್ರಾಮ ಪಂಚಾಯಿತಿಗಳ ಮೀಸಲಾಯಿತಿ ಪ್ರಕಟಿಸಿದರು. ಮೀಸಲಾತಿ ಏನು? ಕಾಗಿನಲ್ಲಿ ಗ್ರಾಮ ಪಂಚಾಯಿತಿ – ಅಧ್ಯಕ್ಷ ಪ್ರವರ್ಗ ಎ,  ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಹಿತ್ತಲ ಅಧ್ಯಕ್ಷ ಪ್ರವರ್ಗ ಎ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಕೊರಟೆಗೆರೆ ಪ್ರವರ್ಗ ಎ, ಸಾಮಾನ್ಯ ಮಹಿಳೆ, … Read more

SAGARA | ಕ್ರಿಮಿನಾಶಕ ಸೇವಿಸಿ ಮರೂರು ಗ್ರಾಮದ ರೈತ ಆತ್ಮಹತ್ಯೆ

farmer suicide poison

ಶಿವಮೊಗ್ಗ ಲೈವ್.ಕಾಂ | SAGARA NEWS | 02 FEBRUARY 2021 ಸಾಲ ಹಿಂತಿರುಗಿಸಲಾಗಿದೆ ರೈತರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ  ಮಾಡಿಕೊಂಡಿದ್ದಾರೆ. ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಅಸುನೀಗಿದ್ದಾರೆ. ಸಾಗರ ತಾಲೂಕು ಪಡವಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರು ಗ್ರಾಮದ ರೈತ ಎಂ.ಆರ್.ಉಮೇಶ್ ಗೌಡ (60) ಆತ್ಮಹತ್ಯೆ ಮಾಡಿಕೊಂಡವರು. ಉಮೇಶ್ ಗೌಡ ಅವರು ಬಹುಹೊತ್ತು ಮನೆಯಲ್ಲಿ ಕಾಣಿಸದ ಹಿನ್ನೆಲೆ, ಮನೆಯವರು ಎಲ್ಲೆಡೆ ಹುಡುಕಾಡಿದ್ದಾರೆ. ಮನೆ ಹಿಂಭಾಗ ಖಾಲಿ ಜಾಗದಲ್ಲಿ ಅಸ್ವಸ್ಥರಾಗಿ ಬಿದ್ದಿದ್ದು ಕಂಡು … Read more

THIRTHAHALLI | ಕೋಳಿ ಅಂಕದ ಮೇಲೆ ಪೊಲೀಸರ ದಾಳಿ, ವಶಕ್ಕೆ ಪಡೆದ ಬೈಕ್‌ಗಳನ್ನು ಠಾಣೆಗೆ ತರುತ್ತಿದ್ದಾಗ ಬೆಂಕಿ

010221 Bike Caught Fire at Konandur 1

ಶಿವಮೊಗ್ಗ ಲೈವ್.ಕಾಂ | THIRTHAHALLI CRIME NEWS | 01 FEBRUARY 2021 ಕೋಳಿ ಅಂಕ (ಕೋಳಿ ಜೂಜು) ನಡೆಯುತ್ತಿದ್ದ ಸ್ಥಳದ ಮೇಲೆ ತೀರ್ಥಹಳ್ಳಿ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಅಂಕದಲ್ಲಿ ಪಾಲ್ಗೊಂಡಿದ್ದವರ ಬೈಕುಗಳನ್ನು ವಶಕ್ಕೆ ಪಡೆದು, ಠಾಣೆಗೆ ತರುತ್ತಿದ್ದಾಗ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ನಾಲ್ಕು ಬೈಕುಗಳು ಸುಟ್ಟು ಕರಕಲಾಗಿದೆ. ಏನಿದು ಕೋಳಿ ಅಂಕ? ಎಲ್ಲಿ ನಡೀತಿತ್ತು? ತೀರ್ಥಹಳ್ಳಿ ತಾಲೂಕು ಕೋಣಂದೂರು ಸಮೀಪದ ಅರಳಸುರಳಿ ವ್ಯಾಪ್ತಿಯ ಅರಣ್ಯದಲ್ಲಿ ಕೋಳಿ ಅಂಕ ನಡೆಯುತ್ತಿತ್ತು. ಕೋಳಿಯ ಕಾಲಿಗೆ ಚಾಕು ಕಟ್ಟಿ, … Read more

SHIMOGA | ಮೇಲಿನ ಹನಸವಾಡಿಯಲ್ಲಿ ಭೀಕರ ಅಪಘಾತ, ಬೈಕ್ ಸವಾರರ ದೇಹಗಳು ಪೀಸ್ ಪೀಸ್

010221 Bus and Bike Accident Melina Hanasavadi 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 01 FEBRUARY 2021 ಕೆಎಸ್‍ಆರ್‍ಟಿಸಿ ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಢಿಕ್ಕಿಯ ರಭಸಕ್ಕೆ ದೇಹಗಳು ಛಿದ್ರ ಛಿದ್ರವಾಗಿದೆ. ಮೇಲಿನ ಹನಸವಾಡಿ ಗ್ರಾಮದ ಸಮೀಪ ಘಟನೆ ಸಂಭವಿಸಿದೆ. ಮೃತರನ್ನು ಹೊನ್ನಾಳಿ ತಾಲೂಕು ಬಾಗೋಡಿ ಗ್ರಾಮದ ರಘು (21) ಎಂದು ಗುರುತಿಸಲಾಗಿದೆ. ಯುವತಿಯ ಗುರುತು ಪತ್ತೆ ಹಚ್ಚಲಾಗುತ್ತಿದೆ. ಹೇಗಾಯ್ತು ಆಪಘಾತ? ಕೆಎಸ್‍ಆರ್‍ಟಿಸಿ ಬಸ್ಸು ಶಿವಮೊಗ್ಗದಿಂದ ಹರಿಹರ ಮೂಲಕ ಬೆಂಗಳೂರಿಗೆ ತೆರಳುತ್ತಿತ್ತು. ಎದುರಿನಿಂದ … Read more