ಚಾಲಕನ ನಿಯಂತ್ರಣ ತಪ್ಪಿದ ಲಾರಿ, ಶರಾವತಿ ಹಿನ್ನೀರಿನ ಕಲ್ಲುಹಳ್ಳಕ್ಕೆ ಪಲ್ಟಿ

ಶಿವಮೊಗ್ಗ ಲೈವ್.ಕಾಂ | HOSANAGARA | 25 ಅಕ್ಟೋಬರ್ 2019 ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಶರಾವತಿ ಹಿನ್ನೀರಿನ ಕಲ್ಲುಹಳ್ಳಕೆ ಉರುಳಿ ಬಿದ್ದಿದೆ. ಬೆಳಗಿನ ಜಾವದಲ್ಲಿ ಘಟನೆ ನಡೆದಿದೆ. ಕಲ್ಲಿದ್ದಲು ತುಂಬಿದ್ದ ಲಾರಿ ಮಂಗಳೂರಿನಿಂದ ರಾಣೆಬೆನ್ನೂರಿಗೆ ತೆರಳುತ್ತಿತ್ತು. ಈ ವೇಳೆ ಘಟನೆ ಸಂಭವಿಸಿದೆ. ಚಾಲಕ ಮತ್ತು ಕ್ಲೀನರ್ ಇಬ್ಬರಿಗು ಗಾಯವಾಗಿದೆ. ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200 ಸುದ್ದಿಗಾಗಿ ಕರೆ … Read more

ತಾಲೂಕು ನ್ಯೂಸ್ | ಶಿವಮೊಗ್ಗ ಜಿಲ್ಲೆಯ ಯಾವ್ಯಾವ ತಾಲೂಕಿನಲ್ಲಿ ಏನೇನಾಗಿದೆ? ಇಲ್ಲಿದೆ ಕಂಪ್ಲೀಟ್ ನ್ಯೂಸ್

Taluk News General Map 1

ಶಿವಮೊಗ್ಗ ಲೈವ್.ಕಾಂ | TALUK NEWS | 25 ಅಕ್ಟೋಬರ್ 2019 ಯಾವ್ಯಾವ ತಾಲೂಕಿನಲ್ಲಿ ಏನೇನೆಲ್ಲ ಸುದ್ದಿಯಾಗಿದೆ. ಇಲ್ಲಿದೆ ಎಲ್ಲ ತಾಲೂಕುಗಳ ಕಂಪ್ಲೀಟ್ ನ್ಯೂಸ್. ಒಂದು ನಿಮಿಷಕ್ಕಿಂತಲೂ ಕಡಿಮೆ ಸಮಯದಲ್ಲಿ ಸುದ್ದಿ ನೀಡುವ ಪ್ರಯತ್ನ ಇದು. ವ್ಯಾಪಾರ ನೀತಿ ಒಪ್ಪಂದಕ್ಕೆ ಸಹಿ ಹಾಕದಂತೆ ಆಗ್ರಹ ತೀರ್ಥಹಳ್ಳಿ : ಕೇಂದ್ರ ಸರ್ಕಾರವು ಪ್ರದೇಶಿಕ, ಆರ್ಥಿಕ ಸಹಭಾಗಿತ್ವದ RCEP ಮುಕ್ತ ವ್ಯಾಪಾರದ ಒಪ್ಪಂದಕ್ಕೆ ಸಹಿ ಹಾಕಲು ನಿರ್ಧರಿಸಿದ್ದು, ಭಾರತದ ರೈತರ ಪಾಲಿಗೆ ಮರಣ ಶಾಸನವಾಗಿದೆ. ಇದರಿಂದ ಅಡಕೆ ಬೆಳೆಗಾರರು, ಹೈನುಗಾರಿಕೆಗೆ … Read more

ಭದ್ರಾವತಿಯ ಪುರಾಣ ಪ್ರಸಿದ್ಧ ದೇವಸ್ಥಾನದಲ್ಲಿ ಬಿರುಕು, ಅಲ್ಲಲ್ಲಿ ಸೋರುತ್ತಿದೆ ಮಳೆ ನೀರು, ಭಕ್ತರಲ್ಲಿ ಆತಂಕ

ಶಿವಮೊಗ್ಗ ಲೈವ್.ಕಾಂ | BHADRAVATHI | 23 ಅಕ್ಟೋಬರ್ 2019 ಭಾರೀ ಮಳೆಗೆ ಭದ್ರಾವತಿಯ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ ಸೋರುತ್ತಿದೆ. ಗುರ್ಭಗುಡಿ ಒಳಗೆ ನೀರು ತೊಟ್ಟಿಕ್ಕುತ್ತಿರುವುದು, ಭಕ್ತರನ್ನು ಆತಂಕಕ್ಕೀಡು ಮಾಡಿದೆ. ದೇವಸ್ಥಾನಕ್ಕೆ ಹಾನಿ ಆಗುವ ಭೀತಿ ಎದುರಾಗಿದೆ. ದೇವಸ್ಥಾನದಲ್ಲಿರುವ ಶ್ರೀ ಲಕ್ಷ್ಮೀನರಸಿಂಹ, ಪುರುಷೋತ್ತಮ, ವೇಣುಗೋಪಾಲ ಸ್ವಾಮಿ ದೇವರ ಗರ್ಭಗುಡಿ, ಶುಕನಾಸಿನಿ, ನವರಂಗ, ಹುಂಡಿ ಡಬ್ಬದ ಮೇಲೆ ನೀರು ಸೋರುತ್ತಿದೆ. ಇನ್ನು, ವಿದ್ಯುತ್ ಸ್ವಿಚ್’ಗಳಿರುವ ಭಾಗದಲ್ಲಿಯು ನೀರು ಸೋರುತ್ತಿದೆ. ಮಳೆಯ ಪರಿಣಾಮ ಶ್ರೀ ಲಕ್ಷ್ಮೀನರಸಿಂಹ … Read more

ಹೊಳೆಹೊನ್ನೂರು ಬಳಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶವ ಪತ್ತೆ

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | BHADRAVATHI | 23 ಅಕ್ಟೋಬರ್ 2019 ಕೆರೆ ಕೋಡಿಯಲ್ಲಿ ತೇಲಿ ಹೋಗಿದ್ದ ವ್ಯಕ್ತಿಯ ಶವ ಇವತ್ತು ಪತ್ತೆಯಾಗಿದೆ. ಹೊಳೆಹೊನ್ನೂರು ಸಮೀಪದ ಎಮ್ಮೆಹಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ರವಿ (40) ಮೃತ ವ್ಯಕ್ತಿ. ನಿನ್ನೆ ಸಂಜೆ ಕೊಪ್ಪದ ಕೆರೆ ಕೋಡಿ ಮೇಲೆ ನಡೆದುಕೊಂಡು ಬರುವಾಗ ನೀರಿನ ರಭಸಕ್ಕೆ ಕಾಲು ಜಾರಿ ತೇಲಿ ಹೋಗಿದ್ದರು. ರವಿಗಾಗಿ ರಾತ್ರಿ ಶೋಧ ಕಾರ್ಯ ನಡೆದರು ಪ್ರಯೋಜನವಾಗಿರಲಿಲ್ಲ. ಇವತ್ತು ಬೆಳಗ್ಗೆ ಕೆರೆಯ ಕೆಳಭಾಗದ ಗಿಡದಲ್ಲಿ ಶವ ಸಿಲುಕಿಕೊಂಡಿತ್ತು. ಪೊಲೀಸರು ಸ್ಥಳಕ್ಕೆ … Read more

ವಿಐಎಸ್ಎಲ್ ಕಾರ್ಖಾನೆ ಗೇಟ್ ಮುಂದೆ ಮತ್ತೆ ಮುಷ್ಕರ ಶುರು, ಕಾರಣವೇನು ಗೊತ್ತಾ?

VISL Bhadravathi 1

ಶಿವಮೊಗ್ಗ ಲೈವ್.ಕಾಂ | BHADRAVATHI | 23 ಅಕ್ಟೋಬರ್ 2019 ಭದ್ರಾವತಿ ವಿಎಐಎಸ್ಎಲ್ ಕಾರ್ಖಾನೆ ಮುಂದೆ ಮತ್ತೊಮ್ಮೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಕಾರ್ಮಿಕರು ಸಿದ್ಧತೆ ನಡೆಸದ್ದಾರೆ. ಗುತ್ತಿಗೆ ಕಾರ್ಮಿಕರಿಗೆ ಸರಿಯಾಗಿ ಕೆಲಸ ಕೊಡದೆ ಇರುವುದೆ ಮುಷ್ಕರಕ್ಕೆ ಕಾರಣವಾಗಿದೆ. ಕಾರ್ಖಾನೆ ಉತ್ಪಾದನಾ ಘಟಕಗಳಲ್ಲಿ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರಿಗೆ ತಿಂಗಳಿಗೆ 13 ದಿನಗಳ ಕೆಲಸ ಕೊಡುವುದಾಗಿ ಭರವಸೆ ನೀಡಿದ್ದ ವಿಐಎಸ್‌ಪಿ ಆಡಳಿತ ಮಂಡಳಿ ಸರಿಯಾಗಿ ಕೆಲಸ ನೀಡದೆ ವಚನಭ್ರಷ್ಟವಾಗಿದೆ ಎಂದು ಆರೋಪಿಸಿ ವಿಐಎಸ್‌ಎಲ್ ಕಾಂಟ್ರ್ಯಾಕ್ಟ್ ವರ್ಕರ್ ಯೂನಿಯನ್ (ಸಿಐಟಿಯು), … Read more

ಆಗುಂಬೆಯಿಂದ ಮೇಗರವಳ್ಳಿವರೆಗೆ ಪಾದಯಾತ್ರೆ, ಶಾಸಕ ಆರಗ ಜ್ಞಾನೇಂದ್ರ ವೈಫಲ್ಯ ವಿರುದ್ಧ ಕಿಮ್ಮನೆ ರತ್ನಾಕರ್ ಆಕ್ರೋಶ

ಶಿವಮೊಗ್ಗ ಲೈವ್.ಕಾಂ | THIRTHAHALLI | 23 ಅಕ್ಟೋಬರ್ 2019 ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರದ ಜನವಿರೋಧಿ ನೀತಿ ಮತ್ತು ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಅವರ ವೈಫಲ್ಯ ಖಂಡಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಅ.25ಕ್ಕೆ ಆಗುಂಬೆಯಿಂದ ಮೇಗರವಳ್ಳಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಆ ದಿನ ಬೆಳಗ್ಗೆ 8 ಗಂಟೆಗೆ ಮಾಜಿ ಶಾಸಕ ಕಡಿದಾಳು ದಿವಾಕರ್ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದು ಕಿಮ್ಮನೆ ರತ್ನಾಕರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಾಡುಕೋಣ, … Read more

ಎಲ್.ಬಿ.ಕಾಲೇಜು ವಿದ್ಯಾರ್ಥಿಯಲ್ಲಿ ಅತ್ಯಂತ ಅಪರೂಪದ ರಕ್ತ, ಬೆಂಗಳೂರಿನಿಂದ ಹುಡುಕಿ ಬಂತು ರೋಗಿಯ ಕುಟುಂಬ

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA | 23 ಅಕ್ಟೋಬರ್ 2019 ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಸಾಗರದ ಎಲ್.ಬಿ.ಕಾಲೇಜು ವಿದ್ಯಾರ್ಥಿಯೊಬ್ಬರು ಅತ್ಯಂತ ಅಪರೂಪದ ಬಾಂಬೆ ಗ್ರೂಪ್ ರಕ್ತವನ್ನು ದಾನ ಮಾಡಿದ್ದಾರೆ. ಈ ಗ್ರೂಪ್’ನ ರಕ್ತ ತುಂಬಾನೆ ಅಪರೂಪ ಎಂದು ವೈದ್ಯರು ತಿಳಿಸಿದ್ದಾರೆ. ಸಾಗರದ ಎಲ್.ಬಿ.ಕಾಲೇಜಿನಲ್ಲಿ ಇತ್ತೀಚೆಗೆ ರಕ್ತದಾನ ಶಿಬಿರ ನಡೆದಾಗ ಬಿಎಸ್ಸಿ ವಿದ್ಯಾರ್ಥಿ ಉದಯ್ ಕುಮಾರ್ ಅವರ ರಕ್ತದ ಮಾದರಿ ಅತ್ಯಂತ ಅಪರೂಪದ್ದು ಎಂದು ತಿಳಿದು ಬಂದಿದೆ. ಇದರ ಮಾಹಿತಿಯನ್ನು ಸಂಕಲ್ಪ ಆನ್’ಲೈನ್ ಎಂಬ ವೆಬ್’ಸೈಟ್’ನಲ್ಲಿ ಪ್ರಕಟಿಸಲಾಗಿತ್ತು. ಈ ಮಾಹಿತಿ … Read more

ಮಳೆಹಾನಿ ಪ್ರದೇಶಗಳಲ್ಲಿ ಸಂಸದ ರಾಘವೇಂದ್ರ ರೌಂಡ್ಸ್, ಹತ್ತು ಕೋಟಿ ಪರಿಹಾರಕ್ಕೆ ಸೂಚನೆ, ಎಲ್ಲೆಲ್ಲಿ ಭೇಟಿ ನೀಡಿದ್ದರು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | SHIRALAKOPPA | 23 ಅಕ್ಟೋಬರ್ 2019 ಭಾರಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ, ಕೂಡಲೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಳೆಹಾನಿ ಪ್ರದೇಶಗಳಾದ ಶಿರಾಳಕೊಪ್ಪ, ಬೆಲವಂತನಕೊಪ್ಪ, ಬಳ್ಳಿಗಾವಿ ಮತ್ತು ಬಸವನಂದಿಹಳ್ಳಿ ಗ್ರಾಮಗಳಿಗೆ ಸಂಸದ ರಾಘವೇಂದ್ರ ಭೇಟಿ ನೀಡಿದರು. ಸಿಎಂ ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. 2ನೇ ಭಾರಿ ಮಳೆಯಿಂದಾಗಿ ಕೆರೆಕಟ್ಟೆ ಒಡೆದು 10 ಕೋಟಿ ರೂ.ಗಿಂತಲು ಅಧಿಕ … Read more

ಹತ್ತು ಅಕ್ರಮ ಮನೆಗಳು ನೆಲಸಮ, ತೆರವು ವೇಳೆ ನಡೆಯಿತು ಹೈಡ್ರಾಮಾ, ಪೊಲೀಸ್ ರಕ್ಷಣೆಯಲ್ಲಿ ಕಾರ್ಯಾಚರಣೆ

ಶಿವಮೊಗ್ಗ ಲೈವ್.ಕಾಂ | SHIMOGA | 22 ಅಕ್ಟೋಬರ್ 2019 ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಮನೆಗಳನ್ನು ತಹಶೀಲ್ದಾರ್ ಗಿರೀಶ್ ನೇತೃತ್ವದಲ್ಲಿ ಇವತ್ತು ತೆರವು ಮಾಡಲಾಯಿತು. ಈ ವೇಳೆ ಸ್ಥಳೀಯರ ವಿರೋಧದಿಂದಾಗಿ ಕೆಲಕಾಲ ಹೈಡ್ರಾಮಾ ನಡೆಯಿತು. ವಿರೂಪಿನಕೊಪ್ಪದ ಸರ್ವೆ ನಂಬರ್ 6ರಲ್ಲಿ ಮಹಾನಗರ ಪಾಲಿಕೆ ವತಿಯಿಂದ ಹತ್ತು ಮನೆಗಳ ತೆರವು ಮಾಡಲಾಗುತ್ತಿದೆ. ಮನೆ ತೆರವು ಮಾಡಲು ಜೆಸಿಬಿ ಆಗಮಿಸುತ್ತಿದ್ದಂತೆ ನಿವಾಸಿಗಳು ವಿರೋಧ ವ್ಯಕ್ತಪಡಿಸಿದರು. ಮನೆಯಿಂದ ಹೊರಬಾರದೆ ತೆರವು ಕಾರ್ಯಾಚರಣೆಗೆ ತಡೆಯೊಡ್ಡಿದರು. ಪೊಲೀಸರು ಮಧ್ಯಪ್ರವೇಶಿಸಿ ಸ್ಥಳೀಯರನ್ನು ಮನವೊಲಿಸಿ ತೆರವು … Read more

ಶರಾವತಿ ಕೊಳ್ಳ ಭೂಗರ್ಭ ಯೋಜನೆಗೆ ವಿರೋಧ, ಸಾಗರದಲ್ಲಿ ಮಹತ್ವದ ಸಭೆ, ಏನೆಲ್ಲ ನಿರ್ಣಯವಾಗಿದೆ ಗೊತ್ತಾ?

ಶಿವಮೊಗ್ಗ ಲೈವ್.ಕಾಂ | SAGARA | 22 ಅಕ್ಟೋಬರ್ 2019 ಶರಾವತಿ ಭೂಗರ್ಭ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿ ಸಂಸದ ಮತ್ತು ಶಾಸಕರ ಮೇಲೆ ಒತ್ತಡ ಹೇರಲು ಶರಾವತಿ ಉಳಿಸಿ ಹೋರಾಟ ಸಮಿತಿ ತೀರ್ಮಾನಿಸಿದೆ. ಹೋರಾಟ ಸಮಿತಿ ಗೌರವ ಅಧ್ಯಕ್ಷರಾದ ನಾ.ಡಿಸೋಜ ಅವರ ಅಧ್ಯಕ್ಷತೆಯಲ್ಲಿ ಸಾಗರದ ಸರ್ಕಾರಿ ನೌಕರರ ಭವನದಲ್ಲಿ ಇವತ್ತು ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಸರ್ಕಾರ ಶರಾವತಿ ಭೂಗರ್ಭ ಯೋಜನೆ ಕೈಗೆತ್ತಿಕೊಳ್ಳಲು ಚಿಂತಿಸಿದೆ. ಯೋಜನೆಯನ್ನು ಕೂಡಲೆ ಕೈಬಿಡಬೇಕು. ಇದಕ್ಕಾಗಿ ಸಾಗರ ಶಾಸಕ ಮತ್ತು … Read more