ಸಿಗಂದೂರು ಲಾಂಚ್ ಅನಿರ್ದಿಷ್ಟಾವಧಿಗೆ ತಡೆದು ಪ್ರತಿಭಟಿಸುವ ಎಚ್ಚರಿಕೆ, ಕಾರಣವೇನು?

Sigandur-Launch-General-Image

SAGARA | ಸಿಗಂದೂರಿಗೆ (SIGANDUR LAUNCH) ಸಂಪರ್ಕ ಕಲ್ಪಿಸುವ ಲಾಂಚ್ ಸೇರಿದಂತೆ ಶರಾವತಿ ಹಿನ್ನೀರು ಭಾಗದಲ್ಲಿ ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಿರುವ ಲಾಂಚ್’ಗಳ ಸಿಬ್ಬಂದಿಗೆ ಒಂದು ವರ್ಷದಿಂದ ಸಂಬಳ ನೀಡಿಲ್ಲ. ಸರ್ಕಾರದ ಕ್ರಮ ಖಂಡಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ತುಮರಿ ಸಮೀಪ ಸಿಗಂದೂರು ಲಾಂಚ್ ಮುಂಭಾಗ ವಿವಿಧ ಸಂಘಟನೆಗಳು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದವು. ಒಂದು ವರ್ಷದಿಂದ ವೇತನವಿಲ್ಲ ಶರಾವತಿ ಎಡದಂಡೆಯಲ್ಲಿ ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ಲಾಂಚ್ ಸೇರಿದಂತೆ ಮುಪ್ಪಾನೆ, ಹಸಿರುಮಕ್ಕಿ ಮಾರ್ಗದಲ್ಲಿ ಸೇವೆ ಸಲ್ಲಿಸುತ್ತಿರುವ ಲಾಂಚ್ … Read more

ತಾಯಿಯ ಅಗಲಿಕೆಯಿಂದ ಮನನೊಂದಿದ್ದ ಮಗ ನೇಣಿಗೆ ಶರಣು

Youth-Commites-Suicide-over-mothers-death

SAGARA | ತಾಯಿಯ ಸಾವಿನಿಂದ ಮನನೊಂದು ಮಗ ನೇಣು ಬಿಗಿದು ಆತ್ಮಹತ್ಯೆ (SUICIDE) ಮಾಡಿಕೊಂಡಿದ್ದಾನೆ. ತಾಯಿ ಮೃತಪಟ್ಟು ಸರಿಯಾಗಿ ಒಂದು ವರ್ಷವಾಗಿತ್ತು. ನಾಗರಾಜ್ (23) ಆತ್ಮಹತ್ಯೆ ಮಾಡಿಕೊಂಡ ಯುವಕ. ಗ್ಯಾಸ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಎಸ್.ಎನ್.ನಗರದ ಹೊಸ ಬಡಾವಣೆಯ ಮನೆಯಲ್ಲಿ ಘಟನೆ ಸಂಭವಿಸಿದೆ. ನಾಗರಾಜನ ತಾಯಿ ತೀರಿಕೊಂಡು ಸೋಮವಾರಕ್ಕೆ ಒಂದು ವರ್ಷ ಆಗಲಿತ್ತು. ತಾಯಿಯ ಸಾವಿನಿಂದ ಆತ ಮನನೊಂದಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೆ ಕಾರಣಕ್ಕೆ ಆತ್ಮಹತ್ಯೆ(SUICIDE)  ಮಾಡಿಕೊಂಡಿರುವ ಶಂಕೆ ಇದೆ. ಸಾಗರ ನಗರ ಠಾಣೆ … Read more

ಸೆ.17ರಂದು ಶಿವಮೊಗ್ಗ ಜಿಲ್ಲಾಧಿಕಾರಿ ವಾಸ್ತವ್ಯಕ್ಕೆ ಗ್ರಾಮ ನಿಗದಿ, ಡಿಸಿ ನಡೆ ಯಾವ ಊರ ಕಡೆಗೆ?

Shimoga Dc Dr.selvamani

ಶಿವಮೊಗ್ಗ| ಜಿಲ್ಲಾಧಿಕಾರಿ (DC VISIT) ನಡೆ ಹಳ್ಳಿ ಕಡೆ ಕಾರ್ಯಕ್ರಮದಡಿ ಸೆಪ್ಟೆಂಬರ್ ತಿಂಗಳ ವಾಸ್ತವ್ಯಕ್ಕೆ ಗ್ರಾಮ ನಿಗದಿಯಾಗಿದೆ. ಸಾಗರ ತಾಲೂಕು ಆನಂದಪುರ ಹೋಬಳಿಯ ಹೆಗ್ಗೋಡು ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಸೆ.17ರಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಹೆಗ್ಗೋಡು ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಆ ದಿನ ಬೆಳಗ್ಗೆ 11 ಗಂಟೆಗೆ ಹೆಗ್ಗೋಡು ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಕುಂದು ಕೊರತೆ ಸಭೆ ನಡೆಯಲಿದೆ. ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ. ಸಾರ್ವಜನಿಕರ ಕುಂದು … Read more

RTO ಅಧಿಕಾರಿಗಳ ದಿಢೀರ್ ದಾಳಿ, ಲಕ್ಷ ಲಕ್ಷ ತೆರಿಗೆ ವಂಚಿಸಿದ್ದ ಖಾಸಗಿ ಬಸ್ ವಶಕ್ಕೆ, ಹಲವರಿಗೆ ದಂಡ

sagara graphics

ಸಾಗರ | ತೆರಿಗೆ ಪಾವತಿ ಮಾಡದೆ ವಾಹನಗಳನ್ನು ರಸ್ತೆಗಿಳಿಸಿದ್ದ ಮಾಲೀಕರಿಗೆ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು (RTO RAID) ಬಿಸಿ ಮುಟ್ಟಿಸಿದ್ದಾರೆ. ಲಕ್ಷಾಂತರ ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದ ಬಸ್ಸ ಒಂದನ್ನು ವಶಕ್ಕೆ ಪಡೆದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಸಾಗರ ತಾಲೂಕಿನ ವಿವಿಧೆಡೆ ಆರ್.ಟಿ.ಒ ಅಧಿಕಾರಿಗಳು ದಿಢೀರ್ ತಪಾಸಣೆ ನಡೆಸಿದರು. ಈ ವೇಳೆ ಹಲವು ವಾಹನಗಳು ತೆರಿಗೆ ಪಾವತಿ ಮಾಡದೆ ಸಂಚರಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಎರಡು ವರ್ಷದಿಂದ ತೆರಿಗೆ ವಂಚನೆ ಖಾಸಗಿ ಬಸ್ ಒಂದರ ದಾಖಲೆ ಪರಿಶೀಲನೆ … Read more

ಲಿಂಗನಮಕ್ಕಿ ಜಲಾಶಯದಲ್ಲಿ ಗಂಗೆ ಪೂಜೆ, ಒಂದು ಗೇಟ್ ಮೇಲೆತ್ತಿ ನೀರು ಹೊರಕ್ಕೆ

Linganamakki-Dam-Gange-pooje.

ಸಾಗರ | ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಲಿಂಗನಮಕ್ಕಿ ಜಲಾಶಯ (LINGANAMAKKI DAM) ಭರ್ತಿಯಾಗುವ ಹಂತಕ್ಕೆ ತಲುಪಿದೆ. ಜಲಾಶಯದ ನೀರಿನ ಮಟ್ಟ ಹೆಚ್ಚಳವಾದ ಹಿನ್ನೆಲೆ ಇವತ್ತು ಗಂಗೆ ಪೂಜೆ ನೆರವೇರಿಸಲಾಯಿತು. ಅಲ್ಲದೆ ಒಂದು ಗೇಟ್ ಮೂಲಕ ಸಾಂಪ್ರದಾಯಿಕವಾಗಿ ನೀರನ್ನು ಹೊರ ಬಿಡಲಾಯಿತು. ಅಧಿಕಾರಿಗಳಿಂದ ಗಂಗೆ ಪೂಜೆ ಲಿಂಗನಮಕ್ಕಿ ಜಲಾಶಯ ಭರ್ತಿಯಾಗುವ ಹಂತ ತಲುಪಿದ ಹಿನ್ನೆಲೆ ಇವತ್ತು ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳು ಗಂಗೆ ಪೂಜೆ ನೆರವೇರಿಸಿದರು. ಜಲಾಶಯದಲ್ಲಿ ಪೂಜೆ ಸಲ್ಲಿಸಿ, ಬಳಿಕ ಶರಾವತಿ ನದಿಗೆ … Read more

ಜೋರು ಮಳೆ, ಲಿಂಗನಮಕ್ಕಿ ಜಲಾಶಯದಿಂದ ಮತ್ತೊಂದು ಮುನ್ನೆಚ್ಚರಿಕೆ, ಏನದು?

-Linganamakki-Dam-General-Image

ಸಾಗರ | ಜಲಾನಯನ ಪ್ರದೇಶದಲ್ಲಿ ಜೋರು ಮಳೆಯಾಗುತ್ತಿರುವುದರಿಂದ ಲಿಂಗನಮಕ್ಕಿ ಜಲಾಶಯದ ಒಳ ಹರಿವು ಹೆಚ್ಚಳವಾಗಿದೆ. ಒಳ ಹರಿವು ಪ್ರಮಾಣ ಇದೆ ರೀತಿ ಮುಂದುವರೆದರೆ ಯಾವುದೆ ಸಂದರ್ಭದಲ್ಲಿ ಜಲಾಶಯದಿಂದ ನೀರನ್ನು ಹೊರಬಿಡಲಾಗುತ್ತದೆ (ALERT) ಎಂದು ಕರ್ನಾಟಕ ವಿದ್ಯುತ್ ನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಲಿಂಗನಮಕ್ಕಿ ಜಲಾಶಯಕ್ಕೆ ಆ.9ರಂದು ಸಂಜೆ 5 ಗಂಟೆ ಹೊತ್ತಿಗೆ 67 ಸಾವಿರ ಕ್ಯೂಸೆಕ್ ಒಳ ಹರಿವು ಇತ್ತು. ಜಲಾಶಯದ ನೀರಿನ ಮಟ್ಟ 1806.95 ಅಡಿಗೆ ತಲುಪಿದೆ. ಇದೆ ರೀತಿ ಮಳೆ ಮುಂದುವರೆದರೆ … Read more

ಲಿಂಗನಮಕ್ಕಿ ಡ್ಯಾಂಗೆ ಒಂದೇ ದಿನ ಎರಡೂವರೆ ಅಡಿಯಷ್ಟು ನೀರು

-Linganamakki-Dam-General-Image

ಸಾಗರ | ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ಲಿಂಗನಮಕ್ಕಿ ಜಲಾಶಯದ (LINGANAMAKKI DAM) ಒಳ ಹರಿವು ಹೆಚ್ಚಳವಾಗಿದೆ. ಹಾಗಾಗಿ ಒಂದೇ ದಿನದಲ್ಲಿ ನೀರಿನ ಸಂಗ್ರಹ ಮಟ್ಟ ಎರಡೂವರೆ ಅಡಿಯಷ್ಟು ಏರಿಕೆಯಾಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ 77,911 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಮಳೆ ಪ್ರಮಾಣ ಹೆಚ್ಚಳವಾದರೆ ಒಳ ಹರಿವು ಮತ್ತಷ್ಟು ಏರಿಕೆಯಾಗಲಿದೆ. ಒಳ ಹರಿವು ಹೆಚ್ಚಳ ಆಗಿರುವುದರಿಂದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಒಂದೇ ದಿನ 2.4 ಅಡಿಯಷ್ಟು ಹೆಚ್ಚಳವಾಗಿದೆ. ಆ.8ರಂದು 1803.8 ಅಡಿಯಷ್ಟು ನೀರಿತ್ತು. ಇವತ್ತು … Read more

ಸಾಗರ ಭಾರಂಗಿ ಉಪ ತಹಶೀಲ್ದಾರ್ ನಿಧನ

sagara graphics

ಸಾಗರ | ತಾಲೂಕಿನ ಭಾರಂಗಿ (BHARANGI) ಹೋಬಳಿಯ ಉಪ ತಹಶೀಲ್ದಾರ್ ನಿಧನರಾಗಿದ್ದಾರೆ (DEATH). ಬೆಂಗಳೂರಿನ ಆಸ್ಪತ್ರೆಯಲ್ಲಿ ಉಪ ತಹಶೀಲ್ದಾರ್ ಕೊನೆಯುಸಿರೆಳೆದಿದ್ದಾರೆ. ಉಪ ತಹಶೀಲ್ದಾರ್ ಸೋಮಶೇಖರ್ (59) ಅವರು ನಿಧನರಾಗಿದ್ದಾರೆ. ಕಿಡ್ನಿ ವೈಫಲ್ಯ ಸಮಸ್ಯೆಯಿಂದ ಸೋಮಶೇಖರ್ ಅವರು ಬಳಲುತ್ತಿದ್ದರು. ಈ ಹಿನ್ನೆಲೆ ಚಿಕಿತ್ಸೆಗೆ ದಾಖಲಾಗಿದ್ದರು. ಸೋಮಶೇಖರ್ ಅವರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಇದನ್ನೂ ಓದಿ – ಎರಡು ಬೈಕುಗಳಿಗೆ ಎದುರಿನಿಂದ ಬಂದು ಡಿಕ್ಕಿ ಹೊಡೆದ ಲಾರಿ ADVERTISEMENT ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. … Read more

ಎರಡು ಬೈಕುಗಳಿಗೆ ಎದುರಿನಿಂದ ಬಂದು ಡಿಕ್ಕಿ ಹೊಡೆದ ಲಾರಿ

Hakrekoppa-Truck-and-bike-accident

ಸಾಗರ | ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಎದುರಿನಿಂದ ಬರುತ್ತಿದ್ದ ಎರಡು ಬೈಕ್’ಗಳಿಗೆ ಡಿಕ್ಕಿ (ACCIDENT) ಹೊಡೆದು, ರಸ್ತೆ ಪಕ್ಕದ ಗುಂಡಿಗೆ ಹೋಗಿ ನಿಂತಿದೆ. ಘಟನೆಯಲ್ಲಿ ಓರ್ವ ಬೈಕ್ ಸಾವರ ಸಾವನ್ನಪ್ಪಿದ್ದಾರೆ. ಮೂವರು ಗಾಯಗೊಂಡಿದ್ದಾರೆ. ಸಾಗರ ತಾಲೂಕಿನ ಹಕ್ರೆಗೊಪ್ಪ ತಿರುವಿನಲ್ಲಿ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಸವಾರ, ಪಡವಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿಸಿರೆ ಗ್ರಾಮದ ಪ್ರೇಮಾನಂದ (51) ಮೃತಪಟ್ಟಿದ್ದಾರೆ. ಹೇಗಾಯ್ತು ಘಟನೆ? ಪ್ರೇಮಾನಂದ ಅವರು ತಮ್ಮ ಪತ್ನಿ ಪಾಲಾಕ್ಷಮ್ಮ ಅವರೊಂದಿಗೆ ಬುಲೆಟ್ ಬೈಕಿನಲ್ಲಿ ಬೆಳ್ಳಿಬೈಲು ಗ್ರಾಮಕ್ಕೆ … Read more

ವೀಕೆಂಡ್’ನಲ್ಲಿ ಜೋಗ ಜಲಪಾತ ವೀಕ್ಷಣೆಗೆ ಜನವೋ ಜನ

-Jog-Falls-on-Weekend

ಸಾಗರ | ವೀಕೆಂಡ್ ಹಿನ್ನೆಲೆ ವಿಶ್ವವಿಖ್ಯಾತ ಜೋಗ ಜಲಪಾತ (JOG FALLS) ವೀಕ್ಷಣೆಗೆ ಇವತ್ತು ದೊಡ್ಡ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಮಂಜಿನ ಮರೆಯಲಿ ಜಲಪಾತದಲ್ಲಿ ನೀರು ಧುಮ್ಮಿಕ್ಕುವುದನ್ನು ಕಣ್ತುಂಬಿಕೊಂಡು ಪ್ರವಾಸಿಗರು ಖುಷಿ ಪಟ್ಟರು. ಶನಿವಾರ ಮತ್ತು ಭಾನುವಾರದಂದು ಜೋಗ ಜಲಪಾತ (JOG FALLS) ವೀಕ್ಷಣೆಗೆ ಸಾವಿರಾರು ಪ್ರವಾಸಿಗರು ಆಗಮಿಸಿದ್ದರು. ಶರಾವತಿ ಹಿನ್ನೀರು ಭಾಗದಲ್ಲಿ ನಿರಂತರ ಮಳೆ ಹಿನ್ನೆಲೆ ಜೋಗ ಜಲಪಾತ ಮೈದುಂಬಿಕೊಂಡಿದೆ. ಮಂಜಿನ ಮರೆಯಲ್ಲಿ ಜೋಗ ವೈಭವ ಕಣ್ತುಂಬಿಕೊಂಡು ಪ್ರವಾಸಿಗರು ಸಂಭ್ರಮ ಪಟ್ಟರು. ಜಲಪಾತದ ಮುಂದೆ ನಿಂತು … Read more