ಶಿವಮೊಗ್ಗ: ಅಡಿಕೆ ಹಾಳೆ (Areca leaf) ವಿಚಾರವಾಗಿ ನಡೆದ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಸಹೋದರಿ ಮತ್ತು ಆಕೆಯ ಪತಿಯ ವಿರುದ್ಧ ಮಹಿಳೆ (ಹೆಸರು ಗೌಪ್ಯ) ದೂರು ನೀಡಿದ್ದಾರೆ.
ಅಂಗಡಿಯಲ್ಲಿರುವ ಅಡಿಕೆ ಹಾಳೆಯನ್ನು ಉಚಿತವಾಗಿ ತಮಗೆ ನೀಡಬೇಕು ಎಂದು ಮಹಿಳೆಯ ಸಹೋದರಿ ಮತ್ತು ಆಕೆಯ ಪತಿ ಕೇಳಿದ್ದರು. ಅವರ ಬೇಡಿಕೆ ನಿರಾಕರಿಸಿದ್ದಕ್ಕೆ ತಡರಾತ್ರಿ ಮಹಿಳೆಯ ಮನೆಗೆ ಬಂದ ಸಹೋದರಿ ಮತ್ತು ಆಕೆಯ ಪತಿ ಮಹಿಳೆಯ ಮಗಳ ಕೆನ್ನೆಗೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲದೆ ಮಹಿಳೆಯ ಮನೆ ಬಾಗಿಲಿಗೆ ದೊಡ್ಡ ಕಲ್ಲು ಎತ್ತಿ ಹಾಕಿದ್ದಾರೆ. ಇದರಿಂದ ಕಬ್ಬಿಣದ ಬಾಗಿಲಿಗೆ ಹಾನಿಯಾಗಿದೆ ಎಂದು ಆರೋಪಿಸಿದ್ದಾರೆ. ಘಟನೆ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ತುರ್ತಾಗಿ ತನಿಖಾ ಆಯೋಗ ನೇಮಿಸಬೇಕು, ಶಿವಮೊಗ್ಗ ಸಮಾವೇಶದಲ್ಲಿ ಸಾಹಿತಿಗಳ ಪಟ್ಟು, ಕಾರಣವೇನು?

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200