ಅಡಿಕೆ ಕಳ್ಳ ಅರೆಸ್ಟ್‌, ಸಿಕ್ತು ಲಕ್ಷ ಲಕ್ಷ ನಗದು, ಒಂದು ವಾಹನ ಸೀಜ್‌

SHIVAMOGGA LIVE NEWS | 3 JUNE 2024

ಸುದ್ದಿಯ ಮುಂದಿನ ಭಾಗ ಕೆಳಗಿದೆ

SORABA : ಅಡಿಕೆ, ಗೇರುಬೀಜ ಕಳವು ಮಾಡಿದ್ದ ಆರೋಪಿಯನ್ನು (Thief) ಸೊರಬ ಪೊಲೀಸರು ಬಂಧಿಸಿದ್ದು ನಾಲ್ವರು ತಲೆಮರೆಸಿಕೊಂಡಿದ್ದಾರೆ. ಬಂಧಿತನಿಂದ 4.70 ಲಕ್ಷ ರೂ. ನಗದು, 8 ಲಕ್ಷ ರೂ. ಮೌಲ್ಯದ ವಾಹನ ಜಪ್ತಿ ಮಾಡಿದ್ದಾರೆ. ಶಿಕಾರಿಪುರದ ಜಕ್ಕನಹಳ್ಳಿಯ ನಂದೀಶ್‌ ಬಂಧಿತ.

ತಾಲೂಕಿನ ಮೂಡುಗೋಡು ಗ್ರಾಮದಲ್ಲಿ ಜಯಕುಮಾರ್ ಎಂಬುವರು ತಮ್ಮ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಅಡಕೆ, ಗೇರುಬೀಜ ಕಳ್ಳತನ ಆಗಿರುವ ಕುರಿತು ಮೇ 10ರಂದು ಸೊರಬ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಮಾವಲಿ ಗ್ರಾಮದ ಸಮೀಪ ಆರೋಪಿ ಬಂಧಿಸಿದ್ದಾರೆ.

Nanjappa Hospital Advertisement

ಇದನ್ನೂ ಓದಿ – ಮೈಸೂರು – ಶಿವಮೊಗ್ಗ ಎಕ್ಸ್‌ಪ್ರೆಸ್‌ ರೈಲಿಗೆ ಸಿಲುಕಿ ವ್ಯಕ್ತಿ ಸಾವು, ಹೇಗಾಯ್ತು ಘಟನೆ?

ಡಿವೈಎಸ್ಪಿ ಕೆ.ಇ.ಕೇಶವ ಮೇಲ್ವಿಚಾರಣೆಯಲ್ಲಿ ಸೊರಬ ಇನ್ಸ್‌ಪೆಕ್ಟರ್‌ ರಮೇಶ್ ರಾವ್ ನೇತೃತ್ವದಲ್ಲಿ ಪಿಎಸ್‌ಐ ಹೆಚ್.ಎನ್.ನಾಗರಾಜ್, ಎಎಸ್‌ಐಗಳಾದ ಲಿಂಗರಾಜ, ಪ್ರಭಾಕರ, ಸಿಬ್ಬಂದಿ ರಾಜುನಾಯ್, ನಾಗರಾಜ, ಅಶೋಕ, ನಾಗೇಶ್, ಕೆ.ಎನ್.ಲೋಕೇಶ್, ರಾಘವೇಂದ್ರ, ಲೋಕೇಶ್, ಆನವಟ್ಟಿ ಠಾಣೆಯ ಮಂಜುನಾಥ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment