SHIVAMOGGA LIVE NEWS, 27 JANUARY 2025
ಶಿವಮೊಗ್ಗ : ATM ಮೆಷಿನ್ ಮುರಿದು ಹಣ ಕಳ್ಳತನಕ್ಕೆ ವಿಫಲ ಯತ್ನವಾಗಿದೆ. ನೆಹರು ರಸ್ತೆಯ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಕಳ್ಳತನಕ್ಕೆ ಪ್ರಯತ್ನವಾಗಿದೆ. ಘಟನೆ ನಡೆದು ಕೆಲವೇ ಹೊತ್ತಿಗೆ ಪೊಲೀಸರು ಆರೋಪಿಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಎಟಿಎಂ ಮೆಷಿನ್ ಮುರಿಯಲು ಯತ್ನ
- ಕಳೆದ ರಾತ್ರಿ 10.45ರ ಹೊತ್ತಿಗೆ ಕಳ್ಳತನಕ್ಕೆ ಯತ್ನವಾಗಿದೆ. ಬ್ಯಾಗ್, ತಲೆಗೆ ಟೋಪಿ ಧರಿಸಿ ಬಂದಿದ್ದ ವ್ಯಕ್ತಿಯೊಬ್ಬ ಎಟಿಎಂ ಯಂತ್ರ ಮುರಿಯಲು ಯತ್ನಿಸಿದ್ದಾನೆ.
- ಎಟಿಎಂ ಕೇಂದ್ರದಲ್ಲಿ ಎರಡು ಎಟಿಎಂ ಮೆಷಿನ್ಗಳಿವೆ. ಮೊಬೈಲ್ ಫೋನ್ನಲ್ಲಿ ಮಾತನಾಡುತ್ತ ಒಳ ಬಂದ ವ್ಯಕ್ತಿ, ಮೊದಲು ಒಂದು ಯಂತ್ರ ಪರಿಶೀಲಿಸಿದ್ದಾನೆ. ಬಳಿಕ ಪಕ್ಕದ ಎಟಿಎಂ ಯಂತ್ರವನ್ನು ಚೆಕ್ ಮಾಡಿ, ಅದರ ಲಾಕ್ಗಳನ್ನು ತೆಗೆದು ಹಣ ಕದಿಯಲು ಯತ್ನಿಸಿದ್ದ.
- ಬಳಿಕ ಪಕ್ಕದ ಎಟಿಎಂ ಮೆಷಿನ್ನಿನ ಲಾಕ್ ತೆರೆಯಲು ಪ್ರಯತ್ನಿಸಿದ್ದ. ಆಗ ಎಟಿಎಂ ಕೇಂದ್ರದ ಒಳಗೆ ಸೈರನ್ ಆನ್ ಆಗಿದೆ. ಬೆಚ್ಚಿದ ಕಳ್ಳ ಅಲ್ಲಿಂದ ಪರಾರಿಯಾಗಿದ್ದ.
ಕೆಲವೇ ಹೊತ್ತಿನಲ್ಲಿ ಆರೋಪಿ ವಶಕ್ಕೆ
ಎಟಿಎಂನಲ್ಲಿ ಕಳ್ಳತನ ಯತ್ನದ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬ್ಯಾಂಕ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ, ಸಿಸಿಟಿವಿ ಪರಿಶೀಲಿಸಿದರು.
ತಕ್ಷಣದಿಂದಲೇ ಕಾರ್ಯಪ್ರವೃತ್ತರಾದ ಕೋಟೆ ಠಾಣೆ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ನಡೆಸಿದರು. ಕೆಲವೇ ಹೊತ್ತಿನಲ್ಲಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಯುತ್ತಿದೆ. ಆರೋಪಿ ಬಿಹಾರ ಮೂಲದವನು ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಬೀದರ್ನಲ್ಲಿ ಎಟಿಎಂಗೆ ಹಣ ತುಂಬವ ವಾಹನ ಸಿಬ್ಬಂದಿ ಮೇಲೆ ಗುಂಡಿನ ದಾಳಿ, ಮಂಗಳೂರಿನಲ್ಲಿ ಬ್ಯಾಂಕ್ ರಾಬರಿ ಪ್ರಕರಣದಿಂದ ರಾಜ್ಯದಲ್ಲಿ ಆತಂಕ ಮೂಡಿತ್ತು. ಈಗ ಶಿವಮೊಗ್ಗದಲ್ಲಿಯು ಎಟಿಎಂ ಮೆಷಿನ್ ಮುರಿದು ಹಣ ಕಳ್ಳತನಕ್ಕೆ ವಿಫಲ ಯತ್ನವಾಗಿದೆ.
ಘಟನೆ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು, ಎಟಿಎಂ ಮೆಷಿನ್ಗಳಿಗೆ ಹಾನಿಯಾಗಿರುವ ಹಿನ್ನೆಲೆ ಎಟಿಎಂ ಕೇಂದ್ರವನ್ನು ಬಂದ್ ಮಾಡಲಾಗಿದೆ.
ಇದನ್ನೂ ಓದಿ » ಆಯನೂರು ATMನಲ್ಲಿ ಹಣ ಬಿಡಿಸಿದ ರೈತ, 20 ನಿಮಿಷದಲ್ಲೇ ಕಾದಿತ್ತು ಶಾಕ್, ಆಗಿದ್ದೇನು?
- ಮಹಿಳೆಯರೆ ಭೀಮರಾಜ್ ಬಗ್ಗೆ ಹುಷಾರ್, ಈತನ ಮೇಲಿದೆ ಒಂದು ಡಜನ್ ಕೇಸ್, ಏನಿದು ಪ್ರಕರಣ?
- ಸಾಗರ ಮಾರಿ ಜಾತ್ರೆಗು ಮೊದಲು ರಸ್ತೆ ಅಗಲೀಕರಣ ಪೂರ್ಣ, ಯಾವ್ಯಾವ ರಸ್ತೆ ಕುರಿತು MLA ಹೇಳಿದ್ದೇನು?
- ಶಿವಮೊಗ್ಗ ಯುವ ಕಾಂಗ್ರೆಸ್ಗೆ ಹರ್ಷಿತ್ ಗೌಡ ನೂತನ ಅಧ್ಯಕ್ಷ, ಪಕ್ಷ ಸಂಘಟನೆ ಕುರಿತು ಹೇಳಿದ್ದೇನು?
- ಶಿವಮೊಗ್ಗ ಸಿಟಿಯ ವಿವಿಧೆಡೆ ಬೈಕ್ಗಳು ಕಳ್ಳತನ, ಎಲ್ಲೆಲ್ಲಿ? ಹೇಗಾಯ್ತು ಘಟನೆ?
- ನಕ್ಸಲ್ ಮುಂಡಗಾರು ಲತಾ, ವನಜಾಕ್ಷಿ ಶಿವಮೊಗ್ಗ ಪೊಲೀಸ್ ವಶಕ್ಕೆ
- ವಾಯುಸೇನೆ ಅಧಿಕಾರಿ ಮಂಜುನಾಥ್ ಪಂಚಭೂತಗಳಲ್ಲಿ ಲೀನ, ಇಲ್ಲಿದೆ ಇಡೀ ದಿನದ ಕಂಪ್ಲೀಟ್ ಮಾಹಿತಿ