ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ |SHIMOGA CRIME NEWS | 11 DECEMBER 2020
ಶಿವಮೊಗ್ಗದಲ್ಲಿ ನಡೆದ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಬಳಕೆಯಾಗಿದ್ದ ಕಾರು ಆರೋಪಿಗಳದ್ದಲ್ಲ. ಮೂರನೇ ಆರೋಪಿ ಸುಳ್ಳು ಹೇಳಿ ಸ್ನೇಹಿತನೊಬ್ಬನಿಂದ ಪಡೆದುಕೊಂಡು ಬಂದಿದ್ದ ಎಂದು ತಿಳಿದು ಬಂದಿದೆ.

ತಾಯಿ ಅನಾರೋಗ್ಯದ ಕಥೆ ಕಟ್ಟಿದ್ದ
ಪ್ರಕರಣದ ಮೂರನೇ ಆರೋಪಿ ವಿನಯ್, ತಾಯಿಗೆ ಅನಾರೋಗ್ಯವಿದ್ದು, ಆಸ್ಪತ್ರೆಗೆ ಕರೆದೊಯ್ಯಬೇಕಿದೆ ಎಂದು ನೆಪ ಹೇಳಿ, ಸ್ನೇಹಿತನ ಕಾರನ್ನು ಪಡೆದುಕೊಂಡಿದ್ದ. ಸಾಮೂಹಿಕ ಅತ್ಯಾಚಾರದ ಬಳಿಕ ರಾತ್ರಿಯೇ ಕಾರನ್ನು ಕೊಂಡೊಯ್ದು ಸ್ನೇಹಿತನ ಮನೆ ಬಳಿ ನಿಲ್ಲಿಸಿ ಬಂದಿದ್ದ. ಬೆಳಗ್ಗೆ ಬೇರೆ ಕಡೆ ಹೋಗಬೇಕಿದೆ. ಹಾಗಾಗಿ ಕಾರನ್ನು ಬೇಗ ಬಿಟ್ಟು ಹೋಗುತ್ತಿರುವುದಾಗಿ ತಿಳಿಸಿದ್ದ.
RELATED NEWS | ಶಿವಮೊಗ್ಗದಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ, ಊಟ ಕೊಡಿಸುವ ನೆಪದಲ್ಲಿ ಸಾಗರ ರಸ್ತೆಗೆ ಕರೆದೊಯ್ದು ಕೃತ್ಯ
ಪೊಲೀಸ್ ಬಂದಾಗಲೇ ವಿಚಾರ ಬಹಿರಂಗ
ಶಿವಮೊಗ್ಗ ತಾಲೂಕು ಕಡೇಕಲ್ ಗ್ರಾಮದಲ್ಲಿರುವ ವಿನಯ್ ಸ್ನೇಹಿತನಿಗೆ ಕಾರು ಸೇರಿತ್ತು. ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಕಡೇಕಲ್ ಗ್ರಾಮಕ್ಕೆ ತೆರಳಿ ಕಾರನ್ನು ವಶಕ್ಕೆ ಪಡೆದಿದ್ದಾರೆ. ಆಗಲೇ ಆ ಸ್ನೇಹಿತನಿಗೆ, ತನ್ನ ಕಾರಿನಲ್ಲೆ ಅತ್ಯಾಚಾರವಾಗಿದ್ದು ಎಂದು ಗೊತ್ತಾಗಿ, ಶಾಕ್ ಆಗಿದ್ದಾರೆ.
RELATED NEWS | ಸಾಮೂಹಿಕ ಅತ್ಯಾಚಾರ ಪ್ರಕರಣ, ನಾಲ್ವರು ಆರೋಪಿಗಳು ಆರೆಸ್ಟ್, ಯಾರನ್ನೆಲ್ಲ ಬಂಧಿಸಲಾಗಿದೆ? ವಿಡಿಯೋ ರಿಪೋರ್ಟ್
ತಾಯಿ ಅನಾರೋಗ್ಯದ ನೆಪ ಹೇಳಿದ್ದರಿಂದ ಸ್ನೇಹಿತ ಕಾರಿನ ಕೀ ಕೊಟ್ಟಿದ್ದ. ಆದರೆ ಸ್ನೇಹಿತನ ವಿಶ್ವಾಸವನ್ನು ದುರ್ಬಳಕೆ ಮಾಡಿಕೊಂಡು, ಆತನ ಕಾರನ್ನೇ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಬಳಕೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
LATEST NEWS
- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 27 ಮಾರ್ಚ್ 2026

- ಆಗುಂಬೆ ಘಾಟಿಯಲ್ಲಿ ರಸ್ತೆಗೆ ಬಿದ್ದ ಮರ, ಕೆಲ ಹೊತ್ತು ಟ್ರಾಫಿಕ್ ಜಾಮ್

- ಕುಟುಂಬದ ಜೊತೆ ಊಟ ಮುಗಿಸಿ, ಮಾತನಾಡಿ ಮಲಗಲು ತೆರಳಿದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

- ಶಿವಮೊಗ್ಗದಲ್ಲಿ ಶ್ರೀಕಾಂತಣ್ಣ ಕಪ್ ಕ್ರಿಕೆಟ್ ಪಂದ್ಯಾವಳಿ, ಟ್ರೋಫಿ, ಟೀ ಶರ್ಟ್ಗಳ ಅನಾವರಣ

- ಸರ್ವೆಗೆ ಹೋದಾಗ ಇಂಜಿನಿಯರ್, ಸರ್ವೇಯರ್ ಮೇಲೆ ಕೋಲು, ಕಲ್ಲುಗಳಿಂದ ದಾಳಿ

About The Editor
ನಿತಿನ್ ಆರ್.ಕೈದೊಟ್ಲು
















