ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಲಾಡ್ಜ್ನ ರೂಂನಲ್ಲಿ ಬೆಂಕಿಯಿಂದಾಗಿ ಮಹಿಳೆಗೆ ಗಂಭೀರ ಗಾಯ ಪ್ರಕರಣ ಸಂಬಂಧ ಲಾಡ್ಜ್ನ ಸೂಪರ್ ವೈಸರ್ ದೂರು ನೀಡಿದ್ದಾರೆ. ರೂಂನಲ್ಲಿದ್ದ ಪುರುಷ ಮತ್ತು ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದೆ.
ನ.18ರಂದು ಶಿವಮೊಗ್ಗದ ಲಾಡ್ಜ್ನ ರೂಂನಲ್ಲಿ ಬೆಂಕಿಗೆ ಮಹಿಳೆ ಗಂಭೀರ ಗಾಯಗೊಂಡಿದ್ದರು. ಜೊತೆಗಿದ್ದ ವ್ಯಕ್ತಿಗು ಗಾಯವಾಗಿತ್ತು. ಗಂಭೀರ ಗಾಯಗೊಂಡಿದ್ದ ಮಹಿಳೆಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ದೂರಿನಲ್ಲಿ ಏನಿದೆ?
‘ಗಿರೀಶ್ ಎಂಬುವವರು ನ.18ರಂದು ಮಧ್ಯಾಹ್ನ ಒಬ್ಬರೆ ಲಾಡ್ಜ್ಗೆ ಬಂದು ರೂಂ ನಂಬರ್ 211ರಲ್ಲಿ ಉಳಿದಿದ್ದರು. ರಾತ್ರಿ 11 ಗಂಟೆಗೆ ಕೊಠಡಿಯಲ್ಲಿ ಕಿರುಚಿದಂತೆ ಶಬ್ದ ಕೇಳಿಸಿತು. ಕೂಡಲೆ ಸೂಪರ್ ವೈಸರ್ ಮತ್ತು ರೂಂ ಬಾಯ್ ಅಲ್ಲಿಗೆ ಹೋಗಿದ್ದಾರೆ. ಆಗ ಕೊಠಡಿಯಿಂದ ಗಿರೀಶ್ ಮತ್ತು ಮಹಿಳೆ ಹೊರಗೆ ಬಂದಿದ್ದಾರೆ. ಮಹಿಳೆಯ ದೇಹಕ್ಕೆ ಸುಟ್ಟ ಗಾಯವಾಗಿತ್ತು. ಗಿರೀಶ್ ಕೈಗು ಸುಟ್ಟ ಗಾಯವಾಗಿತ್ತು’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ » ದಿಢೀರ್ ಕಾರ್ಯಾಚರಣೆ, 24 ಮಂದಿಯನ್ನು ಠಾಣೆಗೆ ಕರೆದೊಯ್ದ ಪೊಲೀಸ್, ನಾಲ್ವರ ವಿರುದ್ಧ ಕೇಸ್
‘ಲಾಡ್ಜ್ ಸಿಬ್ಬಂದಿ ವಿಚಾರಿಸಿದಾಗ ಬೆಂಕಿ ತಗುಲಿ ಮೈ, ಕೈ ಸುಟ್ಟಿದೆ ಎಂದಷ್ಟೆ ತಿಳಿಸಿ, ಗಿರೀಶ್ ಅವರ ಕಾರಿನಲ್ಲೆ ಮಹಿಳೆಯನ್ನು ಕರೆದೊಯ್ದರು ಎಂದು ತಿಳಿಸಲಾಗಿದೆ. ಲಾಡ್ಜ್ ಸಿಬ್ಬಂದಿ ಕೊಠಡಿ ಹೊರಗಿನಿಂದಲೇ ಪರಿಶೀಲಿಸಿದಾಗ ರೂಂ ಒಳಗೆ ಗೋಡೆಗಳು ಕಪ್ಪಾಗಿದ್ದವು, ಬೆಡ್ ಶೀಟ್ ಸುಟ್ಟು ಹೊಗಿತ್ತು. ಸುಮಾರು ₹25,000 ನಷ್ಟವಾಗಿದೆ’ ಎಂದು ಆರೋಪಿಸಲಾಗಿದೆ.
ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಇದನ್ನು ಓದಿ » ಶಿವಮೊಗ್ಗದಲ್ಲಿ ಪಾರ್ಕಿಂಗ್ ಸಮಸ್ಯೆ, ರಸ್ತೆಗಿಳಿದ ರಕ್ಷಣಾಧಿಕಾರಿ, ಅಡ್ಡಾದಿಡ್ಡಿ ಪಾರ್ಕಿಂಗ್ಗೆ ಬ್ರೇಕ್, ಏನೇನಾಯ್ತು?
LATEST NEWS
- ₹1,00,000 ಲಂಚದ ಹಣದೊಂದಿಗೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಅಧಿಕಾರಿ, ಮಧ್ಯವರ್ತಿ

- ಸರಕು ರೇಟ್ ಕುಸಿತ, ಉಳಿದ ಮಾದರಿ ಅಡಿಕೆ ರೇಟ್ ಎಷ್ಟಿದೆ? | 2 ಮಾರ್ಚ್ 2026

- ಮಾರಿಕಾಂಬ ಜಾತ್ರೆಯಲ್ಲಿ ಕಳೆದು ಹೋದ ವೃದ್ಧೆ, ಪತ್ತೆ ಮಾಡಿ ಮನೆಗೆ ಬಿಟ್ಟು ಬಂದ ಪೊಲೀಸ್, ಆಗಿದ್ದೇನು?

- ನಂದಿನಿ ಗ್ರಾಹಕರಿಗೆ ಗುಡ್ ನ್ಯೂಸ್, 1 ಕೆ.ಜಿ ಬಕೆಟ್ ಮೊಸರು ಮಾರುಕಟ್ಟೆಗೆ ಎಂಟ್ರಿ, ಎಷ್ಟಿರುತ್ತೆ ರೇಟ್?

- ‘ಒಂದು ಕೋಟಿ ರುಪಾಯಿ ನೆರವು, ಸರ್ಕಾರಿ ನೌಕರಿ ಕೊಡಬೇಕು’, ಕುರುಬರ ವೇದಿಕೆ ಪಟ್ಟು

About The Editor
ನಿತಿನ್ ಆರ್.ಕೈದೊಟ್ಲು






