ಮೊಬೈಲ್‌ ವಿಡಿಯೋಗಾಗಿ ಸ್ನೇಹಿತರ ನಡುವೆ ಕಿರಿಕ್, ಒಬ್ಬನಿಗೆ ಕೈ ಮೂಳೆ ಕಟ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

147011183 1327318294296254 3834645892722110036 o.jpg? nc cat=105&ccb=3& nc sid=8bfeb9& nc ohc=ZNUWIDTXgPcAX9FSFBC& nc ht=scontent.fixe1 2

ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 23 FEBRUARY 2021

ಮೊಬೈಲ್‍ನಲ್ಲಿದ್ದ ವಿಡಿಯೋಗಾಗಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಲಾಗಿದೆ. ಗಾಯಗೊಂಡಿರುವ ಆತ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದು, ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಮೀವುಲ್ಲಾ (57) ಗಾಯಗೊಂಡವರು. ಏಜಾಜ್ ಅಹಮದ್ (52) ಎಂಬುವವರು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮೊಬೈಲ್‍ನಲ್ಲಿದ್ದ ವಿಡಿಯೋಗಾಗಿ ಕಿರಿಕ್

ಸಮೀವುಲ್ಲಾ ಅವರ ಮೊಬೈಲ್‍ನಲ್ಲಿ ಇದೆ ಎಂದು ಹೇಳಲಾಗುತ್ತಿರುವ ವಿಡಿಯೋ ಒಂದರ ವಿಚಾರದಲ್ಲಿ ಜಗಳವಾಗಿದೆ.

ಇದನ್ನೂ ಓದಿ | ಭದ್ರಾವತಿ ಹೊಸಸಿದ್ದಾಪುರ, ಬೊಮ್ಮನಕಟ್ಟೆಯ ಎರಡು ದೇವಸ್ಥಾನದಲ್ಲಿ ಕಳ್ಳತನ, ಏನೇನು ಕಳುವಾಗಿದೆ?

ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿರುವ ನಾಗಭೂಷಣ ಪೆಟ್ರೋಲ್ ಬಂಕ್ ಬಳಿ ಸಮೀವುಲ್ಲಾ ಅವರನ್ನು ಕರೆಯಿಸಿಕೊಂಡು, ವಿಡಿಯೋ ಕೊಡುವಂತೆ ಒತ್ತಾಯಿಸಲಾಗಿದೆ. ಆದರೆ ತಮ್ಮ ಬಳಿ ಯಾವುದೇ ವಿಡಿಯೋ ಇಲ್ಲ ಎಂದು ಸಮೀವುಲ್ಲಾ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಏಜಾಜ್ ಮಚ್ಚಿನ ಹಿಂಬದಿಯಿಂದ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಎಡಗೈ ಮೂಳೆ ಮುರಿದಿದ್ದು, ಸಮೀವುಲ್ಲಾ ಅವರು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದನ್ನೂ ಓದಿ | ಶಿವಮೊಗ್ಗದಲ್ಲಿ ರೋಡ್ ಸೈಡಲ್ಲಿ ನಿಂತಿದ್ದ ಯುವಕರಿಗೆ ಚಾಕು ತೋರಿಸಿ ಕೊಲೆ ಬೆದರಿಕೆ

ಸಮೀವುಲ್ಲಾ ಮತ್ತು ಏಜಾಜ್‍ ಅವರು ಬಹು ವರ್ಷದಿಂದ ಪರಿಚಿತರು. ಒಟ್ಟಿಗೆ ವ್ಯವಹಾರ ಮಾಡುತ್ತಿದ್ದರು. ಆದರೆ ವಿಡಿಯೋ ಒಂದರ ವಿಚಾರವಾಗಿ ಕಿರಿಕ್ ಆಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ | ಕದ್ದ ಮೊಬೈಲ್‌ಗಳನ್ನು ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದ ಬಳಿ ಮಾರುತ್ತಿದ್ದವನು ಅರೆಸ್ಟ್, ಎಷ್ಟು ಮೊಬೈಲ್ ಸಿಕ್ಕಿವೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment