FATAFAT NEWS, 3 NOVEMBER 2024
ಹಣ್ಣಿನ ಅಂಗಡಿಗೆ ಬೆಂಕಿ
ಗಾಂಧಿ ಬಜಾರ್ : ಹಫ್ತ ಕೊಡದಕ್ಕೆ ಹಣ್ಣಿನ ಅಂಗಡಿಗೆ ಬೆಂಕಿ ಹಚ್ಚಲಾಗಿದೆ. ಶಿವಮೊಗ್ಗದ ಗಾಂಧಿ ಬಜಾರ್ ಮುಖ್ಯ ರಸ್ತೆಯಲ್ಲಿ ಭುವನೇಶ ಎಂಬುವವರ ಹಣ್ಣಿನ ಅಂಗಡಿಯಲ್ಲಿ ಹಫ್ತ ಕೊಡುವಂತೆ ವ್ಯಕ್ತಿಯೊಬ್ಬ ಆಗ್ರಹಿಸಿದ್ದ. ನಿರಾಕರಿಸಿದ್ದಕ್ಕೆ ಅಂಗಡಿಗೆ ಬೆಂಕಿ ಹಚ್ಚಿದ್ದಾನೆ ಎಂದು ಆರೋಪಿಸಲಾಗಿದೆ. ಸುಮಾರು 80 ಸಾವಿರ ರೂ. ಮೌಲ್ಯ ಹಣ್ಣು, ತಕ್ಕಡಿ, ಫೈಬರ್ ಕ್ರೇಟ್ ಸೇರಿದಂತೆ ಹಲವು ವಸ್ತುಗಳು ಹಾನಿಯಾಗಿವೆ. ಸುಮಾರು 1 ಲಕ್ಷ ರೂ. ನಷ್ಟವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಭಾರಿ ಮಳೆಗೆ ಬೆಳೆ ಹಾನಿ, ಶಾಸಕ ವಿಜಯೇಂದ್ರ ಭೇಟಿ
ಚಲಿಸುತ್ತಿದ್ದ ಬೈಕ್ ಮತ್ತೊಂದು ಬೈಕ್ ಡಿಕ್ಕಿ
ಹರಮಘಟ್ಟ : ಚಲಿಸುತ್ತಿದ್ದ ಬೈಕ್ಗೆ ಹಿಂಬದಿಯಿಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದು ಸವಾರ ಗಾಯಗೊಂಡಿದ್ದಾರೆ. ಶಿವಮೊಗ್ಗ ತಾಲೂಕು ಹರಮಘಟ್ಟ ಸರ್ಕಾರಿ ಶಾಲೆ ಮುಂಭಾಗ ಘಟನೆ ನಡೆದಿದೆ. ಹಾಡೋನಹಳ್ಳಿಯ ವಿರುಪಾಕ್ಷಪ್ಪ ಎಂಬುವವರು ಗಾಯಗೊಂಡಿದ್ದಾರೆ. ಅ.5ರಂದು ಅಪಘಾತವಾಗಿತ್ತು. ಆದರೆ ಹಿಂಬದಿಯಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದ ಬೈಕ್ ಸವಾರ ಅಪಘಾತದ ಬಳಿಕ ಬೈಕ್ ನಿಲ್ಲಿಸದೆ ತೆರಳಿದ್ದ. ಆತನಿಗಾಗಿ ಹುಡುಕಿ ತಡವಾಗಿ ದೂರು ನೀಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಮಲೆನಾಡ ರೈತರೊಂದಿಗೆ ವಿಧಾನಸೌಧದಲ್ಲಿ ಮೀಟಿಂಗ್, ಏನೆಲ್ಲ ಚರ್ಚೆಯಾಯ್ತು?
ಅಡಿಕೆ ವರ್ತಕರ ಕ್ಲಬ್ ಮುಂಭಾಗ ಅಪಘಾತ
ಮಲ್ಲಿಗೇನಹಳ್ಳಿ : ಚಲಿಸುತ್ತಿದ್ದ ಟಿವಿಎಸ್ ಎಕ್ಸ್ಎಲ್ಗೆ ಮತ್ತೊಂದು ಬೈಕ್ ಡಿಕ್ಕಿಯಾಗಿ ಸವಾರ ಗಾಯಗೊಂಡಿದ್ದಾರೆ. ಶಿವಮೊಗ್ಗ – ಸಾಗರ ರಸ್ತೆಯ ಅಡಿಕೆ ವರ್ತಕರ ಕ್ಲಬ್ ಮುಂಭಾಗ ಘಟನೆ ಸಂಭವಿಸಿದೆ. ಟಿವಿಎಸ್ ಎಕ್ಸ್ಎಲ್ನಲ್ಲಿ ತೆರಳುತ್ತಿದ್ದ ವಿರೂಪಿನಕೊಪ್ಪದ ರಾಮಸ್ವಾಮಿ ಅವರಿಗೆ ಎಡಪಕ್ಕೆ ಮೂಳೆ, ಎಡಗಣ್ಣು, ಮೊಣಕಾಲುಗಳಿಗೆ ಗಾಯವಾಗಿದೆ ಎಂದು ಆರೋಪಿಸಲಾಗಿದೆ. ಚಿಕಿತ್ಸೆ ವೆಚ್ಚ ಭರಿಸುವುದಾಗಿ ಬೈಕ್ ಸವಾರ ಭರವಸೆ ನೀಡಿದ್ದ. ಆದರೆ ಮಾತಿಗೆ ತಪ್ಪಿದ ಹಿನ್ನೆಲೆ ರಾಮಸ್ವಾಮಿ ಅವರ ದೂರಿನ ಮೇರೆಗೆ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಇವತ್ತು ಬಿಸಿಲ ಧಗೆ, ಅಲ್ಲಲ್ಲಿ ಸಾಧಾರಣ ಮಳೆ ಸಾಧ್ಯತೆ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200