SHIVAMOGGA LIVE NEWS | 29 MAY 2024
BHADRAVATHI : ಕುರಿ ಶೆಡ್ನ ಬೀಗ ಮುರಿದು ನಾಲ್ಕು ಕುರಿಗಳನ್ನು (Sheep) ಕಳವು ಮಾಡಲಾಗಿದೆ. ಭದ್ರಾವತಿ ತಾಲೂಕು ಬೆಳ್ಳಿಗೆರೆ ಗ್ರಾಮದ ಅಡಿಕೆ ತೋಟದಲ್ಲಿದ್ದ ಕುರಿ ಶೆಡ್ನಲ್ಲಿ ಕೃತ್ಯ ನಡೆದಿದೆ. ಮೇ 25ರಂದು ಬೆಳಗ್ಗೆ ಮಾಲೀಕ ರಾಮಚಂದ್ರ ಅವರು ಕುರಿಗಳಿಗೆ ಮೇವು ಹಾಕಲು ಬಂದಾಗ ನಾಲ್ಕು ಕುರಿಗಳು ಕಳುವಾಗಿರುವುದು ಗೊತ್ತಾಗಿದೆ.
![]() |
ಇದನ್ನೂ ಓದಿ – ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲೆ ಅರಣ್ಯ ರಕ್ಷಕನ ಮೃತದೇಹ ಪತ್ತೆ
ಶೆಡ್ನಲ್ಲಿ ಒಟ್ಟು 7 ಕುರಿಗಳನ್ನು ಸಾಕಿದ್ದರು. ಮೇ 24ರ ರಾತ್ರಿ ನಾಲ್ಕು ಕುರಿಗಳು ಕಳುವಗಿದ್ದವು. ಸಿಸಿಟಿವಿ ಪರಿಶೀಲಿಸಿದಾಗ ಮೂವರು ಕಳ್ಳರು ತೋಟಕ್ಕೆ ನುಗ್ಗಿ, ಕುರಿ ಶೆಡ್ನ ಬೀಗ ಮುರಿದು ಕಳ್ಳತನ ಮಾಡಿರುವುದು ಸೆರೆಯಾಗಿತ್ತು. ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಗಾಂಧಿ ಬಜಾರ್ನಲ್ಲಿ ಹಾಡಹಗಲೆ ಮಹಿಳೆಗೆ ಮಂಕು ಕವಿಯುವಂತೆ ಮಾಡಿದ ಕಳ್ಳಿಯರು, ಮುಂದೇನಾಯ್ತು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200