ಶಿವಮೊಗ್ಗದ ಬಾರ್‌ನಲ್ಲಿ ಮದ್ಯ ಸೇವಿಸಿ ಪ್ರಜ್ಞೆ ತಪ್ಪಿದ ಉದ್ಯಮಿ, ಎಚ್ಚರವಾದಾಗ ಕಾದಿತ್ತು ಆಘಾತ, ಆಗಿದ್ದೇನು?

ಶಿವಮೊಗ್ಗ: ಇಲ್ಲಿನ ಬಿ.ಹೆಚ್ ರಸ್ತೆಯ ಬಾರ್‌ ಒಂದರಲ್ಲಿ ಮದ್ಯ ಸೇವಿಸಿ ಪ್ರಜ್ಞೆ ತಪ್ಪಿ ಬಿದ್ದಿದ್ದ ವ್ಯಕ್ತಿಯೊಬ್ಬರ ಚಿನ್ನದ ಕಡಗ ಹಾಗೂ ಎರಡು ಉಂಗುರಗಳನ್ನು ಕಳವು ಮಾಡಲಾಗಿದೆ. ಕಳುವಾದ ಒಡವೆಗಳ ಒಟ್ಟು ಮೌಲ್ಯ ₹4,25,000 ಎಂದು ಅಂದಾಜಿಸಲಾಗಿದೆ.

ಹೊಟೇಲ್‌ ಉದ್ಯಮಿಯೊಬ್ಬರು ಶಿವಮೊಗ್ಗ ನಗರದ ಬಿ.ಹೆಚ್ ರಸ್ತೆಯಲ್ಲಿರುವ ಬಾರ್ ಆಂಡ್ ರೆಸ್ಟೋರೆಂಟ್‌ಗೆ ಮದ್ಯಪಾನ ಮಾಡಲು ಹೋಗಿದ್ದರು. ಮದ್ಯಪಾನ ಮಾಡಿದ್ದ ಉದ್ಯಮಿ ರಾತ್ರಿ 11:30ಕ್ಕೆ ಬಾರ್ ಒಳಗಡೆಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ನಂತರ ಬಾರ್‌ನ ಸಿಬ್ಬಂದಿ ಅವರನ್ನು ಎತ್ತಿಕೊಂಡು ಬಂದು ಹೊರಗೆ ಬಿಟ್ಟು, ಬಾರ್ ಬಾಗಿಲು ಹಾಕಿಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.

Shivamogga-Police-Jeep

ಮದ್ಯದ ಅಮಲು ಇಳಿದ ನಂತರ ವ್ಯಕ್ತಿ ಎಚ್ಚರಗೊಂಡು ನೋಡಿದಾಗ ಕಳವು ನಡೆದಿರುವುದು ಗೊತ್ತಾಗಿದೆ. ಅವರ ಕೈಯಲ್ಲಿದ್ದ ₹3,10,000 ಮೌಲ್ಯದ 31 ಗ್ರಾಂ ತೂಕದ ಬಂಗಾರದ ಕಡಗ ಹಾಗೂ ಬಲಗೈ ಬೆರಳಿನಲ್ಲಿದ್ದ ₹1,15,000 ಮೌಲ್ಯದ 10 ಗ್ರಾಂ ತೂಕದ ಎರಡು ಬಂಗಾರದ ಉಂಗುರಗಳನ್ನು ಕಳವು ಮಾಡಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp