ಶಿವಮೊಗ್ಗ ಲೈವ್
ಶಿವಮೊಗ್ಗ: ಹುಣಸೋಡು ಗೆಜ್ಜೇನಹಳ್ಳಿ ರಸ್ತೆಯ ರಾಮಕೃಷ್ಣ ಆಶ್ರಮದ ಬಳಿ ಸಂಭವಿಸಿದ ಅಪಘಾತದಲ್ಲಿ ಸಿವಿಲ್ ಇಂಜಿನಿಯರ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ನಾಗೇಂದ್ರ ಕಾಲೋನಿ ನಿವಾಸಿ ಮದನ್.ಆರ್ (28) ಮೃತರು. ಕೆಲಸದ ನಿಮಿತ್ತ ಗೆಜ್ಜೇನಹಳ್ಳಿಗೆ ತೆರಳಿದ್ದ ವೇಳೆ ಘಟನೆ ನಡೆದಿದೆ. ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.
ಈ ಸುದ್ದಿಯನ್ನೂ ಓದಿ
ಸಾಗರದ ಕಾಸ್ಪಾಡಿ ಕೆರೆ ಏರಿ ಮೇಲೆ ತಪ್ಪಿದ ಅನಾಹುತ, ಹೇಗಾಯ್ತು ಅಪಘಾತ?
ಹೇಗಾಯ್ತು ಅಪಘಾತ?
ಕೆಲಸ ಮುಗಿಸಿ ವಾಪಸ್ ಬರುವಾಗ ವಾಹನವೊಂದು ಮದನ್ ಅವರ ಬೈಕ್ಗೆ ಡಿಕ್ಕಿ ಹೊಡೆದೆ. ಘಟನೆ ಬಳಿಕ ವಾಹನ ನಿಲ್ಲಿಸದೆ ಚಾಲಕ ಪರಾರಿಯಾಗಿದ್ದಾನೆ. ಗಂಭೀರ ಗಾಯಗೊಂಡಿದ್ದ ಮದನ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಈ ಸುದ್ದಿಯನ್ನೂ ಓದಿ
20 ವರ್ಷದ ಯುವಕನಿಗೆ ಕಠಿಣ ಜೈಲು ಶಿಕ್ಷೆ, ₹1.62 ಲಕ್ಷ ದಂಡ, ಏನಿದು ಕೇಸ್?