SHIVAMOGGA LIVE NEWS | 19 MAY 2023
THIRTHAHALLI : ಸಮುದಾಯ ಭವನದಲ್ಲಿ (Community Hall) ನಡೆದ ಜೋಡಿ ಕೊಲೆ ಆರೋಪಿ ರಾಜಣ್ಣ ಎಂಬಾತನನ್ನು ಬಂಧಿಸಿ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಇಬ್ಬರ ಹತ್ಯೆಗೆ ರಾಜಣ್ಣ ಕಾರಣ ಬಾಯಿ ಬಿಟ್ಟಿದ್ದಾನೆ.
ಇಡ್ಲಿ ವಿಚಾರಕ್ಕೆ ನಡೆದ ಕಿರಿಕ್
ಘಟನೆ ಕುರಿತು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಕುರುವಳ್ಳಿ ವಿಶ್ವಕರ್ಮ ಸಮುದಾಯ ಭವನದಲ್ಲಿ ಟೈಲ್ಸ್ ಕೆಲಸಕ್ಕಾಗಿ 12 ದಿನದ ಹಿಂದೆ ದಾವಣಗೆರೆಯಿಂದ ಐವರು ಕಾರ್ಮಿಕರು ಬಂದಿದ್ದರು. ರಾಜಣ್ಣ ಅಡುಗೆ ಮಾಡುವ ಜವಾಬ್ದಾರಿ ನಿಭಾಯಿಸುತ್ತಿದ್ದ. ಗುರುವಾರ ಬೆಳಗ್ಗೆ ಕಾರ್ಮಿಕರಿಗೆ ಇಡ್ಲಿ ಕೊಟ್ಟಿದ್ದರು. ರಾತ್ರಿ ಊಟಕ್ಕೂ ಅದೆ ಇಡ್ಲಿ ನೀಡಿದ್ದಾರೆ. ಇದೆ ವಿಚಾರವಾಗಿ ರಾಜಣ್ಣ ಜೊತೆಗೆ ಬೀರೇಶ ಮತ್ತು ಮಂಜುನಾಥ್ ಜಗಳವಾಡಿದ್ದರು. ಎಳೆದಾಡಿ ರಾಜಣ್ಣಗೆ ಹೊಡೆದಿದ್ದರು ಎಂದು ಆರೋಪಿಸಲಾಗಿದೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಪಿಕಾಸಿಯಿಂದ ಹೊಡೆದು ಹತ್ಯೆ
ರಾತ್ರಿ ಊಟ ಮುಗಿಸಿ ಎಲ್ಲರು ಮಲಗಿದ್ದರು. ಎಳೆದಾಡಿದ್ದರಿಂದ ಕೋಪಗೊಂಡಿದ್ದ ರಾಜಣ್ಣ ಟೆರೇಸ್ ಮೇಲೆ ಮಲಗಿದ್ದ ಮಂಜುನಾಥ ಮತ್ತು ಕಟ್ಟಡದ (Community Hall) ಒಳಗೆ ಮಲಗಿದ್ದ ಬೀರೇಶನ ತಲೆಗೆ ಪಿಕಾಸಿಯಿಂದ ಹೊಡೆದು ಹತ್ಯೆ ಮಾಡಿದ್ದಾನೆ ಎಂದು ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ – ಮನೆಯಲ್ಲಿ ಶೌಚಾಲಯಕ್ಕೆ ಹೋಗಿ ಹೊರ ಬಂದ ಕಾಂಗ್ರೆಸ್ ಹಿರಿಯ ನಾಯಕಿಗೆ ಕಾದಿತ್ತು ಶಾಕ್
ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200