ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ : ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಿವೃತ್ತ ಶಿಕ್ಷಕಿಯೊಬ್ಬರಿಗೆ (ಹೆಸರು ಗೌಪ್ಯ) ಆಯುರ್ವೇದ ಔಷಧ ಕೊಡುವುದಾಗಿ ನಂಬಿಸಿ 1.75 ಲಕ್ಷ ರೂ. ಪಡೆದು ವಂಚಿಸಲಾಗಿದೆ. ಈಗ ಹಣವನ್ನು ಹಿಂತಿರುಗಿಸಿಲ್ಲ. ಔಷಧವನ್ನು ಕೊಟ್ಟಿಲ್ಲ ಎಂದು ಆರೋಪಿಸಿ ನಿವೃತ್ತ ಶಿಕ್ಷಕಿ (Teacher) ತುಂಗಾ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅಸ್ಪತ್ರೆ ಮುಂದೆಯೇ ಸಿಕ್ಕ ವಂಚಕ
ನಿಯಮಿತ ಆರೋಗ್ಯ ತಪಾಸಣೆ ಮುಗಿಸಿ ನಿವೃತ್ತ ಶಿಕ್ಷಕಿ ಆಸ್ಪತ್ರೆಯಿಂದ ಹೊರ ಬರುತ್ತಿದ್ದಂತೆ ವ್ಯಕ್ತಿಯೊಬ್ಬ ಪರಿಚಯಿಸಿಕೊಂಡಿದ್ದ. ಆಯುರ್ವೇದ ಔಷಧಿಯಿಂದ ಆರೋಗ್ಯ ಸುಧಾರಿಸಲಿದೆ ಎಂದು ನಂಬಿಸಿದ್ದ. ಅಲ್ಲದೆ ನಿವೃತ್ತ ಶಿಕ್ಷಕಿಯಿಂದ 25 ಸಾವಿರ ರೂ. ಮುಂಗಡ ಹಣ ಪಡೆದು ಆಯುರ್ವೇದ ಕೇಂದ್ರಕ್ಕೆ ಬರುವಂತೆ ತಿಳಿಸಿದ್ದ.
ಲಕ್ಷ ಲಕ್ಷ ಹಣಕ್ಕೆ ಡಿಮಾಂಡ್
ನಿವೃತ್ತ ಶಿಕ್ಷಕಿಯ ಮನೆಗೆ ಬಂದಿದ್ದ ವಂಚಕ ಆಕೆಯನ್ನು ಆಯುರ್ವೇದ ಔಷಧ ಕೇಂದ್ರಕ್ಕೆ ಕರೆದೊಯ್ದಿದ್ದ. ಅಲ್ಲಿ ನಿವೃತ್ತ ಶಿಕ್ಷಕಿಯ ಮೂಗಿಗೆ ಏನೋ ಸವಿರದಂತೆ ಮಾಡಿ, ಅರೆಪ್ರಜ್ಞಳಾಗುವಂತೆ ಮಾಡಿ ಆರೋಗ್ಯ ಸಮಸ್ಯೆ ಸಂಪೂರ್ಣ ಪರಿಹಾರವಾಗಬೇಕಿದ್ದರೆ 5.50 ಲಕ್ಷ ರೂ. ನೀಡುವಂತೆ ಒತ್ತಾಯಿಸಿದ್ದರು. ಕೊನೆಗೆ ತಮ್ಮ ಬ್ಯಾಂಕ್ ಖಾತೆಯಿಂದ 1.50 ಲಕ್ಷ ರೂ. ಹಣ ಬಿಡಿಸಿ ಕೊಟ್ಟದ್ದರು ಎಂದು ಆರೋಪಿಸಲಾಗಿದೆ.

ಹಣವೂ ಇಲ್ಲ, ಔಷಧವು ಇಲ್ಲ
ಹಣ ಪಡೆದ ವಂಚಕರು ಇನ್ಮುಂದೆ ಆಯುರ್ವೇದ ಕಚೇರಿಗೆ ಬರುವುದು ಬೇಡ. ಮನೆಗೆ ಔಷಧ ತಲುಪಿಸುವುದಾಗಿ ನಂಬಿಸಿದ್ದರು. ಔಷಧ ಬಾರದಿದ್ದರಿಂದ ನಿವೃತ್ತ ಶಿಕ್ಷಕಿ ಕರೆ ಮಾಡಿದಾಗ ಹೆಚ್ಚುವರಿ ಹಣ ಕೊಡಬೇಕು ಎಂದು ವಂಚಕರು ಸೂಚಿಸಿದ್ದಾರೆ. ಈ ಕುರಿತು ಪರಿಚಿತರ ಬಳಿ ತಿಳಿಸಿದಾಗ ಮತ್ತೆ ಹಣ ನೀಡದಂತೆ ಎಚ್ಚರಿಸಿದ್ದರು. ಹಾಗಾಗಿ ನಿವೃತ್ತ ಶಿಕ್ಷಕಿಯು ಹಣ ಕೊಡುವಂತೆ ಕರೆ ಮಾಡಿದಾಗಲು ಉಳಿದ ಹಣ ಕೊಡುವಂತೆ ಸೂಚಿಸಿದ್ದರು. ಇದರಿಂದ ನೊಂದ ಶಿಕ್ಷಕಿ ತುಂಗಾ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಇದನ್ನು ಓದಿ » ಸಿಗಂದೂರು ಲಾಂಚ್, ಬೆಳಗಾವಿಯ ಕುಟುಂಬದ ಮೇಲೆ ಹಲ್ಲೆ ಅಟ್ಯಾಕ್, ಕಾರಣವೇನು?
LATEST NEWS
- ಶಿವಮೊಗ್ಗದ ವಾಹನ ಸವಾರರೆ ಎಚ್ಚರ, ಪೊಲೀಸ್ ಇಲಾಖೆಯಿಂದ ಮಹತ್ವದ ಪ್ರಕಟಣೆ, ಏನದು?

- ಉಪನ್ಯಾಸಕ ಸುರೇಶ್ ನಿಗೂಢ ಸಾವು ಕೇಸ್, ಶಿವಮೊಗ್ಗ SP ಫಸ್ಟ್ ರಿಯಾಕ್ಷನ್, ಏನಂದ್ರು?

- ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಗದರ್ಶನ, ದೊಡ್ಡ ಸಂಖ್ಯೆಯ ಭಕ್ತರು ಭಾಗಿ

- ಟಾಟಾ ಏಸ್, ಆಟೋ ಡಿಕ್ಕಿ, ಮಗು ಸೇರಿ ಹಲವರಿಗೆ ಗಾಯ

- ಮೀನು ಮಾರುಕಟ್ಟೆ ಬಳಿ ಕಿರಿಕ್, ಕಾರಿನ ಬೀಗದಿಂದ ವ್ಯಕ್ತಿಯ ಕಣ್ಣಿಗೆ ಹೊಡೆದು ಜೀವ ಬೆದರಿಕೆ, ಕಾರಣವೇನು?

About The Editor
ನಿತಿನ್ ಆರ್.ಕೈದೊಟ್ಲು















