SHIVAMOGGA LIVE NEWS | 17 DECEMBER 2022
ಶಿವಮೊಗ್ಗ : ಗಾಂಧಿ ಬಜಾರ್ ಚೋರ್ ಬಜಾರ್ ನಲ್ಲಿ ಚಾಕು ಇರಿತ (stabbing) ಪ್ರಕರಣ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 100 ರೂ.ಗಾಗಿ ಗಲಾಟೆಯಾಗಿ, ಚಾಕುವಿನಿಂದ ಇರಿಯಲಾಗಿದೆ ಎಂದು ಗಾಯಾಳು ಫಯಾಜ್ ಅಹಮದ್ ಆರೋಪಿಸಿದ್ದಾನೆ.
ಫಯಾಜ್ ಅಹಮದ್, ಗಾಂಧಿ ಬಜಾರ್ ನ ಚೋರ್ ಬಜಾರ್ ನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದಾಗ ಹರ್ಬಾಜ್ ಮತ್ತು ಶೊಯಬ್ ಎಂಬುವವರು ಬಂದಿದ್ದಾರೆ. 100 ರೂ. ಕೊಡು ಯಾರಿಗೋ ಕೊಡಬೇಕಿದೆ ಎಂದು ಕೇಳಿದ್ದಾರೆ. ಆಗ ಫಯಾಜ್ ಅಹಮದ್ ತನ್ನ ಬಳಿ ಹಣವಿಲ್ಲ ಎಂದು ತಿಳಿದ್ದಾನೆ. ಇದೆ ವಿಚಾರವಾಗಿ ಜಗಳವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. (stabbing)
ಇದನ್ನೂ ಓದಿಲು ಕ್ಲಿಕ್ ಮಾಡಿ – ಮೈಸೂರಿನ ಮಕ್ಕಳಿದ್ದ ಬಸ್ ಸಿಗಂದೂರು ಬಳಿ ಅಪಘಾತ, ಇಡೀ ದ್ವೀಪ ನೆರವಿಗೆ ನಿಂತಿದ್ದು ಹೇಗೆ ಗೊತ್ತಾ?
ದುಡ್ಡು ಕೊಡಲೆಬೇಕು ಎಂದು ಪಟ್ಟು ಹಿಡಿದ ಆರೋಪಿಗಳು ಅವಾಚ್ಯವಾಗಿ ನಿಂದಿಸಿದ್ದಾರೆ. ಬಳಿಕ ಶೋಹೆಬ್ ಬಳಿ ಇದ್ದ ಚಾಕುವಿನಿಂದ ಹರ್ಬಾಜ್ ಫಯಾಜ್ ಅಹಮದ್ ಎದೆಯ ಎಡ ಭಾಗಕ್ಕೆ ಚುಚ್ಚಿದ್ದಾನೆ ಎಂದು ಆರೋಪಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200