ತಿರುಪತಿಯಿಂದ ಶಿವಮೊಗ್ಗದ ಮನೆಗೆ ಮರಳಿದ ಕುಟುಂಬಕ್ಕೆ ಕಾದಿತ್ತು ಆಘಾತ, ಆಗಿದ್ದೇನು?

ಶಿವಮೊಗ್ಗ: ಮನೆಯೊಂದರ ಬೀಗ ಒಡೆದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಹಾಗೂ ನಗದು ಕಳ್ಳತನ ಮಾಡಲಾಗಿದೆ. ನಗರದ ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಯಲ್ಲಿ ಘಟನೆ ನಡೆದಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಆಶ್ರಯ ಬಡಾವಣೆಯ ನಿವಾಸಿ, ಪತ್ರಿಕೆ ವಿತರಕ ರಾಮು ಜಿ. ಎಂಬುವರು ಜೂನ್ 12ರಂದು ಕುಟುಂಬ ಸಹಿತ ತಿರುಪತಿಗೆ ತೆರಳಿದ್ದರು. ಈ ವೇಳೆ ಮನೆಯ ರೂಮಿನ ಬೀರುವಿನಲ್ಲಿದ್ದ ಚಿನ್ನದ ಒಡವೆಗಳು ಹಾಗೂ ಮತ್ತೊಂದು ಕೋಣೆಯಲ್ಲಿದ್ದ ನಗದು ಸುರಕ್ಷಿತವಾಗಿಟ್ಟು ಬೀಗ ಹಾಕಿದ್ದರು. ಜೂನ್ 17ರಂದು ಮುಂಜಾನೆ ದೇವಸ್ಥಾನದಿಂದ ವಾಪಸ್ ಬಂದು ನೋಡಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ.

Crime-News-General-Image

ಕಳ್ಳರು ಮುಂಬಾಗಿಲಿನ ಬೀಗ ಹಾಗೂ ಇಂಟರ್‌ಲಾಕ್ ಅನ್ನು ಆಯುಧದಿಂದ ಮೀಟಿ ಒಳನುಗ್ಗಿದ್ದಾರೆ ಎಂದು ಆರೋಪಿಸಲಾಗಿದೆ. ಬೀರನಲ್ಲಿದ್ದ ಚಿನ್ನದ ಚೈನ್‌ಗಳು, ಉಂಗುರಗಳು, ಜುಮುಕಿ ಸೇರಿದಂತೆ ಒಟ್ಟು ₹6 ಲಕ್ಷ ಮೌಲ್ಯದ 60.7 ಗ್ರಾಂ ಚಿನ್ನಾಭರಣ, ₹4,000 ಮೌಲ್ಯದ ಮಗುವಿನ ಬೆಳ್ಳಿಯ ಕಾಲಬಳೆ-ಗೆಜ್ಜೆ ಹಾಗೂ ಕೋಣೆಯಲ್ಲಿದ್ದ ₹5,000 ನಗದು ಹಣವನ್ನು ಕಳ್ಳರು ದೋಚಿದ್ದಾರೆ. ಒಟ್ಟು ₹6,09,000 ಮೌಲ್ಯದ ವಸ್ತುಗಳು ಕಳವಾಗಿವೆ ಎಂದು ಆರೋಪಿಸಲಾಗಿದೆ. ವಿನೋಬಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗದಲ್ಲಿ ಉಚಿತ ಸಮಾಲೋಚನೆ, 40% ರಿಯಾಯಿತಿ Nanjappa Hospital Advertisement ಇಲ್ಲಿ ಕ್ಲಿಕ್‌ ಮಾಡಿ ಹೆಸರು ನೋಂದಾಯಿಸಿ

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion