ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS |4 JANUARY 2023
SORABA : ಟಿಕೆಟ್ ಚೆಕಿಂಗ್ (ticket checking) ಮಾಡಲು ಬಸ್ ಹತ್ತಿದ ಸಂಚಾರ ನಿರೀಕ್ಷಕರೊಬ್ಬರ ಮೇಲೆ ಕಂಡಕ್ಟರ್ ಒಬ್ಬರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳಿ ಕೇಂದ್ರ ಕಚೇರಿಯ ಸಂಚಾರಿ ನಿರೀಕ್ಷಕ ದಾನಪ್ಪ ಗೋಳ, ಕೇಂದ್ರ ಸಂಚಾರ ನಿರೀಕ್ಷಕ ಅಮರನಾಥ ಕುಂಟೋಜಿ ಅವರು ಟಿಕೆಟ್ ಚೆಕಿಂಗ್ (ticket checking) ಮಾಡಲು ಕೆ.ಎಸ್.ಆರ್.ಟಿ.ಸಿ ಬಸ್ ಒಂದನ್ನು ಹತ್ತಿದ್ದರು. ಸಂಚಾರಿ ನಿರೀಕ್ಷಕರನ್ನು ಕಂಡ ಕೂಡಲೆ ಕಂಡಕ್ಟರ್ ಪ್ರಯಾಣಿಕರಿಗೆ ಟಿಕೆಟ್ ವಿತರಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಬಸ್ ಹತ್ತಿದ ಕೂಡಲೆ ಕಂಡಕ್ಟರ್ ಬಳಿ ಇದ್ದ ಟಿಕೆಟ್ ವಿತರಣಾ ಮೆಷಿನ್ ಪಡೆದ ಸಂಚಾರಿ ನಿರೀಕ್ಷಕರು ಪರಿಶೀಲನೆ ನಡೆಸಿದರು. ಅಲ್ಲದೆ ತಮ್ಮನ್ನು ಕಂಡ ಕೂಡಲೆ ಟಿಕೆಟ್ ವಿತರಣೆ ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ – ಸೊರಬ ತಾಲೂಕು ಪಂಚಾತಿಗೆ 17 ಕ್ಷೇತ್ರ ಫೈನಲ್, ಯಾವ್ಯಾವ ಹಳ್ಳಿ ಯಾವ ಕ್ಷೇತ್ರಕ್ಕೆ ಸೇರುತ್ತೆ? ಇಲ್ಲಿದೆ ಪಟ್ಟಿ
ಇದಕ್ಕೆ ಕಂಡಕ್ಟರ್ ತಮ್ಮ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದಾನಪ್ಪ ಗೋಳ ಆರೋಪಿಸಿದ್ದಾರೆ. ಕಂಡಕ್ಟರ್ ವಿರುದ್ಧ ಸೊರಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
LATEST NEWS
- ಸಾವಿನಲ್ಲು ಸಾರ್ಥಕತೆ ಮೆರೆದ ಶಿರಾಳಕೊಪ್ಪದ ಯುವಕ, ಬಹು ಅಂಗಾಂಗ ದಾನ, ಆಗಿದ್ದೇನು?

- ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಟಿ ರಂಜನಿ ರಾಘವನ್ ಉಪನ್ಯಾಸ, ಯಾವಾಗ? ಏನು ವಿಷಯ?

- ‘ಶಾಸಕರಿಗೆ ಹೇಳಿ ನೀನೆ ತಡೆದಿದ್ದೀಯ’ ಎಂದು ಆರೋಪಿಸಿ ವ್ಯಕ್ತಿ ಮೇಲೆ ಚಪ್ಪಲಿಯಿಂದ ಹಲ್ಲೆ, ಏನಿದು ಪ್ರಕರಣ?

- ಶಿವಮೊಗ್ಗದಲ್ಲಿ ರಾಷ್ಟ್ರಮಟ್ಟದ ಬಯಲು ಕುಸ್ತಿ, ಹೇಗಿತ್ತು ಎರಡನೇ ದಿನದ ಕಾದಾಟ? ಯಾರೆಲ್ಲ ಗೆದ್ದರು?

- ತೀರ್ಥಹಳ್ಳಿಯಲ್ಲಿ ಫಾರ್ಚುನರ್ ಕಾರಿನಲ್ಲಿ ಬಂದು ಇಂಜಿನಿಯರ್ಗೆ ಬೆದರಿಸಿ ಹಣ ವಸೂಲಿ, ಏನಿದು ಕೇಸ್?

About The Editor
ನಿತಿನ್ ಆರ್.ಕೈದೊಟ್ಲು

CLICK & JOIN – OUR WHATSAPP GROUP



