SHIVAMOGGA LIVE NEWS |4 JANUARY 2023
SORABA : ಟಿಕೆಟ್ ಚೆಕಿಂಗ್ (ticket checking) ಮಾಡಲು ಬಸ್ ಹತ್ತಿದ ಸಂಚಾರ ನಿರೀಕ್ಷಕರೊಬ್ಬರ ಮೇಲೆ ಕಂಡಕ್ಟರ್ ಒಬ್ಬರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳಿ ಕೇಂದ್ರ ಕಚೇರಿಯ ಸಂಚಾರಿ ನಿರೀಕ್ಷಕ ದಾನಪ್ಪ ಗೋಳ, ಕೇಂದ್ರ ಸಂಚಾರ ನಿರೀಕ್ಷಕ ಅಮರನಾಥ ಕುಂಟೋಜಿ ಅವರು ಟಿಕೆಟ್ ಚೆಕಿಂಗ್ (ticket checking) ಮಾಡಲು ಕೆ.ಎಸ್.ಆರ್.ಟಿ.ಸಿ ಬಸ್ ಒಂದನ್ನು ಹತ್ತಿದ್ದರು. ಸಂಚಾರಿ ನಿರೀಕ್ಷಕರನ್ನು ಕಂಡ ಕೂಡಲೆ ಕಂಡಕ್ಟರ್ ಪ್ರಯಾಣಿಕರಿಗೆ ಟಿಕೆಟ್ ವಿತರಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಬಸ್ ಹತ್ತಿದ ಕೂಡಲೆ ಕಂಡಕ್ಟರ್ ಬಳಿ ಇದ್ದ ಟಿಕೆಟ್ ವಿತರಣಾ ಮೆಷಿನ್ ಪಡೆದ ಸಂಚಾರಿ ನಿರೀಕ್ಷಕರು ಪರಿಶೀಲನೆ ನಡೆಸಿದರು. ಅಲ್ಲದೆ ತಮ್ಮನ್ನು ಕಂಡ ಕೂಡಲೆ ಟಿಕೆಟ್ ವಿತರಣೆ ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ – ಸೊರಬ ತಾಲೂಕು ಪಂಚಾತಿಗೆ 17 ಕ್ಷೇತ್ರ ಫೈನಲ್, ಯಾವ್ಯಾವ ಹಳ್ಳಿ ಯಾವ ಕ್ಷೇತ್ರಕ್ಕೆ ಸೇರುತ್ತೆ? ಇಲ್ಲಿದೆ ಪಟ್ಟಿ
ಇದಕ್ಕೆ ಕಂಡಕ್ಟರ್ ತಮ್ಮ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದಾನಪ್ಪ ಗೋಳ ಆರೋಪಿಸಿದ್ದಾರೆ. ಕಂಡಕ್ಟರ್ ವಿರುದ್ಧ ಸೊರಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200