SHIVAMOGGA LIVE NEWS | 1 NOVEMBER 2023
ANANDAPURA : ದೇವಸ್ಥಾನ, ಶಾಲೆಗಳ ಗೇಟ್ (gate), ಅಂಗಡಿಯೊಂದರ ರೋಲಿಂಗ್ ಶೆಟರ್ ಕಳ್ಳತನ ಮಾಡಿದ್ದ ಆರೋಪಿಗಳನ್ನು ಆನಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಣ್ಣೂರು ದೇವಾಲಯ, ಹೆಬ್ಬೋಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೆಪಿಎಸ್ ಶಾಲೆಯ ಗೇಟ್ಗಳ ಕಳ್ಳತನ ಮಾಡಲಾಗಿತ್ತು. ಅಂಗಡಿಯೊಂದರ ರೋಲಿಂಗ್ ಶೆಟರ್ ಕಳುವಾಗಿತ್ತು. ಈ ಸಂಬಂಧ ದೂರು ದಾಖಲಾಗಿತ್ತು. ಕಬ್ಬಿಣ ಮಾರಾಟ ಮಾಡಿದ ಸುಳಿವಿನ ಆಧಾರದಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:
ವಿಶೇಷ ವಿಮಾನದಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ ಅಮಿತ್ ಷಾ
ಇದನ್ನೂ ಓದಿ- ಶಿವಮೊಗ್ಗದ ಕಾರ್ ಶೋ ರೂಂಗೆ ದಂಡ ವಿಧಿಸಿದ ಗ್ರಾಹಕರ ನ್ಯಾಯಾಲಯ, ಕಾರಣವೇನು?
ಸುದರ್ಶನ್ (21) ಮತ್ತು ಸುದರ್ಶನ್ (22) ಬಂಧಿತರು. ಆರೋಪಿಗಳಿಂದ 25 ಸಾವಿರ ರೂ. ಮೌಲ್ಯದ ಕಬ್ಬಿಣ, ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ. ಪಿಎಸ್ಐ ಯುವರಾಜ್ ಕಂಬಳಿ, ನಿರ್ಮಲಾ, ದಿವಾಕರ್ ನಾಯಕ್, ಮಾಳಿಂಗ ರಾಯ್, ಸಂತೋಷ್ ನಾಯ್ಕ, ಅವಿನಾಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


