ಹೆದ್ದಾರಿ ಪಕ್ಕದ ಮರಕ್ಕೆ ಲಾರಿ ಡಿಕ್ಕಿ | ಹಿನ್ನೀರಿನಲ್ಲಿ ವಾಲಿದ ಸಿಗಂದೂರು ಬಸ್‌ – 3 ಫಟಾಫಟ್‌ ನ್ಯೂಸ್‌

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
SHIVAMOGGA LIVE NEWS | 28 AUGUST 2023
➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಅದಿರು ತುಂಬಿದ್ದ ಲಾರಿ ಅಪಘಾತ

RIPPONPETE : ಅದಿರು ತುಂಬಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ FATAFAT-NEWS-1ರಸ್ತೆ ಪಕ್ಕದ ಮರಕ್ಕೆ ಡಿಕ್ಕಿಯಾಗಿದೆ (Mishap). ಘಟನೆಯಲ್ಲಿ ಚಾಲಕನಿಗೆ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲಾರಿ ಕುಂದಾಪುರದಿಂದ ಹೊಸನಗರ ಮಾರ್ಗವಾಗಿ ಶಿವಮೊಗ್ಗಕ್ಕೆ ತೆರಳುತ್ತಿತ್ತು. ಸಿಡಿಹಳ್ಳ ಸೇತುವೆ ಸಮೀಪ ಅಪಘಾತ ಸಂಭವಿಸಿದ್ದು, ರಭಸಕ್ಕೆ ಲಾರಿ ಸಂಪೂರ್ಣ ಜಖಂ ಆಗಿದೆ. ರಿಪ್ಪನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

FATAFAT-MORE-NEWS

ಅಕ್ರಮ ಗೋವು ಸಾಗಣೆ, ವಾಹನ ವಶಕ್ಕೆ

RIPPONPETE : ಅಕ್ರಮವಾಗಿ ಗೋವು ಸಾಗಣೆ ಮಾಡುತ್ತಿದ್ದ ಟಾಟಾ ಏಸ್‌ FATAFAT-NEWS-2ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗವಟೂರು ಸಮೀಪದ ಬೆಳಕೋಡು ಬಳಿ ಸ್ಥಳೀಯರು ವಾಹನ ತಡೆದು ಪರಿಶೀಲಿಸಿದಾಗ ಗಿಡ್ಡ ತಳಿಯ ಒಂದು ಹೋರಿ ಟಾಟಾ ಏಸ್‌ ವಾಹನದಲ್ಲಿತ್ತು. ವಾಹನದಲ್ಲಿದ್ದವರು ಕೂಡಲೆ ಸ್ಥಳದಿಂದ ಪರಾರಿಯಾಗಿದ್ದಾರೆ. ಟಾಟಾ ಏಸ್‌ ಮತ್ತು ಒಂದು ದ್ವಿಚಕ್ರ ವಾಹನವನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

FATAFAT-MORE-NEWS

ಹಿನ್ನೀರಿನಲ್ಲಿ ವಾಲಿದ ಸಿಗಂದೂರು ಬಸ್‌

TUMARI : ಸಿಗಂದೂರಿನಿಂದ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ ಒಂದೆಡೆ FATAFAT-NEWS-3ವಾಲಿತ್ತು. ಶರಾವತಿ ಹಿನ್ನೀರಿಗೆ ಬೀಳುವ ಸ್ಥಿತಿ ಎದುರಾಗಿತ್ತು. ಅಂಬರಗೋಡ್ಲು ಲಾಂಚ್‌ ತಟದಲ್ಲಿ ಘಟನೆ ಸಂಭವಿಸಿದೆ. ಸಾರ್ವಜನಿಕರ ಸಹಕಾರದಿಂದ ಪ್ರಯಾಣಿಕರನ್ನು ಕೆಳಗಿಳಿಸಿದ್ದರಿಂದ ಯಾವುದೆ ಅನಾಹುತ ಸಂಭವಿಸಿಲ್ಲ. ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಹತ್ತಿಸಿಕೊಂಡಿದ್ದೆ ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ. ಬಸ್‌ ಏಕಾಏಕಿ ಒಂದು ಕಡೆಗೆ ವಾಲಿದ್ದರಿಂದ ಸಮಸ್ಯೆಯಾಗಿತ್ತು. ಅದೃಷ್ಟವಶಾತ್‌ ಅಪಾಯ ತಪ್ಪಿದೆ.

Leave a Comment