ಟಗರು ಹೀರೋಯಿನ್ ಜೊತೆ ಸೆಲ್ಫಿಗೆ ಮುಗಿಬಿದ್ದ ವಿದ್ಯಾರ್ಥಿಗಳು, ಭರ್ಜರಿ ಸ್ಟೆಪ್ಸ್ ಹಾಕಿದ ಮಾನ್ವಿತಾ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHANKARAGHATTA | 4 ಅಕ್ಟೋಬರ್ 2019

ಟಗರು ಹೀರೋಯಿನ್ ಜೊತೆ ಸೆಲ್ಫಿಗೆ ಮುಗಿಬಿದ್ದ ವಿದ್ಯಾರ್ಥಿಗಳು. ಗೌರವ ಧನವನ್ನು ನೆರೆ ಸಂತ್ರಸ್ತರಿಗೆ ನೀಡಿದ ನಟಿ. ಭರ್ಜರಿ ಸ್ಟೆಪ್ಸ್ ಹಾಕಿ ವಿದ್ಯಾರ್ಥಿಗಳನ್ನು ರಂಜಿಸಿದ ಮಾನ್ಯತಾ.

ಕುವೆಂಪು ವಿಶ್ವವಿದ್ಯಾಲದಯ ಮೂರು ದಿನದ ಸಹ್ಯಾದ್ರಿ ಉತ್ಸವಕ್ಕೆ ನಟಿ ಮಾನ್ವಿತಾ ಹರೀಶ್ ಚಾಲನೆ ನೀಡಿದ್ದಾರೆ. ಜ್ಞಾನ ಸಹ್ಯಾದ್ರಿ ಕ್ಯಾಂಪಸ್’ನಲ್ಲಿರುವ ಕುವೆಂಪು ಪ್ರತಿಮೆಗೆ ಹಾರ ಹಾಕಿ ಗೌರವ ಸಲ್ಲಿಸಿದರು. ಬಳಿಕ ಮರವಣಿಗೆಗೆ ಚಾಲನೆ ನೀಡಿದರು.

ಸೆಲ್ಫಿ.. ಸೆಲ್ಫಿ.. ಸೆಲ್ಫಿ..

ಉದ್ಘಾಟನೆಗೆ ನಟಿ ಮಾನ್ವಿತಾ ಆಗಮಿಸುತ್ತಿದ್ದಂತೆ ವಿದ್ಯಾರ್ಥಿಗಳು ಮುಗಿಬಿದ್ದು ಸೆಲ್ಫಿ ತೆಗೆಸಿಕೊಂಡರು. ಈ ವೇಳೆ ನೂಕುನುಗ್ಗಲು ಉಂಟಾಯಿತು. ಪೊಲೀಸರು ಮತ್ತು ವಿವಿ ಸಿಬ್ಬಂದಿ ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಹರಸಾಹಸಪಟ್ಟರು.

71650890 937968613231226 8260192991860228096 n.jpg? nc cat=109& nc oc=AQkfpff6uoE2p9JmRWMD4CGVZRe1bOpbGduwX 7EkP6khwfrfG1ubCeFRK9TWyPcQfbAjAzx1IiRCQ SD9gAqB2p& nc ht=scontent.fixe1 1

ಇನ್ನು, ಕುವೆಂಪು ಪ್ರತಿಮೆ ಬಳಿಕ ಲಿಫ್ಟ್’ನಲ್ಲಿ ಮೇಲೆ ಹತ್ತಿದ್ದ ನಟಿ ಮಾನ್ವಿತಾ, ತಮ್ಮ ಮೊಬೈಲ್’ನಲ್ಲಿ ವಿದ್ಯಾರ್ಥಿಗಳ ಸೆಲ್ಫೀ ಕ್ಲಿಕ್ಕಿಸಿ ಕ್ರೇಜ್ ಹೆಚ್ಚಿಸಿದರು. ಇನ್ನು, ಗೆಸ್ಟ್ ಹೌಸ್ ಬಳಿ ಮಾನ್ವಿತಾಗಾಗಿ ಕಾದು ಕೂತಿದ್ದ ವಿದ್ಯಾರ್ಥಿಗಳ ಜೊತೆಗೆ ತಾವೆ ಸೆಲ್ಫಿ ತೆಗೆದು ಖುಷಿಪಡಿಸಿದರು.

71577028 938036406557780 9219752178288164864 n.jpg? nc cat=105& nc oc=AQkvmXEVx8QhrFt5PwfWE4Dd8mdnvVKWt6Jjnyj9Jeoaf nlJf0q0En1809KHLtFkmkw5xftCjeO86vaoct7WHzU& nc ht=scontent.fixe1 1

ಗೌರವಧನ ನೆರೆ ಸಂತ್ರಸ್ತರಿಗೆ ಮೀಸಲು

ಸಹ್ಯಾದ್ರಿ ಉತ್ಸವಕ್ಕೆ ಚಾಲನೆ ನೀಡಿ ವೇದಿಕೆಯಲ್ಲಿ ಮಾತನಾಡಿದ ನಟಿ ಮಾನ್ವಿತಾ, ಕುವೆಂಪು ವಿಶ್ವವಿದ್ಯಾಲಯ ನೀಡುವ ಗೌರವಧನವನ್ನು ಚಿಕ್ಕಮಗಳೂರು ಜಿಲ್ಲೆಯ ಕಳಸಾ ಭಾಗದ ನೆರೆ ಸಂತ್ರಸ್ತರಿಗೆ ನೀಡುವುದಾಗಿ ಘೋಷಿಸಿದರು. ಬಳಿಕ ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಟಗರು ಸಿನಿಮಾದ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದರು.

71270028 938036526557768 828704928921812992 n.jpg? nc cat=102& nc oc=AQlEhyLrhO7Z4rXZWXVXkFp5TAbYZI2uFaUa1WX0atpm5i3rWHkRD95w4g57m8R jR5cSqyGBtxDFEPpoKhJRZoN& nc ht=scontent.fixe1 1

ಉತ್ಸವದಲ್ಲಿ 60 ಕಾಲೇಜುಗಳು

ಸಹ್ಯಾದ್ರಿ ಉತ್ಸವದಲ್ಲಿ 60 ಕಾಲೇಜುಗಳ ಒಂದೂವರೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. 23 ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ, ಕುಲಸಚಿವ ಎಸ್.ಎಸ್.ಪಾಟೀಲ್, ಪ್ರೊ.ವೆಂಕಟೇಶ್ವರುಲು, ಪ್ರೊ.ಹಿರೇಮಣಿನಾಯ್ಕ್, ಡಾ.ಮಂಜುನಾಥ್ ಸೇರಿದಂತೆ ಹಲವರು ಇದ್ದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment