CRIME NEWS, 27 JULY 2024 : ಶಿವಮೊಗ್ಗ ಜಿಲ್ಲೆಯ ಈ ಹೊತ್ತಿನ ಮೂರು ಪ್ರಮುಖ ಅಪರಾಧ ಸುದ್ದಿಗಳು ಇಲ್ಲಿದೆ.
[su_note note_color=”#EBEDEF” text_color=”#000000″ radius=”1″]
[su_label type=”important”]ಸವಳಂಗ ರಸ್ತೆ[/su_label]
ರೈಲು ಹಳಿ ಸಮೀಪ ಮಹಿಳೆ ಮೃತದೇಹ
ಶಿವಮೊಗ್ಗ ಲೈವ್.ಕಾಂ : ಸವಳಂಗ ರಸ್ತೆಯ ಸೇತುವೆ ಕೆಳಗೆ, ರೈಲ್ವೆ ಹಳಿ ಪಕ್ಕದಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ. ಕೃಷಿ ನಗರಕ್ಕೆ ಹೋಗುವ ಮಾರ್ಗದಲ್ಲಿ ವಿವಸ್ತ್ರಗಳಾಗಿರುವ ಮಹಿಳೆ ಮೃತದೇಹವನ್ನು ಗಮನಿಸಿದ ಸ್ಥಳೀಯರು ಕೂಡಲೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. 112 ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.

[/su_note]
[su_note note_color=”#EBEDEF” text_color=”#000000″ radius=”1″]
[su_label type=”important”]ದುರ್ಗಿಗುಡಿ[/su_label]
ಪೊಲೀಸ್ ಸಿಬ್ಬಂದಿಗು ದಂಡ
ಶಿವಮೊಗ್ಗ ಲೈವ್.ಕಾಂ : ಒನ್ ವೇ ರಸ್ತೆ ನಿಯಮ ಉಲ್ಲಂಘಿಸಿದ ಪೊಲೀಸ್ ಸಿಬ್ಬಂದಿಗೆ ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ. ಶಿವಮೊಗ್ಗದ ಪಶ್ಚಿಮ ಸಂಚಾರ ಠಾಣೆ ಪಿಎಸ್ಐ ತಿರುಮಲೇಶ್ ಮತ್ತು ಸಿಬ್ಬಂದಿ ದುರ್ಗಿಗುಡಿಯಲ್ಲಿ ಒನ್ ವೇ ನಿಯಮ ಉಲ್ಲಂಘಿಸಿದವರನ್ನು ಪತ್ತೆ ಹಚ್ಚಿ ದಂಡ ವಿಧಿಸುತ್ತಿದ್ದರು. ಈ ವೇಳೆ ಪೊಲೀಸ್ ಸಿಬ್ಬಂದಿಯೊಬ್ಬರು ಒನ್ ವೇ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಬಂದಿದ್ದಾರೆ. ಅವರಿಗೆ 500 ರೂ. ದಂಡ ವಿಧಿಸಲಾಗಿದೆ.[/su_note]
[su_note note_color=”#EBEDEF” text_color=”#000000″ radius=”1″]
[su_label type=”important”]ಬುದ್ಧಾನಗರ[/su_label]
ಬೈಕ್ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ
ಶಿವಮೊಗ್ಗ ಲೈವ್.ಕಾಂ : ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿದೆ. ಬುದ್ಧನಗರದಲ್ಲಿ ಘಟನೆ ಸಂಭವಿಸಿದೆ. ಅಣ್ಣಾನಗರ ನಿವಾಸಿ ಜಗನ್ನಾಥ ಎಂಬುವವರು ಗಾಯಗೊಂಡಿದ್ದಾರೆ. ವೇಗವಾಗಿ ಬಂದ ಬಸ್ಸು ಜಗನ್ನಾಥ ಅವರ ಬೈಕ್ಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿರುವ ಅವರನ್ನು ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.[/su_note]
ಇದನ್ನೂ ಓದಿ ⇓
ತಾಳಗುಪ್ಪ ಎಕ್ಸ್ಪ್ರೆಸ್ ರೈಲು ಇನ್ನೂ ಬೆಂಗಳೂರು ತಲುಪಿಲ್ಲ, ನಡುರಾತ್ರಿ ಲಾಸ್ಟ್ ಸ್ಟಾಪ್ ಮುಟ್ಟಿದ ಇಂಟರ್ಸಿಟಿ


