ತೀರ್ಥಹಳ್ಳಿಗೆ ನೂತನ ಡಿವೈಎಸ್ಪಿ, ಶಿವಮೊಗ್ಗದ ಹಲವು ಠಾಣೆಗಳ ಇನ್ಸ್ ಪೆಕ್ಟರ್​​ಗಳ ವರ್ಗಾವಣೆ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
ಶಿವಮೊಗ್ಗ ಲೈವ್.ಕಾಂ | SHIMOGA NEWS | 1 JUNE 2021
➤ ಸುದ್ದಿಯ ಮುಂದಿನ 10 ಪ್ಯಾರಾಗಳು ಕೆಳಗಿವೆ.

ರಾಜ್ಯ ಸರ್ಕಾರ ಡಿವೈಎಸ್‍ಪಿಗಳು ಮತ್ತು ಇನ್ಸ್‍ ಪೆಕ್ಟರ್​ಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ತೀರ್ಥಹಳ್ಳಿಗೆ ನೂತನ ಡಿವೈಎಸ್‍ಪಿ ನಿಯೋಜಿಸಲಾಗಿದೆ. ಇನ್ನು, ಕೆಲವು ಪೊಲೀಸ್ ಠಾಣೆಗಳ ಇನ್ಸ್​​ಪೆಕ್ಟರ್​​ಗಳ ವರ್ಗಾವಣೆ ಮಾಡಲಾಗಿದೆ.

ತೀರ್ಥಹಳ್ಳಿಗೆ ಉಪ ವಿಭಾಗಕ್ಕೆ ಡಿವೈಎಸ್​​ಪಿಯಾಗಿ ಶಾಂತವೀರ ಅವರನ್ನು ವರ್ಗಾವಣೆ ಮಾಡಲಾಗಿದೆ.

ಇನ್ನು, ಶಿವಮೊಗ್ಗದ ಕೆಲವು ಠಾಣೆಗಳ ಇನ್ಸ್​​ಪೆಕ್ಟರ್​​ಗಳ ವರ್ಗಾವಣೆಯಾಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಿಂದ ಮುರುಗೇಶ್ ಅವರನ್ನು ಲೋಕಾಯುಕ್ತಕ್ಕೆ ವರ್ಗಾಯಿಸಲಾಗಿದೆ.

ಕುಂಸಿ ಠಾಣೆ ಇನ್ಸ್​​ಪೆಕ್ಟರ್​​ ಸಂಜೀವ್ ಕುಮಾರ್ ಅವರನ್ನು ಶಿವಮೊಗ್ಗ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದೆ.

ಭದ್ರಾವತಿ ಗ್ರಾಮಾಂತರ ಠಾಣೆ ಇನ್ಸ್​​ಪೆಕ್ಟರ್​​ ಇ.ಒ.ಮಂಜುನಾಥ್ ಅವರನ್ನು ಪೇಪರ್ ಟೌನ್‍ಗೆ ವರ್ಗಾಯಿಸಲಾಗಿದೆ.

ಲೋಕಾಯುಕ್ತದಲ್ಲಿದ್ದ ಆರ್.ಎಲ್.ಲಕ್ಷ್ಮೀಪತಿ ಅವರನ್ನು ಹೊಳೆಹೊನ್ನೂರು ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

ಇನ್ನು, ಮಹಿಳಾ ಪೊಲೀಸ್ ಠಾಣೆ ಇನ್ಸ್​​ಪೆಕ್ಟರ್​​ ಆಗಿದ್ದ ಅಭಯ ಪ್ರಕಾಶ್ ಅವರನ್ನು ಕುಂಸಿ ಠಾಣೆ ಇನ್ಸ್​​ಪೆಕ್ಟರ್​​ ಆಗಿ ವರ್ಗಾವಣೆ ಮಾಡಲಾಗಿದೆ.

ಲಕ್ಷಣ ಕಂಡು ಬಂದ ಕೂಡಲೆ ಪರೀಕ್ಷೆ ಮಾಡಿಸಿಕೊಳ್ಳಿ. ಶಿವಮೊಗ್ಗದಲ್ಲಿ ಸುರಕ್ಷಿತವಾಗಿ ಕೋವಿಡ್ ಪರೀಕ್ಷೆಗೆ ಫೋನ್ ಮಾಡಿ, ರಿಜಿಸ್ಟರ್ ಮಾಡಿಕೊಳ್ಳಿ

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

Leave a Comment