NEWS HIGHLIGHTS
ಆರೋಗ್ಯದ ಕುರಿತು ಇರಲಿ ಕಾಳಜಿ

ಬಿಸಿಲ ಬೇಗೆಯಿಂದ ಜನ ಹೈರಾಣಾಗಿದ್ದಾರೆ. ವಿಪರೀತ ಸುಸ್ತು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಆದ್ದರಿಂದ ವೈದ್ಯರು ವಿವಿಧ ಸಲಹೆ ನೀಡಿದ್ದಾರೆ. ತೆಳುವಾದ, ಹಗುರವಾದ, ಸಡಿಲ ಬಟ್ಟೆ ಧರಿಸಬೇಕು. ಕಾಫಿ, ಮದ್ಯ ಸೇವನೆ ನಿಯಂತ್ರಿಸಬೇಕು. ಎಳನೀರು, ಹಸಿ ತರಕಾರಿ ಹಾಗೂ ಹಣ್ಣು ಸೇವಿಸುವುದು ಉತ್ತಮ. ಆಗಾಗ ನೀರು ಕುಡಿಯಬೇಕು ಸೇರಿದಂತೆ ದೇಹ ನಿರ್ಜಲವಾಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸುತ್ತಿದ್ದಾರೆ. ಮಕ್ಕಳು ಬಿಸಿಲಿನಲ್ಲಿ ಆಟವಾಡುವುದನ್ನು ತಪ್ಪಿಸುವಂತೆ ಸೂಚಿಸಿದ್ದಾರೆ.
ಇಡೀ ರಾಜ್ಯದಲ್ಲಿ ಹೇಗಿದೆ ಪರಿಸ್ಥಿತಿ? ಓದಲು ಕೆಳಗಿರುವ NEXT ಬಟನ್ ಕ್ಲಿಕ್ ಮಾಡಿ
