GOOD MORNING SHIMOGA | ಜಿಲ್ಲೆಯಲ್ಲಿ ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ಫಟಾಫಟ್‌ ಸುದ್ದಿ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

GOOD MORNING SHIMOGA, 23 OCTOBER 2024

#fed740 - SHUBODAYA-SHIVAMOGGA

ಜಗತ್ತಿನ ಎಲ್ಲಾ ಪ್ರತಿಭಾಶಾಲಿಗಳು ತಮ್ಮನ್ನು ತಾವು ಸರಿಯೆಂದು ಸಾಬೀತುಪಡಿಸುವ ಮುನ್ನ ಕಠಿಣ ಪರಿ‍ಸ್ಥಿತಿ ಎದುರಿಸಬೇಕಾಯಿತು.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

 SHIMOGA CITY NEWS 

#d4dcdc

ಪತ್ರಿಕಾ ಭವನ : ಕರ್ನಾಟಕ ಸಾಫ್ಟ್‌ ಬಾಲ್‌ ಪ್ರೀಮಿಯರ್‌ ಲೀಗ್‌ ನ.1 ರಿಂದ ಡಿ.1ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಶಿವಮೊಗ್ಗ ಟೈಗರ್ಸ್‌ ತಂಡಕ್ಕೆ ಜಿಲ್ಲೆಯ ಪ್ರತಿಭಾವಂತರಿಗೆ ಅವಕಾಶ ನೀಡಲಾಗಿದೆ ಎಂದು ತಂಡ ಮಾಲೀಕ ಚೇತನ್‌ ದಾಸರಹಳ್ಳಿ ತಿಳಿಸಿದ್ದಾರೆ.

ಇದನ್ನೂ ಓದಿ » ಅಕ್ಕಪಕ್ಕದ ಜಿಲ್ಲೆಗೆ ಯಲ್ಲೋ ಅಲರ್ಟ್‌, ಶಿವಮೊಗ್ಗದಲ್ಲಿ ಹೇಗಿರುತ್ತೆ ವಾತಾವರಣ?

RED-LINE

#d4dcdcಜಿಲ್ಲಾಧಿಕಾರಿ ಕಚೇರಿ : ಗೌರಿ ಲಂಕೇಶ್‌ ಹತ್ಯೆಗೈದವರಿಗೆ ಸನ್ಮಾನ ಮಾಡಿರುವುದು, ಚುನಾವಣೆ ಉಸ್ತುವಾರಿ ವಹಿಸಿರುವುದಕ್ಕೆ ಖಂಡನೆ. ಗೌರಿ ಬಳಗದ ವತಿಯಿಂದ ಪ್ರತಿಭಟನೆ. ಆರೋಪಿಗಳ ಜಾಮೀನು ರದ್ಧತಿಗೆ ಆಗ್ರಹ.

ಇದನ್ನೂ ಓದಿ » ದಿನ ಭವಿಷ್ಯ | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ ಭವಿಷ್ಯ?

RED-LINE

#d4dcdcಜಿಲ್ಲಾಧಿಕಾರಿ ಕಚೇರಿ : ಜೆಡಿಎಸ್‌ – ಬಿಜೆಪಿ ಪಕ್ಷಗಳು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುತ್ತಿವೆ. ಈ ಪಕ್ಷಗಳು ಹೀನ ರಾಜಕಾರಣ ಕೈ ಬಿಡಬೇಕು. ಡಿಎಸ್‌ಎಸ್‌ (ಸಂಯೋಜಕ) ಸಂಘಟನೆಯಿಂದ ಪ್ರತಿಭಟನೆ.

RED-LINE

#d4dcdcಜಿಲ್ಲಾ ಪೊಲೀಸ್‌ ಕಚೇರಿ : ಜಿಲ್ಲೆಯ ವಿವಿಧೆಡೆ ಪೊಲೀಸ್‌ ಇಲಾಖೆಯಿಂದ ವಿಶೇಷ ಗಸ್ತು, ಏರಿಯಾ ಡಾಮಿನೇಷನ್.‌ ಹಲವರನ್ನು ವಶಕ್ಕೆ ಪಡೆದು 107 ಲಘು ಪ್ರಕರಣ ದಾಖಲು.

RED-LINE

#d4dcdcರಂಗಾಯಣ : ಹೊಸ ತಲೆಮಾರಿಗೆ ನಾಟಕಗಳನ್ನು ಪರಿಚಯಿಸುವುದು, ವಿವಿಧ ಆಯಾಮಗಳನ್ನು ಹೇಗೆ ಗ್ರಹಿಸಬೇಕು ಎಂದು ತಿಳಿಸಲು ಅ.24 ರಿಂದ 26ರವರೆಗೆ ಶಿವಮೊಗ್ಗ ರಂಗಾಯಣದ ವತಿಯಿಂದ ಕನ್ನಡ ಸಂಸ್ಕೃತಿ ಭವನದಲ್ಲಿ ಕಾರ್ಯಾಗಾರ. ಸುದ್ದಿಗೊಷ್ಠಿಯಲ್ಲಿ ಮಾಹಿತಿ ನೀಡಿದ ರಂಗಾಯಣ ನಿರ್ದೇಶ ಪ್ರಸನ್ನ ಡಿ.ಸಾಗರ

 TALUK NEWS 

#d4dcdcಸಾಗರ : ಭೂ ಹಕ್ಕಿಗಾಗಿ ರೈತರು ನಡೆಸುತ್ತಿರುವ ಹೋರಾಟ ಮೂರನೆ ದಿನಕ್ಕೆ. ಮಂಗಳವಾರ ಧರಣಿ ಸ್ಥಳಕ್ಕೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ. ಭೂ ಹಕ್ಕು ಕೊಡಿಸಲು ಪ್ರಮಾಣಿಕ ಪ್ರಯತ್ನ‌ ಮಾಡುವುದಾಗಿ ಭರವಸೆ.

RED-LINE

#d4dcdcಶಿಕಾರಿಪುರ : 2025ರ ಜ.21 ಮತ್ತು 22ರಂದು ಶ್ರೀ ಮಾರಿಕಾಂಬಾ ದೇವಿ ಜಾತ್ರೋತ್ಸವ ನಡೆಸಲು ನಿರ್ಧರಿಸಲಾಗಿದೆ. ಸಮಿತಿ ಅ‍ಧ್ಯಕ್ಷ ಗೋಣಿ ಪ್ರಕಾಶ್‌ ನೇತೃತ್ವದಲ್ಲಿ ಜಾತ್ರೆಯ ಪೂರ್ವಭಾವಿ ಸಭೆ ನಡೆಯಿತು.

RED-LINE

#d4dcdcಭದ್ರಾವತಿ : ಕಾಡುಕೋಣ ಹತ್ಯೆ ಮಾಡಿ ಜಮೀನಿನಲ್ಲಿ ಹೂತಿಟ್ಟಿದ್ದ ಪ್ರಕರಣ ಸಂಬಂಧ ಶ್ರೀನಿವಾಸಪುರದ ಶಿವರಾಮ, ಉಕ್ಕುಂದದ ರಂಗ ಸ್ವಾಮಿಯನ್ನು ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಮೊಬೈಲ್‌ ಟವರ್‌ ಕಳ್ಳತನ, ಖಾಲಿ ಜಾಗದಲ್ಲಿದ್ದದ್ದು ದಿಢೀರ್‌ ನಾಪತ್ತೆ

RED-LINE

#d4dcdcತೀರ್ಥಹಳ್ಳಿ : ತುಂಗಾ ನದಿಯ ಪಾವಿತ್ರ್ಯತೆ ಕಾಪಾಡುವ ನಿರ್ಮಲ ತುಂಗಭದ್ರಾ ಅಭಿಯಾನದ ಪೂರ್ವಭಾವಿ ಸಭೆ. ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಭಾಗಿ. ನ.7ರಂದು ತೀರ್ಥಹಳ್ಳಿಗೆ ಅಭಿಯಾನ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment