ವಿಧಾನಸೌಧದಲ್ಲಿ ರುದ್ರೇಗೌಡ, ಆಯನೂರು ಮಂಜುನಾಥ್‌ಗೆ ಸನ್ಮಾನ

SHIVAMOGGA LIVE NEWS, 28 NOVEMBER 2024

ಬೆಂಗಳೂರು : ವಿಧಾನ ಪರಿಷತ್‌ನಿಂದ ನಿವೃತ್ತರಾದ ಶಾಸಕರಿಗೆ ವಿಧಾನಸೌಧದಲ್ಲಿ ಗೌರವ ಸನ್ಮಾನ (Felicitation) ಆಯೋಜಿಸಲಾಗಿತ್ತು. ಸಭಾಪತಿ ಬಸವರಾಜ ಹೊರಟ್ಟಿ ಅವರ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯರಾದ ಎಸ್‌.ರುದ್ರೇಗೌಡ, ಆಯನೂರು ಮಂಜುನಾಥ್‌ ಅವರನ್ನು ಗೌರವಿಸಲಾಯಿತು.

ಇದೇ ವೇಳೆ ಮಾತನಾಡಿದ ಎಸ್‌.ರುದ್ರೇಗೌಡ, ವಿಧಾನ ಪರಿಷತ್‌ ಸದಸ್ಯನಾಗಿ 6 ವರ್ಷದ ಅವಧಿಯಲ್ಲಿ ಪರಿಷತ್ತಿನಲ್ಲಿ ನಡೆದ ಚರ್ಚೆ ತೃಪ್ತಿ ತಂದಿಲ್ಲ. ಸದನದಲ್ಲಿ ಕೇವಲ ಮಾತು ನಡೆಯುತ್ತದೆ. ಸಮರ್ಪಕವಾದ ಉತ್ತರ ಸಿಗುವುದಿಲ್ಲ. ಈ ಅವಸ್ಥೆ ಬದಲಾಗಬೇಕು. ಆಗ ಜನಸಾಮಾನ್ಯರಿಗೆ ಯೋಜನೆಗಳು ತಲುಪುವುದು ಸುಲಭವಾಗಲಿದೆ ಎಂದರು.

felicitation-for-s-rudregowda-and-ayanuru-manjunath

ಇದನ್ನೂ ಓದಿ » ಶಿವಮೊಗ್ಗ ಸರ್ಕಾರಿ ನೌಕರರ ಸಂಘಕ್ಕೆ ನೂತನ ಅಧ್ಯಕ್ಷ, ಖಜಾಂಚಿ

Kalleshwara-Enterprises.webp
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment