SHIVAMOGGA LIVE NEWS | 8 FEBRUARY 2024
SHIMOGA : ನಗರದ ವಿವಿಧೆಡೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ಕುಮಾರ್ ಭೂಮರಡ್ಡಿ, ಡಿವೈಎಸ್ಪಿ ಬಾಬು ಅಂಜನಪ್ಪ, ಎಂ.ಸುರೇಶ್ ಹಾಗೂ ಸಿಬ್ಬಂದಿ ಕಾಲ್ನಡಿಗೆ ಗಸ್ತು ಮಾಡಿದರು.
ಎಲ್ಲೆಲ್ಲಿ ಗಸ್ತು ಮಾಡಿದರು?
ಅಮೀರ್ ಅಹಮದ್ ಸರ್ಕಲ್, ಓ.ಟಿ.ರಸ್ತೆ, ವಿಜಯ ಗ್ಯಾರೇಜ್, ಟೆಂಪೋ ಸ್ಟ್ಯಾಂಡ್ ಮುಂತಾದ ಭಾಗಗಳಲ್ಲಿ ಕಾಲ್ನಡಿಗೆ ಗಸ್ತು ನಡೆಸಿದರು. ಸಾರ್ವಜನಿಕರಿಗೆ ಕಿರುಕುಳ ನೀಡುವುದು, ಹೆಣ್ಣು ಮಕ್ಕಳನ್ನು ಚುಡಾಯಿಸುವುದು, ದ್ವಿಚಕ್ರ ವಾಹನಗಳಲ್ಲಿ ಮೂವರು ಸಂಚರಿಸುವುದು, ಅವ್ಯವಸ್ಥಿತವಾಗಿ ರಸ್ತೆ ಪಕ್ಕದಲ್ಲಿ ವಾಹನ ನಿಲುಗಡೆ ಮಾಡಿದರೆ ತುರ್ತು ಸಹಾಯವಾಣಿ 112 ಗೆ ಕರೆ ಮಾಡುವಂತೆ ಈ ಸಂದರ್ಭ ಸಾರ್ವಜನಿಕರಿಗೆ ತಿಳಿಸಿದರು.
ಅಂಗಡಿಗಳಲ್ಲಿ ಸಿಸಿ ಟಿವಿ ಅಳವಡಿಕೆ, ಆಟೋ ಸ್ಟ್ಯಾಂಡ್ಗಳಲ್ಲಿ ಆಟೋಗಳ ದಾಖಲಾತಿಗಳನ್ನು ಪರಿಶೀಲನೆ ಮಾಡಲಾಯಿತು. ಸಂಚಾರ ನಿಯಮ ಉಲ್ಲಂಘನೆ ಮಾಡಿ ದಂಡ ಪಾವತಿಸಬೇಕಿದ್ದ ಆಟೋವೊಂದು ಈ ಸಂದರ್ಭದಲ್ಲಿ ಪತ್ತೆಯಾಯಿತು. ಶೀಘ್ರದಲ್ಲೇ ದಂಡ ಪಾವತಿಸುವಂತೆ ಆಟೋ ಚಾಲಕನಿಗೆ ಸೂಚನೆ ನೀಡಲಾಯಿತು.
ಜಿಲ್ಲೆಯಾದ್ಯಂತ ಪೊಲೀಸರ ಗಸ್ತು
ಇನ್ನೊಂದೆಡೆ ಜಿಲ್ಲೆಯಾದ್ಯಂತ ಪೊಲೀಸರು ರಾತ್ರಿ ಕಾಲ್ನಡಿಗೆ ಗಸ್ತು ಮಾಡಿದರು. 19 ಪ್ರಕರಣಗಳನ್ನು ದಾಖಲು ಮಾಡಿದ್ದಾರೆ. ಶಿವಮೊಗ್ಗದ ಎಂಕೆಕೆ ರಸ್ತೆ, ಬರ್ಮಪ್ಪ ನಗರ, ಮೆಹಬೂಬ್ ಗಲ್ಲಿ, ಟಿಪ್ಪು ನಗರ, ಎಎ ಕಾಲೋನಿ, ಬೊಮ್ಮನಕಟ್ಟೆ, ಪುರ್ಲೆ, ಆಯನೂರು, ಭದ್ರಾವತಿಯ ಕೂಲಿ ಬ್ಲಾಕ್ ಶೆಡ್, ಸೀಗೆ ಬಾಗಿ, ಹನುಮಂತ ನಗರ, ಬಾರಂದೂರು, ದೊನಭಘಟ್ಟ, ಜಂಭರಘಟ್ಟ, ಶಿಕಾರಿಪುರದ ದೊಡ್ಡಪೇಟೆ, ಶಿರಾಳಕೊಪ್ಪದ ಕುರುಬರ ಕೇರಿ, ಆನವಟ್ಟಿಯ ವೈಎಂಜಿ ವೃತ್ತ, ಆಜಾದ್ ನಗರ, ಪ್ರಗತಿ ವೃತ್ತ, ಸಾಗರದ ಅರಳೆಕೊಪ್ಪ, ಸೊರಬ ರಸ್ತೆ, ಆನಂದಪುರದ ಮಾರಿಕಾಂಬ ದೇವಸ್ಥಾನ ರಸ್ತೆ ಮತ್ತು ತೀರ್ಥಹಳ್ಳಿಯ ಸೀಬಿನ ಕೆರೆ, ಬೈಸೆ, ಬಿದರಗೋಡು, ಬೆಜ್ಜವಳ್ಳಿಯಲ್ಲಿ ಗಸ್ತು ನಡೆಸಲಾಯಿತು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಸೌದಿ ಅರೇಬಿಯಾ ಕರೆನ್ಸಿ ಸಹಿತ ಆರೋಪಿ ಅರೆಸ್ಟ್, ಚಿನ್ನಾಭರಣ ಕದ್ದು ಗಿರವಿ ಇಟ್ಟಿದ್ದ ಕಳ್ಳ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200