ಹಿರಿಯರ ಪೂಜೆ ಮುಗಿಸಿ ಸಂಬಂಧಿಕರು, ಸ್ನೇಹಿತರನ್ನು ಕಳುಹಿಸಿದ ಮೇಲೆ ಮನೆಯವರಿಗೆ ಕಾದಿತ್ತು ಬಿಗ್‌ ಶಾಕ್

ಶಿವಮೊಗ್ಗ: ಹಿರಿಯರ ಪೂಜೆ ಸಂದರ್ಭ ಮನೆಯಲ್ಲಿ ಕಳಶಕ್ಕೆ ಹಾಕಿದ್ದ ಬಂಗಾರದ ಸರ (Gold Chain) ನಾಪತ್ತೆಯಾಗಿದೆ. ಶಿವಮೊಗ್ಗದ ವಿದ್ಯಾನಗರದ ಶಶಿಕುಮಾರ್‌ ಎಂಬುವವರ ಮನೆಯಲ್ಲಿ ಘಟನೆಯಾಗಿದೆ.

ಶಶಿಕುಮಾರ್‌ ಅವರ ಮನೆಯಲ್ಲಿ ಹಿರಿಯರ ಪೂಜೆ ವೇಳೆ ಅವರ ತಾಯಿಯ ಬಂಗಾರದ ಸರವನ್ನು ಕಳಶಕ್ಕೆ ಸುತ್ತಿದ್ದರು. ರಾತ್ರಿ 7.30ರ ಬಳಿಕ ಸಂಬಂಧಿಕರು, ಸ್ನೇಹಿತರು ಸೇರಿ ಹಲವರು ಊಟಕ್ಕೆ ಬಂದಿದ್ದರು. ರಾತ್ರಿ 9.30ರ ಹೊತ್ತಿಗೆ ಕಳಶಕ್ಕೆ ಸುತ್ತಿದ್ದ ಚಿನ್ನದ ಸರ ನಾಪತ್ತೆಯಾಗಿತ್ತು ಎಂದು ಆರೋಪಿಸಲಾಗಿದೆ.

ಊಟಕ್ಕೆ ಬಂದವರಿಗೆ ವಿಚಾರಿಸಿದ ಶಶಿಕುಮಾರ್‌ ಅವರು ಬಳಿಕ ದೂರು ನೀಡಿದ್ದಾರೆ. 50 ಗ್ರಾಂ ತೂಕದ ಸುಮಾರು ₹4 ಲಕ್ಷ ಮೌಲ್ಯದ ಚಿನ್ನದ ಸರ ಕಳುವಾಗಿದೆ ಎಂದು ಆರೋಪಿಸಿದ್ದಾರೆ. ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

JNNCE-Admission-Advt-scaled

ಇದನ್ನೂ ಓದಿ » ಶಿವಮೊಗ್ಗ ಮಹಿಳಾ ಕಾಂಗ್ರೆಸ್‌ಗೆ ನೂತನ ಅ‍ಧ್ಯಕ್ಷೆ, ಪದಗ್ರಹಣದ ದಿನಾಂಕ ಪ್ರಕಟ

Gold Chain Missing

Vidyanagara-Smart-city-board

Leave a Comment