ಶಿವಮೊಗ್ಗ LIVE
ಶಿವಮೊಗ್ಗ: ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಕ್ಕೆ (ಹಾಪ್ಕಾಮ್ಸ್) ನಿರ್ದೇಶಕರಾಗಿ 15 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂತೇಕಡೂರು ವಿಜಯಕುಮಾರ್ ಸತತ ಮೂರನೇ ಬಾರಿಗೆ ಆಯ್ಕೆಯಾದರೆ, ಡಾ.ಶರತ್ ಮರಿಯಪ್ಪ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಕಂಡರು. (Hopcoms)
ಯಾರೆಲ್ಲ ಆಯ್ಕೆ ಆಗಿದ್ದಾರೆ?
ಈ ಪೈಕಿ ಶಿವಮೊಗ್ಗ ತಾಲೂಕಿನಿಂದ ಆರು ಮಂದಿ ಆಯ್ಕೆಯಾಗಿದ್ದಾರೆ. ಸಂತೇಕಡೂರಿನ ಆರ್.ವಿಜಯಕುಮಾರ್ (ದನಿ), ಶಿವಮೊಗ್ಗ ತಾಲೂಕು ಕೈದೊಟ್ಟು ಕೆ.ಎಸ್.ಚಂದ್ರೇಗೌಡ, ಬಿ.ಬೀರನಹಳ್ಳಿಯ ಎಂ.ಪಿ.ದಿನೇಶ್ ಪಟೇಲ್, ಕುಂಚೇನಹಳ್ಳಿಯ ಕೆ.ಜಿ.ನಾಗೇಶ್ ನಾಯ್ಕ, ಶೆಟ್ಟಿಹಳ್ಳಿಯ ಪರಶುರಾಮಪ್ಪ, ಶಿವಮೊಗ್ಗ ವೆಂಕಟೇಶ ನಗರದ ಡಾ. ಎಸ್.ಎಂ.ಶರತ್ ಮರಿಯಪ್ಪ, ಕಾಶಿಪುರದ ಮೋಹನ್ ಉಂಬೇಬೈಲು.

ಭದ್ರಾವತಿ ತಾಲೂಕು ಹನುಮಂತಾಪುರದ ಹೆಚ್.ಎಸ್.ನಾಗರಾಜ, ಮತ್ತಿಘಟ್ಟದ ಆರ್.ಶ್ವೇತಾ, ಶಿಕಾರಿಪುರ ತಾಲೂಕು ದೊಡ್ಡಜೋಗಿಹಳ್ಳಿಯ ಬಿ.ಡಿ.ಭೂಕಾಂತ್, ಚುರ್ಚುಗುಂಡಿಯ ಬಿ.ಎಂ.ರತ್ನಮ್ಮ, ಸೊರಬ ತಾಲೂಕು ಕಾಸರಗುಪ್ಪೆಯ ಕೆ.ವಿ.ಗೌಡ, ಹೊಸನಗರ ತಾಲೂಕು ನಿವಣೆಯ ಹೆಚ್.ಎಸ್.ನರಸಿಂಹಗೌಡ, ಸಾಗರ ತಾಲೂಕು ಆನಂದಪುರಂನ ನಾರಾಯಣ, ತೀರ್ಥಹಳಿ ತಾಲೂಕು ಕುಣಜೆಯ ಕಿರಣ್ ಪ್ರಭಾಕರ.
ಹಾಪ್ಕಾಮ್ಸ್ನ 15 ಕ್ಷೇತ್ರಕ್ಕೆ 20 ಜನರು ನಾಮಪತ್ರ ಸಲ್ಲಿಸಿದ್ದರು. ಐವರು ನಾಮಪತ್ರ ವಾಪಸ್ ತೆಗೆದುಕೊಂಡಿದ್ದರಿಂದ ಉಳಿದವರು ಅವಿರೋಧವಾಗಿ ಆಯ್ಕೆಯಾದರು.
ಇದನ್ನೂ ಓದಿ » ದೀಪಾವಳಿ: ಶಿವಮೊಗ್ಗ, ತಾಳಗುಪ್ಪದಿಂದ ಮೆಜಸ್ಟಿಕ್, ಯಶವಂತಪುರ, ಕಂಟೋನ್ಮೆಂಟ್ಗೆ ವಿಶೇಷ ರೈಲುಗಳು
Hopcoms
LATEST NEWS
- ಮಹಿಳೆಯರಿಗೆ ಗುಡ್ ನ್ಯೂಸ್, ಶಿವಮೊಗ್ಗದಲ್ಲಿ ಜನವರಿ 17ರಿಂದ ಮೇಳ, ಏನೇನೆಲ್ಲ ಇರಲಿದೆ?

- ಭದ್ರಾ ನಾಲೆಗೆ ಹಾರಿ ಗೃಹಿಣಿ ಆತ್ಮಹತ್ಯೆ ಕೇಸ್, ಪಾಂಡಿಚೇರಿಯಲ್ಲಿ ಪತಿ ಅರೆಸ್ಟ್

- ಶಿವಮೊಗ್ಗದಲ್ಲಿ ಡಾಗ್ ಶೋ, ರಿಜಿಸ್ಟರ್ ಮಾಡಿಕೊಳ್ಳಲು ಸೂಚನೆ, ಯಾವಾಗ? ಎಲ್ಲಿ ನಡೆಯುತ್ತೆ?

- ಫೋನ್ ಕರೆ, ಶಿವಮೊಗ್ಗದಿಂದ ವ್ಯಕ್ತಿ ದೌಡು, ಆನವಟ್ಟಿ ಮನೆ ಬಳಿ ಕಾದಿತ್ತು ಶಾಕ್

- ಕೋಣಂದೂರು ಸುತ್ತಮುತ್ತ ಇವತ್ತು ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಊರುಗಳ ಪಟ್ಟಿ

About The Editor
ನಿತಿನ್ ಆರ್.ಕೈದೊಟ್ಲು






