ಶಿವಮೊಗ್ಗ ಜಿಲ್ಲೆ, ಮಳೆ ಕಡಿಮೆಯಾದರೂ ನಿಲ್ಲದ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಸುದ್ದಿ

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

ಶಿವಮೊಗ್ಗ: ಜಿಲ್ಲೆಯಾದ್ಯಂತ ಮಳೆ ಪ್ರಮಾಣ ತುಸು ಇಳಿಕೆಯಾಗಿದೆ. ಅಲ್ಲಲ್ಲಿ ಮಂಗಳವಾರ ಬಿಸಿಲು ಕಾಣಿಸಿಕೊಂಡು, ಜನರು ಕೊಂಚ ನಿಟ್ಟುಸಿರು ಬಿಡುವಂತಾಯಿತು. ಇನ್ನು, ಮಳೆ ಪ್ರಮಾಣ ಇಳಿಕೆಯಾದರು ಹಾನಿ ಮುಂದುವರೆದಿದೆ. (Rainfall Effect)

ಹವಾಮಾನ ಇಲಾಖೆ ಶಿವಮೊಗ್ಗ ಜಿಲ್ಲೆಗೆ ಯಲ್ಲೋ ಅಲರ್ಟ್‌ ಘೋಷಿಸಿದೆ. ಆದರೆ ಇವತ್ತೂ ಮಳೆ ಪ್ರಮಾಣ ಕಡಿಮೆ ಇರುವ ಸಾಧ್ಯತೆ ಇದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಏನೇನಾಗಿದೆ?

ತೂದೂರು ಬಳಿ ತುಂಬಿ ಹರಿದ ಕುಂಟೇಹಳ್ಳ

Speed News 1ತೀರ್ಥಹಳ್ಳಿ: ತೂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡ್ಲುವಿನಲ್ಲಿ ಕುಂಟೇಹಳ್ಳ ತುಂಬಿ ಹರಿಯುತ್ತಿದೆ. ಮಂಜುನಾಥ ಶೆಟ್ಟಿ ಎಂಬುವವರ ತೋಟದ ಸುಮಾರು 30 ಅಡಿಕೆ ಮರಗಳು ಕೊಚ್ಚಿ ಹೋಗಿವೆ. ಇದರಿಂದ ಹಳ್ಳದ ಬದಿಯಲ್ಲಿರುವ ಇತರೆ ರೈತರು ಆತಂಕಕ್ಕೀಡಾಗಿದ್ದಾರೆ.

ವಿದ್ಯುತ್‌ ಕಂಬಗಳಿಗೆ ಹಾನಿ

Speed News 2ತೀರ್ಥಹಳ್ಳಿ: ತಾಲೂಕಿನ ವಿವಿಧೆಡೆ ಮರ ಬಿದ್ದು 9 ವಿದ್ಯುತ್‌ ಕಂಬಗಳು ನೆಲಕಚ್ಚಿವೆ. ಕಟ್ಟೆಹಕ್ಕಲು ಗ್ರಾಮದಲ್ಲಿ ಮರ ಉರುಳಿ 5 ವಿದ್ಯುತ್‌ ಕಂಬಗಳು ಮುರಿದಿವೆ. ಮೇಗರವಳ್ಳಿ, ದೇವಂಗಿ, ಆರಗ ಗ್ರಾಮದಲ್ಲು ಮರ ಬಿದ್ದು ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ.

ಆಗುಂಬೆಯಲ್ಲಿ ರಸ್ತೆಗೆ ಬಿದ್ದ ಮರ

Speed News 3ತೀರ್ಥಹಳ್ಳಿ: ಆಗುಂಬೆ ಚೆಕ್‌ಪೋಸ್ಟ್‌ ಸಮೀಪ ಬೃಹತ್‌ ಮರ ಧರೆಗುರುಳಿದ್ದು, ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು. ಇದರಿಂದ ಆಗುಂಬೆ ಘಾಟಿಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತವಾಗಿತ್ತು. ಸ್ಥಳೀಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವು ಮಾಡಿದ್ದಾರೆ. ಘಟನೆಯಿಂದಾಗಿ ರಸ್ತೆಯ ಎರಡು ಬದಿಯಲ್ಲಿ ಕಿಲೋ ಮೀಟರ್‌ ಉದ್ದಕ್ಕೆ ವಾಹನಗಳು ನಿಂತಿದ್ದವು.

tree-falls-to-agumbe-road-in-Thirthahalli.

ಹಾರೋಗೊಪ್ಪ ಬಳಿ ಮನೆ ಭಾಗಶಃ ಕುಸಿತ

Speed News 4ಶಿಕಾರಿಪುರ: ಇಲ್ಲಿನ ಹಾರೋಗೊಪ್ಪ ಸಮೀಪದ ಎಂಸಿಆರ್‌ಬಿ ಕಾಲೋನಿಯಲ್ಲಿ ಮನೆಯೊಂದು ಭಾಗಶಃ ಕುಸಿದಿದೆ. ವಿಷಯದ ತಿಳಿದು ಹಲವರು ಭೇಟಿ ನೀಡಿದ್ದರು. ಇನ್ನು, ಶಿಕಾರಿಪುರ – ಆನಂದಪುರ ರಸ್ತೆಗೆ ಮರ ಬಿದ್ದಿದ್ದರಿಂದ ಕೆಲಕಾಲ ವಾಹನ ಸಂಚಾರ ಬಂದ್‌ ಆಗಿತ್ತು.

ತ್ಯಾಗರ್ತಿ ಸಮೀಪ ಗೋಡೆ, ಮೇಲ್ಛಾವಣಿ ಕುಸಿತ

Speed News 5ಸಾಗರ: ತ್ಯಾಗರ್ತಿ ಸಮೀಪದ ಮಳ್ಳಾ ಗ್ರಾಮದಲ್ಲಿ ಲಲಿತಮ್ಮ ನಾಗಪ್ಪ ಎಂಬುವವರ ಮನೆ ಗೋಡೆ ಕುಸಿದಿದೆ. ರಾಮಪ್ಪ ದಿವಾನಪ್ಪ ಎಂಬುವವರ ಕೊಟ್ಟಿಗೆಯ ಮೇಲ್ಛಾವಣಿ ಕುಸಿದಿದೆ. ಸ್ಥಳಕ್ಕೆ ಕಾಂಗ್ರೆಸ್‌ ಮುಖಂಡರು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.

https://chat.whatsapp.com/JPJ0lTQsTKf365Fqu6Q7cd

ಭೂಮಿ ಬಿರುಕು, ಸ್ಥಳಕ್ಕೆ ಆರಗ ಭೇಟಿ

Speed News 6ಹೊಸನಗರ: ಇಲ್ಲಿನ ಅರಮನೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದಗಲ್‌ನಲ್ಲಿ ಭೂಮಿ ಬಿರುಕು ಬಿಟ್ಟಿದೆ. ಶಾಸಕ ಆರಗ ಜ್ಞಾನೇಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ‘ಕಳೆದ ವರ್ಷವು ಈ ಜಾಗದಲ್ಲಿ ಬಿರುಕು ಕಾಣಿಸಿತ್ತು. ಈ ಬಾರಿ ಮಳೆಗಾಲದ ಆರಂಭದಲ್ಲೇ ಬಿರುಕು ಬಂದಿದ್ದು ಆತಂಕಕಾರಿ. ಕೂಡಲೆ ತಜ್ಞರನ್ನು ಕಳುಹಿಸಿ ಸೂಕ್ತ ಅಧ್ಯಯನ ನಡೆಸಬೇಕುʼ ಎಂದರು.

Araga-Jnanendra-visit-to-hosangara

ಗೌತಮಪುರದಲ್ಲಿ ಉರುಳಿದ ಮರ

Speed News 7ಸಾಗರ: ಭಾರಿ ಗಾಳಿ, ಮಳೆಗೆ ಗೌತಮಪುರ ಗ್ರಾಮದ ತ್ಯಾಗರ್ತಿ ಕ್ರಾಸ್‌ನಲ್ಲಿ ಮರ ಧರೆಗುರುಳಿದೆ. ಇದರಿಂದ ಎರಡು ವಿದ್ಯುತ್‌ ಕಂಬಗಳಿಗು ಹಾನಿಯಾಗಿದೆ. ಆನಂದಪುರ – ಶಿವಮೊಗ್ಗ ಮಾರ್ಗದಲ್ಲಿ ಹೆದ್ದಾರಿಯಲ್ಲಿ ಆಚಾಪುರದಲ್ಲಿ ಮಾವಿನ ಮರದ ರೆಂಬೆ ವಿದ್ಯುತ್‌ ಲೈನ್‌ ಮೇಲೆ ಬಿದ್ದು ಈ ಭಾಗದಲ್ಲಿ ವಿದ್ಯುತ್‌ ವ್ಯತ್ಯಯವಾಗಿತ್ತು. ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿಯು ವಿದ್ಯುತ್‌ ವ್ಯತ್ಯಯವಾಗಿದೆ.

ಜಲಾಶಯಗಳ ನೀರಿನ ಮಟ್ಟ ಹೆಚ್ಚಳ

Speed News 8ಶಿವಮೊಗ್ಗ: ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾದ್ದರಿಂದ ಜಲಾಶಯಗಳ ಒಳ ಹರಿವು ಇಳಿಕೆಯಾಗಿದೆ. ಲಿಂಗನಮಕ್ಕಿ ಜಲಾಶಯದ ಒಳ ಹರಿವು ಇವತ್ತು 26,150 ಕ್ಯೂಸೆಕ್‌ಗೆ ತಗ್ಗಿದೆ. ಭದ್ರಾ ಮತ್ತು ತುಂಗಾ ಜಲಾಶಯಗಳ ಒಳ ಹರಿವು ಪ್ರಮಾಣವು ಇಳಿಕೆಯಾಗಿದೆ.

ಇದನ್ನೂ ಓದಿ » ಆಗುಂಬೆ ಘಾಟಿ ಸಮೀಪ ಧರೆಗುರುಳಿದ ಮರ, ಕೆಲಕಾಲ ಹೆದ್ದಾರಿ ಬಂದ್

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ
ಹೆಚ್ಚಿನ Shimoga News, Shivamogga News ಮತ್ತು NEWS ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.

© ಶಿವಮೊಗ್ಗ ಲೈವ್‌ : ಜೂನ್ 18, 2025

Leave a Comment