ಶಿವಮೊಗ್ಗ ಲೈವ್.ಕಾಂ | SHIMOGA NEWS | 31 ಮೇ 2020
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ಕರೋನ ಸೋಂಕಿನಿಂದ ಗುಣಮುಖರಾದ 17 ಮಂದಿಯನ್ನು ಇವತ್ತು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಕೊನೆ ಹಂತದ ತಪಾಸಣೆ ಬಳಿಕ ಕರೋನ ನೆಗೆಟಿವ್ ಬಂದ ಹಿನ್ನೆಲೆ ಇವರನ್ನೆಲ್ಲ ಡಿಸ್ಚಾರ್ಜ್ ಮಾಡಲಾಯಿತು.
ಯಾರನ್ನೆಲ್ಲ ಬಿಡುಗಡೆ ಮಾಡಲಾಗಿದೆ?
ತೀರ್ಥಹಳ್ಳಿ – ಪೇಷೆಂಟ್ ನಂಬರ್ 1126, ಪಿ1127, ಪಿ1297, ಪಿ1298, ಪಿ1299, ಪಿ1301
ಶಿವಮೊಗ್ಗ – ಪಿ1305 (ಕುಂಸಿ), ಪಿ1300 (ಕೂಡ್ಲಿ), ಪಿ1503, ಪಿ1302 (ಸೂಳೆಬೈಲು)
ಹೊಸನಗರ – ಪೇಷೆಂಟ್ ನಂಬರ್ 1089, ಪಿ1090, ಪಿ1308
ಸೊರಬ – ಪಿ1498, ಪಿ1734
ಶಿಕಾರಿಪುರ – ಪಿ1304
ಸಾಗರ – ಪಿ1088
ಯಾವ್ಯಾವ ತಾಲೂಕಿನ ಎಷ್ಟು ಮಂದಿ ಬಿಡುಗಡೆ?
ತೀರ್ಥಹಳ್ಳಿ ತಾಲೂಕಿನ ಆರು, ಶಿವಮೊಗ್ಗ ತಾಲೂಕಿನ ನಾಲ್ಕು, ಹೊಸನಗರದ ಮೂವರು, ಸೊರಬದ ಇಬ್ಬರು, ಶಿಕಾರಿಪುರದ ಒಬ್ಬರು, ಸಾಗರದ ಒಬ್ಬರನ್ನು ಬಿಡುಗಡೆ ಮಾಡಲಾಗಿದೆ ಎಂದು ಶಿವಮೊಗ್ಗ ಮೆಡಿಕಲ್ ಕಾಲೇಜು ನಿರ್ದೇಶಕ ಡಾ.ಗುರುಪಾದಪ್ಪ ತಿಳಿಸಿದ್ದಾರೆ.

ತಾಲೂಕುವಾರು ತಂಡಗಳ ಬೀಳ್ಕೊಡುಗೆ
ಮೊದಲಿಗೆ ತೀರ್ಥಹಳ್ಳಿ ತಾಲೂಕಿನ ಆರು ಮಂದಿಯನ್ನು ಡಿಸ್ಚಾರ್ಜ್ ಮಾಡಿ, ಬಿಡುಗಡೆ ಮಾಡಲಾಯಿತು. ಆಸ್ಪತ್ರೆ ಸಿಬ್ಬಂದಿಗಳು ಇವರಿಗೆ ಬೀಳ್ಕೊಡುಗೆ ನೀಡಿದರು. ಕೆಲವು ಹೊತ್ತಿನ ಬಳಿಕ ಮತ್ತೊಂದು ತಾಲೂಕಿನ ಕೆಲವರನ್ನು ಬೀಳ್ಕೊಡಲಾಗುತ್ತದೆ. ಇವತ್ತು ಸಂಜೆ ವೇಳೆ ಹಂತ ಹಂತವಾಗಿ ಎಲ್ಲರನ್ನು ಬಿಡುಗಡೆ ಮಾಡಲಾಗುತ್ತದೆ.
ಎರಡು ರಿಪೋರ್ಟ್ ನೆಗೆಟಿವ್
ಸೋಂಕಿತರಿಗೆ ಚಿಕಿತ್ಸೆ ನೀಡಿ, ಎರಡು ಬಾರಿ ಕೋವಿಡ್ ಟೆಸ್ಟ್ಗೆ ಒಳಪಡಿಸಲಾಗಿದೆ. ಎರಡು ಬಾರಿಯೂ ವರದಿ ನೆಗೆಟಿವ್ ಬಂದ ಹಿನ್ನೆಲೆ 17 ಮಂದಿಯನ್ನು ಬಿಡುಗಡೆ ಮಾಡಲಾಗಿದೆ. ಶಿವಮೊಗ್ಗದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಸೋಂಕಿತರು ಗುಣಮುಖವಾಗಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲು.
ಒಂದೇ ವಾರದಲ್ಲಿ 24 ಮಂದಿ ಗುಣಮುಖ
ಶಿವಮೊಗ್ಗದ ಒಟ್ಟು ಸೋಂಕಿತರು 41. ಈ ಪೈಕಿ ಮೇ 25ರಂದು ನಾಲ್ಕು ಮಂದಿಯನ್ನು ಬಿಡುಗಡೆ ಮಾಡಲಾಗಿತ್ತು. ಮೇ 29ರಂದು ಮೂವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಈಗ ಮೂರನೇ ಹಂತದಲ್ಲಿ 17 ಮಂದಿ ಗುಣಮುಖವಾಗಿ, ಬಿಡುಗಡೆಯಾಗುತ್ತಿದ್ದಾರೆ. ಇದರಿಂದ ಕರೋನ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 17ಕ್ಕೆ ಇಳಿಕೆಯಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
LATEST NEWS
- ಕಾಂಗ್ರೆಸ್ನದ್ದು ‘3-C ಸರ್ಕಾರ’, ಮಿನಿಸ್ಟರ್ ರಾಜೀನಾಮೆಗೆ ಶಿವಮೊಗ್ಗದಲ್ಲಿ ಆಗ್ರಹ, ಏನಿದು ಮೂರು C?

- ಶಿವಮೊಗ್ಗ ಸಿಟಿಯ ವಿವಿಧೆಡೆ ಫೆಬ್ರವರಿ 6, 7ರಂದು ಕರೆಂಟ್ ಇರಲ್ಲ, ಎಲ್ಲೆಲ್ಲಿ? ಕಾರಣವೇನು?

- ಶಿವಮೊಗ್ಗ, ಭದ್ರಾವತಿಯಲ್ಲಿ ತುಸು ತಗ್ಗಿದ ತಾಪಮಾನ, ಉಳಿದ ತಾಲೂಕುಗಳಲ್ಲಿ ಹೇಗಿರಲಿದೆ?

- ಪೂಜಾ ಗೌಡ ನಂಬಿ ಅರ್ಧ ಕೋಟಿ ಹಣ ಕಳೆದುಕೊಂಡ ಶಿವಮೊಗ್ಗದ ಸೇಲ್ಸ್ಮನ್, ಆಗಿದ್ದೇನು?

- ಇವತ್ತು ಸಂಕಷ್ಟ ಚತುರ್ಥಿ, ಒಳ್ಳೆ ಸಮಯ ಎಷ್ಟೊತ್ತಿಗಿದೆ? – ಇಂದಿನ ಪಂಚಾಂಗ

About The Editor
ನಿತಿನ್ ಆರ್.ಕೈದೊಟ್ಲು






