ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | ASSAULT| 05 ಮೇ 2022
ಶಿವಮೊಗ್ಗದ KSRTC ಬಸ್ ನಿಲ್ದಾಣದ ಮುಂಭಾಗ ಶಿವಮೊಗ್ಗ- ಭದ್ರಾವತಿ ಸರ್ಕಾರಿ ಬಸ್ ಕಂಡಕ್ಟರ್ ಮೇಲೆ ವ್ಯಕ್ತಿಯೊಬ್ಬ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಹೆಲ್ಮೆಟ್’ನಿಂದ ಹೊಡೆದಿದ್ದಾನೆ. ಡ್ರೈವರ್ ಮತ್ತು ನಿಲ್ದಾಣಾಧಿಕಾರಿ ಅವರು ಜಗಳ ಬಿಡಿಸಿದ್ದಾರೆ.
ಕಂಡಕ್ಟರ್ ನಾಗರಾಜ್ ಹಲ್ಲೆಗೊಳಗಾದವರು. ನಾಗರಾಜ್ ಅವರು ಶಿವಮೊಗ್ಗ- ಭದ್ರಾವತಿ KSRTC ಬಸ್ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಿಲ್ದಾಣದ ಮುಂದೆ ಭದ್ರಾವತಿಗೆ ತೆರಳುವ ಬಸ್ಸುಗಳು ನಿಲ್ಲುವ ಪ್ಲಾಟ್ ಫಾರಂನಲ್ಲಿ ನಿಂತಿದ್ದಾಗ, ಮನೆಯವರು ಕರೆ ಮಾಡಿದ್ದಾರೆ.
ನಾಗರಾಜ್ ಅವರು ಮೊಬೈಲ್’ನಲ್ಲಿ ಮಾತನಾಡುತ್ತಿದ್ದಾಗ ವ್ಯಕ್ತಿಯೊಬ್ಬ ಏಕಾಏಕಿ ದಾಳಿ ಮಾಡಿದ್ದಾನೆ. ‘ಮೊಬೈಲ್’ನಲ್ಲಿ ಹುಡುಗಿಯರ ಜೊತೆಗೆ ಮಾತನಾಡುತ್ತಿದ್ದೀಯಾ’ ಎಂದು ಆರೋಪಿಸಿ, ತನ್ನ ಬಳಿ ಇದ್ದ ಹೆಲ್ಮೆಟ್’ನಿಂದ ಕಂಡಕ್ಟರ ನಾಗರಾಜ್ ಅವರಿಗೆ ಹೊಡೆದಿದ್ದಾನೆ. ಬಸ್ ಚಾಲಕ ಕೊಳ್ಳಿ ಬಸವರಾಜ್ ಮತ್ತು ನಿಲ್ದಾಣಾಧಿಕಾರಿ ಲಕ್ಷ್ಮಣ್ ಅವರ ತಕ್ಷಣ ಬಂದು ಜಗಳ ಬಿಡಿಸಿದ್ದಾರೆ.
ಜಗಳ ಬಿಡಿಸಿದ ಬಳಿಕ ಹಲ್ಲೆ ನಡೆಸಿದವನ ಹೆಸರು ವಿಚಾರಿಸಿದಾಗ ಚಾಂದ್ ಪಾಷಾ ಎಂದು ಗೊತ್ತಾಗಿದೆ. ಕರ್ತವ್ಯದಲ್ಲಿದ್ದಾಗ ತನ್ನ ಮೇಲೆ ಹಲ್ಲೆ ನಡೆಸಿದವನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕಂಡಕ್ಟರ್ ನಾಗರಾಜ್ ಅವರ ದೂರ ನೀಡಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ KSRTC ಬಸ್ ನಿಲ್ದಾಣಕ್ಕೆ ಲ್ಯಾಪ್ ಟಾಪ್ ಜೊತೆ ಬಂದ ವಿದ್ಯಾರ್ಥಿನಿಗೆ ಶಾಕ್
LATEST NEWS
- ಶಿವಮೊಗ್ಗದ ಸೂಳೆಬೈಲ್ ಮಹಿಳೆ ಅರೆಸ್ಟ್, ₹18,00,000 ಮೊತ್ತದ ಆಭರಣ ಸೀಜ್, ಏನಿದು ಕೇಸ್?

- ಶಿವಮೊಗ್ಗ ವಿದ್ಯಾನಗರದಲ್ಲಿ ಅದ್ಧೂರಿ ಜಾತ್ರೆ, ಯಾವ್ಯಾವ ದಿನ ಏನೇನು ನಡೆಯಲಿದೆ? ಹೇಗಿದೆ ಸಿದ್ಧತೆ?

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? | 9 ಮಾರ್ಚ್ 2026

- ಮಾರಿಕಾಂಬ ದೇವಸ್ಥಾನ ಸಮಿತಿಗೆ ನೂತನ ನಿರ್ದೇಶಕರ ಆಯ್ಕೆ, ಯಾರೆಲ್ಲ ಆಯ್ಕೆಯಾಗಿದ್ದಾರೆ?

- ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಏ.14ರವರೆಗೆ ಗಡುವು ನೀಡಿದ ಭದ್ರಾವತಿ ರಾಜು, ಕಾರಣವೇನು?

About The Editor
ನಿತಿನ್ ಆರ್.ಕೈದೊಟ್ಲು





