ಎಟಿಎಂನಿಂದ ಹಣ ತೆಗೆದುಕೊಡುವ ನೆಪದಲ್ಲಿ ಶಿವಮೊಗ್ಗದಲ್ಲಿ ಹೊಳೆಹೊನ್ನೂರು ರೈತನಿಗೆ ಮೋಸ, ಹೇಗಾಯ್ತು ವಂಚನೆ?

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 APRIL 2021 ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ಎಟಿಎಂನಿಂದ ಹಣ ಡ್ರಾ ಮಾಡಿಕೊಡಲು ಸಹಾಯ ಮಾಡುವ ನೆಪದಲ್ಲಿ ಹೊಳೆಹೊನ್ನೂರಿನ ರೈತರೊಬ್ಬರಿಗೆ ವಂಚಕನೊಬ್ಬ 35 ಸಾವಿರ ರೂ. ಮೋಸ ಮಾಡಿದ್ದಾನೆ.

Covid 19 Vaccination Kan poster 1 1

ಶಿವಮೊಗ್ಗದ ಬಿ.ಹೆಚ್‍.ರಸ್ತೆಯ ಎಟಿಎಂ ಕೇಂದ್ರವೊಂದರಲ್ಲಿ ಘಟನೆ ಸಂಭವಿಸಿದೆ. ಹಣ ಡ್ರಾ ಮಾಡಲು ರೈತರೊಬ್ಬರು ಸ್ಥಳೀಯರೊಬ್ಬರ ನೆರವು ಪಡೆದಿದ್ದರು. ಹಣ ಡ್ರಾ ಮಾಡಿದ ಬಳಿಕ ರೈತನ ಎಟಿಎಂ ಬದಲು ಬೇರೊಂದು ಎಟಿಎಂ ಕಾರ್ಡನ್ನು ಆ ವಂಚಕ ರೈತನಿ ಕೈಗಿಟ್ಟಿದ್ದಾನೆ.

ಬಳಿಕ ಸಾಗರದ ಎಟಿಎಂ ಕೇಂದ್ರವೊಂದರಲ್ಲಿ ವಂಚಕ 35 ಸಾವಿರ ರೂ. ಹಣವನ್ನು ವಿಥ್‍ ಡ್ರಾ ಮಾಡಿದ್ದಾನೆ.  ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment