ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIMOGA NEWS, 10 OCTOBER 2024 : ಆಯುಧ ಪೂಜೆಗೆ (Festival) ಶಿವಮೊಗ್ಗದಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಹಬ್ಬದ ಖರೀದಿ ಬಿರುಸಾಗಿದೆ. ಗಾಂಧಿ ಬಜಾರ್, ಗೋಪಿ ಸರ್ಕಲ್, ವಿನೋಬನಗರ ಆರ್ಎಂಸಿ, ಲಕ್ಷ್ಮೀ ಟಾಕೀಸ್ ಸೇರಿದಂತೆ ವಿವಿಧೆಡೆ ಹೂವು, ಹಣ್ಣು, ಕುಂಬಳಕಾಯಿ ಖರೀದಿ ಜೋರಿದೆ.
ಜೇಬಿಗೆ ಬಿಸಿ ಮುಟ್ಟಿಸಿದ ದರ
ಆಯುಧ ಪೂಜೆಯಂದು ಕೃಷಿ ಚಟುವಟಿಕೆಗೆ ಬಳಸುವ ಆಯುಧಗಳು, ಉಪಕರಣ, ಕೈಗಾರಿಕೆ, ಕಚೇರಿಗಳಲ್ಲಿ ಪೂಜೆ, ವಾಹನಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಇದಕ್ಕೆ ಹೂವು, ಹಣ್ಣು, ಕುಂಬಳಕಾಯಿ, ಬಾಳೆ ಕಂದು ಕಟ್ಟಿ ಪೂಜೆ ಸಲ್ಲಿಸಲಾಗುತ್ತದೆ. ಇವುಗಳೇ ದುಬಾರಿಯಾಗಿದ್ದು ಗ್ರಾಹಕರ ಜೇಬಿಗೆ ಬಿಸಿ ಮುಟ್ಟಿಸುತ್ತಿವೆ.

ಕುಂಬಳಕಾಯಿಗೆ ಭಾರಿ ಡಿಮಾಂಡ್ ಇದೆ. ಗಾತ್ರದ ಆಧಾರದಲ್ಲಿ ದರ ನಿಗದಿಯಾಗಿದೆ. ಸಣ್ಣ ಗಾತ್ರದ ಕುಂಬಳಕಾಯಿಗೆ 100 – 200 ರೂ., ಮಧ್ಯಮ ಗಾತ್ರದ ಕುಂಬಳಕಾಯಿಗೆ 350 ರೂ., ದೊಡ್ಡ ಗಾತ್ರದ ಕುಂಬಳಕಾಯಿಗೆ 600 ರಿಂದ 800 ರೂ.ವರೆಗೆ ಇದೆ. ಕೆಲವು ವ್ಯಾಪಾರಿಗಳು ಕೆ.ಜಿ. ಲೆಕ್ಕದಲ್ಲಿ ಮಾರಾಟವಾಗುತ್ತಿದೆ.

ಇನ್ನು, ಸೇವಂತಿಗೆ ಕೆ.ಜಿ.ಗೆ 100 ರೂ. ಇದೆ. ಒಂದು ಮಾರು ಹೂವಿಗೆ 150 ರೂ.ಗಿಂತಲೂ ಹೆಚ್ಚಿದೆ. ಬಾಳೆ ಕಂದು 30 ರೂ. ಮತ್ತು ಅದಕ್ಕಿಂತಲೂ ಹೆಚ್ಚಿದೆ. ಚಂಡು ಹೂವು ಒಂದು ಗುಚ್ಛಕ್ಕೆ 700 ರೂ.ಗಿಂತಲೂ ದುಬಾರಿ ಇದೆ. ಹಣ್ಣುಗಳ ಬೆಲೆಯು ಗ್ರಾಹಕರಿಗೆ ಕಕ್ಕಾಬಿಕ್ಕಿಯಾಗುವಂತೆ ಇದೆ. ಆದರೂ ಹಬ್ಬದ ಖರೀದಿ ಅನಿವಾರ್ಯವಾಗಿದೆ. ಹಾಗಾಗಿ ಗ್ರಾಹಕರು ಶಕ್ತಿ ಮೀರಿ ಚೌಕಾಸಿ ನಡೆಸಿ ಪೂಜಾ ಸಾಮಗ್ರಿ ಖರೀದಿಸುತ್ತಿದ್ದಾರೆ.


ಇದನ್ನೂ ಓದಿ » ಶಿವಮೊಗ್ಗದಿಂದ ಯಾವೆಲ್ಲ ವಿಮಾನ ಎಷ್ಟೊತ್ತಿಗೆ ಹೊರಡುತ್ತವೆ? ಇಲ್ಲಿದೆ ಟೈಮ್ ಟೇಬಲ್
LATEST NEWS
- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

About The Editor
ನಿತಿನ್ ಆರ್.ಕೈದೊಟ್ಲು





