ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
SHIVAMOGGA LIVE NEWS | 1 MARCH 2023
SHIMOGA : ಬೈಕ್ ಅಡ್ಡಗಟ್ಟಿ ಸವಾರನ (Rider) ಮುಖಕ್ಕೆ ಹೊಡೆದು ಕಪ್ಪು ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ಬ ಪರಾರಿಯಾಗಿದ್ದಾನೆ. ಆತನ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗದ ಓ.ಟಿ.ರಸ್ತೆಯ ಆಜಾದ್ ನಗರ 2ನೇ ಅಡ್ಡರಸ್ತೆಯಲ್ಲಿ ಘಟನೆ ಸಂಭವಿಸಿದೆ. ಕೊರಿಯರ್ ಸರ್ವಿಸ್ ಕೆಲಸ ಮಾಡುತ್ತಿರುವ ಮಂಜುನಾಥ್ (28) ಎಂಬುವವರು ದೂರು ನೀಡಿದ್ದಾರೆ. ಆಜಾದ್ ನಗರದ 2ನೇ ತಿರುವಿನಲ್ಲಿ ಕೊರಿಯರ್ ಕೊಟ್ಟು ಬರುವಾಗ ಘಟನೆ ನಡೆದಿದೆ.
ಕಪ್ಪು ಅಂಗಿ ಧರಿಸಿದ್ದ ವ್ಯಕ್ತಿಯೊಬ್ಬ ಮಂಜುನಾಥ್ ಚಲಿಸುತ್ತಿದ್ದ ಬೈಕಿಗೆ (Rider) ಅಡ್ಡ ಹಾಕಿದ್ದಾನೆ. ಬೈಕ್ ನಿಲ್ಲಿಸುತ್ತಿದ್ದಂತೆ ಮಂಜುನಾಥನ ಮುಖಕ್ಕೆ ಆತ ಹೊಡೆದು, ತಕ್ಷಣ ಅಲ್ಲಿಂದ ಓಡಿ ಹೋಗಿದ್ದಾನೆ. ಕೂಡಲೆ ಮಂಜುನಾಥ್ ತನ್ನ ಸ್ನೇಹಿತನಿಗೆ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡಿದ್ದಾನೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಬಳಿಕ ದೊಡ್ಡಪೇಟೆ ಠಾಣೆಯಲ್ಲಿ ದೂರು ನೀಡಿದ್ದಾನೆ.
ಇದನ್ನೂ ಓದಿ – ಮಚ್ಚು ಹಿಡಿದು ಹುಚ್ಚಾಟ, ಅಂಗಡಿಯಲ್ಲಿ ವಸ್ತುಗಳು ಚಲ್ಲಾಪಿಲ್ಲಿ, ಕಾರಿನ ಗಾಜು ಪೀಸ್ ಪೀಸ್, ಒಬ್ಬನ ಮೇಲೆ ದಾಳಿ


CLICK HERE TO JOIN SHIVAMOGGA LIVE WHATSAPP GROUP




